ಪುಟ:ರಮಾನಂದ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ ೧೦೭ ಉಪಾ:-(ಆತುರದಿಂದ) 'ಹಾಗಿದ್ದರೆ, ವಿಳಂಬವೇಕೆ ? ಈಗಲೇ ತೋರಿಸು: ರಮಾನಂದನ ಸತ್ಯಸಂಧತೆಯನ್ನು ಸಪ್ರಮಾಣವಾಗಿ ಪ್ರಸಿದ್ಧ ಪಡಿಸು.' ಕ್ಷೇಮ:- ಇಷ್ಟೇಕೆ ಆತುರ ಸಡುವಿರಿ ? ಸಾವಧಾನದಿಂದ ಪರಾಮರ್ಶಿಸಬೇಕು.' (ಪಕ್ಕಕ್ಕೆ ತಿರುಗಿ) " ಏನಯ್ಯ ರವಿವರ್ಮ ! ಈಗ 5 ಹೇಳು; ರಮಾನಂದನ ಪೆಟ್ಟಿಗೆ, ಹಾಸಿಗೆಗಳಿಗೆ ಮಧುಕರಿಯ ಪತ್ರವೂ ಭಾವಚಿತ್ರವೂ ಹೇಗೆ ಸೇರಿದುವು? ರವಿ:-ನಾವೇನನ್ನು ಹೇಳಬಲ್ಲೆ ವ? ತಿಳಿಯದ ವಿಷಯವನ್ನು ಕೇಳಿದರೆ ಉತ್ತರವನ್ನು ಕೊಡುವದು ಹೇಗೆ? ಕ್ಷೇಮ:- ನಿಜನಿಜ? ನೀವೇನನ್ನೂ ತಿಳಿಯಿರಿ, ಬೆಕ್ಕು ಕಣ್ಣು 10 ಮುಚ್ಚಿ ಕೊಂಡೇ ಹಾಲನ್ನು ಕುಡಿಯುತ್ತದೆ. ಯಾರಿಗೂ ಗೊತ್ತಾಗು ವುದೇ ಇಲ್ಲ, ಪಂಪ ಆಗಲಿ; ಮಧುಕರಿಗೆ ನೀವು ಕಾಗದಗಳನ್ನು ಬರೆಯುತ್ತಿದ್ದುದು ನಿಜವಷ್ಟೆ? ರವಿ:-ಹಾಗಂದರೇನು ? ಅವಳಿಗೆ ನಾನೇಕೆ ಬರೆಯುವೆವು ? ಎಲ್ಲಿ ಬರೆದಿರುವೆವು? 15 ಕ್ಷೇಮ:- ಏಕೆ ಬರೆಯಬೇಕೊ, ಎಲ್ಲಿ ಬರೆದಿರೆ ಮುಂದೆ ಗೊತ್ತಾದೀತು, ಅದೂ ಹಾಗಿರಲಿ, ಮಧು ಕರಿಯು ನಿಮಗೆ ಬರೆಯು ತಿದ್ದು ದಾದರೂ ನಿಜವಷ್ಟೇ? ರವಿ:-- ಎಲ್ಲ ವೂ ಸುಳ್ಳು. ಕ್ಷೇಮ:-ಸುಳ್ಳೇ ಆಗಲಿ, ಮಧುಕರಿಗೆ ನೀವೇನೊವಾಗ್ದಾನ 20 ಮಾಡಿರುವಿರಿ, ಅದರಂತೆ ತಕ್ಕಷ್ಟು ಅನುಕೂಲಪಡಿಸುತ್ತಲೂ ಇರು ತೀರಿ. ಅಲ್ಲವೆ? ಕಳಿ೦ಗರಿ ನೀನು ಹೇಳು. ಕಳಿಂಗ:- ಎಲ್ಲ ವೂ ಸುಳ್ಳು, ನಮಗಾಗದವರು ಯಾರೂ ಹೀಗೆ ಆರೋಪಿಸಿರಬೇಕು, ನಾವು ನಿರಪರಾಧಿಗಳು. ಕ್ಷೇಮ:- ನಿಜ! ನೀವು ನಿರಪರಾಧಿಗಳು, ನಿಮ್ಮ ನಿರಪರಾಧಿ 25