ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ರಮಾನಂದ
೮೭

ರಂಕಾಸೆ ತನತ್ತು ಸವಿಯ ನಿನಿಸುಳಿದಪುದೇ ”


ಸೌಮ್ಯ:- ಇರಬಹುದು, ಆದರೆ, ಈಗ ನೋಡು; ನಿನ್ನ ಸದುದ್ದೇಶ, ಸತ್ಕಾರ್ಯಗಳಿಗಾಗಿರುವ ಮಹತ್ಫಲವನ್ನು |

ರಮಾ:- ಸೌಮ್ಯನೆ ! ಆತುರಪಟ್ಟ ಮಾತ್ರದಿಂದ ಅಕಾಲದ ಯೇ ನಾವು ಫಲವನ್ನು ಹೊ೦ದುವೆವೆ ? ಅದಕ್ಕೂ ದೈವಾನುಕೂಲ 5 ವುಂಟಾದ ಮೇಲೆಯೇ ಫಲವು ದೊರೆವುದೆಂದು ಆರ್ಯರು ಹೀಗೆ ಹೇಳಿಲ್ಲವೇ ?

ಕಂದ | ಅಳವಂ ಮೀರಿಬಳಲ್ದೇ ||
ನೆಳಸಿದ ಕಟ್ಟಿಮನುಕೂಲ ಕಾಲದೆ ಫಲಿಕುಂ || ನಳನಳಿಸಿ ಬೆಳದೊಡಂ ತರು |
ಫಳಮಂ ತಳೆದಪುದೆ ಕ್ಲಿಪ್ತ ಕಾಲಕೆ ಮುನ್ನಂ ||"


ಯುವಾನ:- ಅದು ಯುಕ್ತವೇ ಸರಿ. ಆದರೂ ಮನಸ್ಸು ನಿಲ್ಲು ವದು ಮಾತ್ರ ಕಷ್ಟ.

ರಮಾ :-- ಮನಸ್ಸು ನಿಲ್ಲುವುದಿಲ್ಲ ವೆಂದು ಅದು ಹೋದಂತೆ ಬಿಡುವುದು ನಮ್ಮ ಶೀಲವಲ್ಲ, ಅದನ್ನು ನಮ್ಮ ಬುದ್ಧಿಯ ವಶದ 15 ಲ್ಲಿಟ್ಟು, ನಾವು ಜಾಗೃತರಾಗಿರಬೇಕಾದುದು ಅವಶ್ಯಕವು. ಅದಿರಲಿ, ಸುಮುಖನನ್ನು ನೀನು ನೋಡಲಿಲ್ಲ ವೇನು ?
ಯುವಾನ:- ಇಲ್ಲ. ಆತನು ಎಲ್ಲಿ ರುವನೋ, ಮನೆಗೇನಾ ದರೂ ಹೋಗಿರುವನೋ ತಿಳಿಯಲಿಲ್ಲ.
ರಮಾನಂದ:- ಎಲ್ಲಿದ್ದರೂ ಬಂದೇಬರುವನು ಭಗವಂತನು 20 ನಮ್ಮನ್ನು ಕೈ ಬಿಡಲಾರನೆಂಬ ಭರವಸೆ ನನಗೆ ಚೆನ್ನಾಗಿದೆ. ಇನ್ನು ನಡೆಯಿರಿ, ಮಂದಿರಕ್ಕೆ ತೆರಳುವ.

( ಮೂವರೂ ಹೊರಟು ಗಮನವನ್ನಭಿನಯಿಸಿ ಮುಂದೆ ಬರುವರು. )


ಯುವಾನ:- ರಮಾನಂದ | ಸ್ವಲ್ಪನಿಲ್ಲು , ಯಾರೋ ಇತ್ರ ಕಡೆಗೇ ನಡೆತರುವಂತೆ ತೋರುತ್ತಿದೆ. 25 {{rh|center=|left=|right=