ಪುಟ:ರಜನೀ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

78. 18 ಕಳA WVQvJV W\\ • • • \ J / Y Y Y Y 14 | Yxt » \/> >

1 12 •! ! V 2 f\\ \\ VVVVV ಗಿಲ್ಲ. ಅಮರನಾಥನು ಬಿಡುವಹಾಗಿಲ್ಲ. ಅವನು ರಜನಿಯನ್ನು ವಿವಾಹಮಾಡಿ ಕೊಳ್ಳುವುದು ನಿಜ. ಮುಷ್ಕರಹಿರಿದು ಬಿದ್ದು ಮಾಡುತ್ತಾನೆ. ಒಳ್ಳೇದು, ಅಮರನಾಥನು ಯಾರು ? ಹೆಣ್ಣನ್ನು ದಾನಮಾಡುವವನು ತಂದೆತಾಯಿಗಳ ಹಾಗಿರುವ ಚಿಕ್ಕಮ್ಮ ಇವರು ಮುಂದಾಗುವುದು ಸರಿಯಾದುದು, ಅವ ರೆಲ್ಲಾ ನನ್ನ ಕಡೆಗೆ ಇದ್ದ ಮೇಲೆ ಅಮರನಾಥನು ಮುಷ್ಕರಹಿಡಿದರೆ ಅದರಿಂದ ಆಗುವುದು ತಾನೇ ಏನು ? ಅವನು ಅವಳಿಗೆ ಆಸ್ತಿಯನ್ನು ಕೊಡಿಸಿರುವುದು ನಿಜ. ಆ ಮೆಹನತ್ತಿಗೆ ಸಾವಿರ ಎರಡುಸಾವಿರ ಕೊಟ್ಟರೆ ಸಾಕು. ನಾವುಗೊತ್ತು ಮಾಡಿಕೊಂಡ ಹುಡುಗಿಯನ್ನು ಅಮರನಾದನು ಮದುವೆಮಾಡಿಕೊಳ್ಳಬಾರದೆ ? ಮರನಾಥನಿಗೆ ನಿಜವಾಗಿಬಹಳ ಹೊಟ್ಟೆಕಿಚ್ಚು, ನಾನೊಂದುಸಲ ಅಮರನಾಥನಿಗೆ ಶಿಕ್ಷೆ ಕೊಟ್ಟಿದ್ದೇನೆ. ಇನ್ನೊಂದು ತಡವೆ ಸಿಕ್ಕಳು, ಕಟ್ಟಿಕೊಡ ವೆನು. ನಾನು ಕಾಯಸ್ಥರ ಹೆಣ್ಣಾಗಿದ್ದರೆ ಅಮರನಾ ಥನಿಂದ ಈ ಹುಡಗಿಯನ್ನು ಬಿಡಿಸಿಕೊಂಡು ನಮ್ಮ ಹುಡುಗನಿಗೆ ಮಾಡಿಯೇ ತೀರು ಶ್ರೀನ ನಾನು ಅಮರನಾಧನ ಗುಣಗಳನ್ನೆಲ್ಲಾ ಚೆನ್ನಾಗಿದೆ. ಅವನು ಅತ್ಯಂತ ಧೂರ್ತ, ಅವನ ಸಂಗಡ ಜಗಳಕ್ಕೆ ನಿಂತರೆ ಬಹಳ ಜಾಗರೂಕತೆಯಿಂದ ಇರಬೇಕು. ನಾನು ಜಾಗರೂಕತೆಯಿಂದಲೇ ಕೆಲಸಕ್ಕೆ ಆರಂಭಿಸಿದೆನು. ಮೊದಲು ರಾಜಚಂದ್ರನ ಹೆಂಡತಿಯನ್ನು ಕರೆಸಿದನು, ಅವಳು ಬಂದು ಏನಮ್ಮ ! ಕರೆಸಿದಿರಿ ? ಎಂದಳು. ನಾನು, ಹೂವಾಡಗಿತ್ತಿ !-ನಾನು ಈಗಲೂ ಹೂವಾಡಗಿತ್ತಿಯಂತಲೇ ಕರೆಯು ತೇನೆ, ಕೋಪಿಸಿಕೊಳ್ಳಬೇಡ, ಕೋಪಿಸಿಕೊಂಡರೂ ಹಾಗೆಯೇ ಕರೆಯುತ್ತೇನೆಂದು ಹೇಳಿದೆ, ಅದಕ್ಕವಳು, ಏನಮ್ಮ ! ಎಂದಳು. ನಾನು-ಹೆಣ್ಣನ್ನು ನಮ್ಮ ಹುಡುಗನಿಗೆ ತಾನೆ ಕೊಡುವುದಕ್ಕೆ ನಿಶ್ಚಯ ಮಾಡಿಕೊಂಡಿದ್ದಿಯಷ್ಟೆ? ಹೂವಾಡಗಿತ್ತಿ-ಆಮಾತೇ ಈಗ ನಡೆಯುತಲಿರುವುದು. ನಾನು-ನಡೆಯುತಲಿರುವುದೆಂದು ಹೇಳುವುದೇತಕ್ಕೆ ? ನನ್ನ ಸಂಗಡ ಆಡಿದ ಮಾತೇನಾಯಿತು ? ಹೂವಾಡಗಿತ್ತಿ-ಏನುಮಾಡಲಮ್ಮ!-ನಾನು ಹೆಣ್ಣು ಹೆಂಗಸು ಅದೆಲ್ಲಾ ನಾನೇನುಬಲ್ಲಿ ?