ಪುಟ:ಮಾಲತಿ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫

ಯುವಕನಿಗೆ ಹೆಂಡತಿಯಮೇಲೆ ಇದ್ದ ಪ್ರಣಯವು ಸ್ವಲ್ಪವೂ ಕಡಿ
ಮೆಯಾಗಿರಲಿಲ್ಲ. ಅವಳ ಮಾತುಗಳನ್ನು ಕೇಳಿ ಅವನ ಮನಸ್ಸು ಕರಗಿ
ಹೋಯಿತು. ಅವನು ಉಕ್ಕಿಬಂದ ಅಶ್ರಜಲವನ್ನೊರಸಿಕೊಂಡು,'ಶೋಭನೆ!
ನಾನೇನನ್ನು ಹೇಳಿದರೂ ಪ್ರಕಾರಾಂತರವಾಗಿ ತಿಳಿಯಬೇಡ; ನನಗೆ ಉಂಟಾ
ಗಿದ್ದ ತೀವ್ರಯಾತನೆಯಿಂದ ಮಾತುಗಳು ಹೊರಗಾದುವು; ನೀನು ನಿನ್ನ
ಮನಸ್ಸಿನಲ್ಲಿದ್ದುದನ್ನೆಲ್ಲಾ ಬಿಚ್ಚಿ ಹೇಳಿದುದು ಒಳ್ಳೆಯದಾಯಿತು; ನಿನ್ನ ಮನ
ಸ್ಸಿನಲ್ಲಿ ಮತ್ತೇನಿದ್ದರೂ ಹೇಳಿಬಿಡು; ಮುಚ್ಚು ಮರೆ ಮಾಡಬೇಡ'ವೆಂದು ಹೇಳಿದನು. ಶೋಭನೆ - ಎಲ್ಲಾ ಹೇಳಬೇಕೆಂದು ಇರುವಾಗ ಆವದನ್ನೂ ಮರೆ ಮಾಡುವುದಿಲ್ಲ ; ಅದರಿಂದ ನನ್ನ ಅದೃಷ್ಟದಲ್ಲಿದ್ದುದು ಆಗಿಹೋಗಲಿ; ಏನು ಬಂದರೂ ಸಹಿಸಿಕೊಳ್ಳುವುದಕ್ಕೆ ಸಿದ್ಧವಾಗಿದ್ದೆ “ನೆ; ಎಲ್ಲವನ್ನೂ ಕೇಳಿ ಈ ಪಾಪಿಯಾದವಳಿಗೆ ನಿಮ್ಮ ಚರಣದಲ್ಲಿ ಸ್ಥಳ ವಂ ಕೊಡಬಹುದಾದರೆ ಕೊಡಬಹುದು, ಇಲ್ಲವಾದರೆ ಸಾಯುವುದಕ್ಕೆ ಸಿದ್ದವಾಗಿದ್ದೇನೆ; ಸಾಯು ವುದಕ್ಕೆನಗೆ ಸ್ವಲ್ಪವೂ ಭಯವಿಲ್ಲ : ರಾತ್ರಿ ಹಗಲು ದೇವರು ನನ್ನನ್ನು ಇಲ್ಲಿಗೆ ಸಾಕುಮಾಡಲೆಂದು ಕೇಳಿಕೊಳ್ಳುತ್ತಿದ್ದೇನೆ; ಅದನ್ನು ದೇವರೇ ಬಲ್ಲ ! ಹೀಗೆಂದು ಹೇಳಿ ತೋಭನೆಯು ಕಣ್ಣೀರನೊರೆಸಿಕೊಂಡಳು. ಯುವಕನು ವ್ಯಥೆಯಿಂದ ಅವಳ ಹೇಳಿಕೆಯನ್ನು ಕೇಳಲು ಎದುರು ನೋಡುತ್ತಿದ್ದನು. ಶೋಭನೆ- ಸೆರಗನ್ನು ಸರಿಮಾಡಿಕೊಂಡು) ಮದುವೆಯಾದ ಹೊಸ ದರಲ್ಲಿ ನೀವು ಸಾಯಂಕಾಲ ಮನೆಗೆ ಬರುತ್ತಲೇ ನನ್ನನ್ನು ನೋಡಬೇಕೆಂ ದಿದ್ದ ಕುತೂಹಲವು ಈಚೆಗೆ ತಪ್ಪಿಹೋಯಿತು. ಆ ಕುತೂಹಲವು ಈಗ ಎಲ್ಲಿ ಹೋಯಿತು ? ಅದಕ್ಕೆ ಬದಲಾಗಿ ಈಚೆಗೆ ಸಂಧ್ಯಾಕಾಲ ಮನೆಗೆ ಬರುತ್ತಲೇ ಆರನ್ನು ನೋಡದಿದ್ದರೆ ವ್ಯಾಕುಲವುಳ್ಳವರಾಗುವಿರಿ ? ಮತ್ತು ಆರನ್ನು ನೋಡಿದರೆ ಆ ವ್ಯಾಕುಲವು ಹೋಗಿ ಮುಖವು ಹರುಷದಿಂದ ಅರೆ ಳುವುದು ? ಅಂತಹ ಅರಳಿದ ಮುಖವನ್ನು ಚಿತ್ರದಲ್ಲಿ ಬರೆದಿಡಬೇಕೆಂದು ೪೦ ದಿ ܩ