ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
112
ಮಾರುಮಾಲೆ

ಇತ್ತೆಂಬುದನ್ನು ಮುಳಿಯರ ಉಲ್ಲೇಖ ಸೂಚಿಸುತ್ತಿದೆ) ಈ ಉಲ್ಲೇಖಗಳು ಐತಿಹಾಸಿಕ ಮಹತ್ವವುಳ್ಳವುಗಳು.

ಪ್ರಬಂಧಸಾರ ಎಂಬ ಎರಡನೆಯ ಭಾಗದಲ್ಲಿ ಮುಳಿಯರು ಸುಬ್ಬನ ಕೃತಿಗಳಿಂದ ಕೆಲವು ಅಂದವಾದ ಹಾಡುಗಳನ್ನು ಆಯ್ದು, ಅದರ ಜತೆಗೆ ಸಂದರ್ಭವನ್ನೂ, ಪದಪ್ರಯೋಗಗಳ ಸೊಬಗನ್ನೂ ವಿಮರ್ಶಿಸಿ ಸುಬ್ಬನು ಉತ್ಕೃಷ್ಟ ಮಟ್ಟದ ಕವಿಯೆಂಬುದನ್ನು ಸಾಕಷ್ಟು ವಿಸ್ತಾರವಾಗಿ ಹೇಳಿದ್ದಾರೆ. ಈಗ ರೂಢವಾಗಿರುವ ಸುಬ್ಬನ ಪದ್ಯಗಳಿಗಿಂತ ಭಿನ್ನವಾದ ಪಾಠಗಳನ್ನು ಮುಳಿಯರು ಉದ್ಧರಿಸಿದ್ದಾರೆ. ಉದಾ :
ಬೇರು ಕಡಿದ ಮೇಲೆ ಮರ | ವೇರಿ ಚಿಗುರಿ ನಿಗುರಲುಂಟೆ
ನಾರಿಹುಲು ಮನುಜ ರ್ಗಂಜಿ | ಸೋರಿ ಸರಿವೆನೆ ||

(ಸೀತಾಪಹಾರ)


ಸೀತಾಪಹಾರ- ತಂದಲ್ಲದೆ ಬಿಡದೆ ಬುದ್ದಿ ! ಬಂದುದಾದದೆನ್ನೊಳುಹೇ
ರಾವಣ - ಗೆಂದು ಕೇಳ್ವಭಾವ ವೇತ | ಕೊಂದಿತೊ ಕಾಣೆ!
ಮಂಡೋದರಿ ಸಂವಾದ - ತಪ್ಪನರಿಯ ಕೇಳನೇ ಮನ | ಕೊಟ್ಟಿದುದನು ಪೇಳ್ವೆನೆಂದು
ದರ್ಪದಿಂದ ದಾನವೇಶ | ನುಪ್ಪವಡಿಸಿದ ||
--ಈ ಅಧಿಕ ಪಾಠವಂತೂ ತುಂಬ ಮಾರ್ಮಿಕವಾದದ್ದು.
ವಾಲಿ ಸಂಹಾರದ - ವಾನರಧಿಪತಿ ನೀ ಕೇಳೆನ್ನ ಮಾತ |
ರಾಮನು ವಾಲಿಗೆ ಹೇಳಿದ ಸಮಾಧಾನ - ನೀ ನಿನ್ನನೆಣಿಸಿ ಜರೆವುದಿಂದ್ರಜಾತ
ಮಾನವಲ್ಲದ ಧರ್ಮಘ್ನರ ತಲೆ ಕಡಿದು |
ಕೋಣಿ ಭಾರವ ನಿಳುಹುವೆವ ಬಿರುದು
...ಮಾಯಾ ಮಾಲಿನ್ಯವ ನುಳಿಸೊಲ್ಲ....
ಒಂದೇ ಬುದ್ಧಿಯೊಳೆಲ್ಲ ಸತ್ಯಾನುಸಾರ | ದಿಂದಿರು ತುಣುವುದು ಸಂಸಾರಸಾರ