ಪುಟ:ರಮಾನಂದ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ ೧af ವುವು, ಅಷ್ಟೆ ಅಲ್ಲ, ಇದರಲ್ಲಿ ಯೇ ಇದ್ದ ಈ ಸಂಪುಟವನ್ನು ನೋಡಬೇಕು, ಇದರಲ್ಲಿ ಇದೋ ತಮ್ಮ ಹಸ್ತಾಭರಣ ಮತ್ತು ಮುದ್ರಿಕೆಗಳಿವೆ. ಇವನ್ನು ತೆಗೆದವರಾರು? ಮಧುಕರಿಗೆ ಮುಟ್ಟಿಸಿ ದಶರಾರು? ಎಂಬವನ್ನು ತಿಳಿಸುವ ಈ ಖಂಡ ಪತ್ರವನ್ನೂ ನೋಡ ಬೇಕು, ಇವಲ್ಲ ದೆ, ಇಲ್ಲಿ, ನಾಟಕಸಂಘಾಧ್ಯಕ್ಷನಿಗೆ ರವಿವರ್ಮನು 5 ಪ್ರಾರ್ಥಿಸಿ ಬರೆದ ಪತ್ರವೂ, ರಮಾನಂದನ ಹೆಸರಿನಲ್ಲಿ ಹುಟ್ಟಿಸಿದ ಮತ್ತೊಂದು ಪತ್ರವೂ ನಾಟಕಸಂಘಾಧ್ಯಕ್ಷನು ನನಗೆ ಇವೆರಡರ ಡನೆ ಕಳಿಸಿರುವ ಇನ್ನೊ೦ದು ಪತ್ರವೂ ಇವೆ. ಇವೆಲ್ಲ ವನ್ನೂ ನೋಡಿ ದರೆ, ರಮಾನಂದನ ನಿರ್ದುಷ್ಟಶೀಲವೃತ್ತಗಳು ನಿರ್ಧರವಾಗುವುವು. ಉಪಾ:- (ಎಲ್ಲವನ್ನೂ ನೋಡಿ ಎದ್ದು ನಿಂತು ಆಗ್ರಹದಿಂದ) * ಈಗ 10 ಹೇಳಿರಿ; ದುರ್ಮಾರ್ಗಿಗಳೆ ಈಗಲಾದರೂ ನಿಜವನ್ನು ಹೇಳಿ, ಕ್ಷಮೆ ಯನ್ನು ಕೇಳಿ, ಮಾನವನ್ನುಳಿಸಿಕೊಳ್ಳಿರಿ. ಈ ತೊಡವುಗಳನ್ನು ತೆಗೆ ದವರಾರು? ಅವಳಿಗೆ ಮುಟ್ಟಿಸಿದವರಾರು? ಯಾವಾಗ ತೆಗೆದಿರಿ? - ರವಿ:- (ಕೊದಲು ನಾಲಿಗೆಯಿಂದ) ನಾನೇ ಕಳಿಂಗನ ಕೈಯಿ೦ದೆ ಯೇ ನಿನ್ನೆ ರಾತ್ರಿ ೪ನೇ ಪ್ರಹರದಲ್ಲಿ ಬೇರೆ ಬೀಗದ ಕೈಯಿಂದಲೇ 15 ತೆಗೆಯಿಸಿ, ಅವಳಲ್ಲಿಗೆ ಕಳಿಸಿದೆನು. ಉಪಾ:-ರಮಾನಂದನ ಕಿರುಮನೆಯಲ್ಲಿ ಇವನ್ನು ಸೇರಿಸಿದ್ದ ವರಾರು? ರವಿ:- ನಾವು ಮೂವರೂ ಸೇರಿ ಮಾಡಿದುದು. ಕ್ಷೇಮ:-ಒಳ್ಳೆಯದು, ಕುಮಾರನೆಲ್ಲಿರುವನು? ಏನುಮಾಡಿ ರುತ್ತೀರಿ? ರವಿ:- ನಾವು ತಿಳಿಯವು. ಕ್ಷೇಮ:-1ಈಗಲೂ ಸುಳ್ಳೇ? ಇರಲಿ ತಿಳಿಯುವಂತೆ ಮಾಡು ವನು.” (ತೆರೆಯ ಕಡೆ ನೋಡಿ) ಎಲಾ ಚಿತ್ರಕ! ಇತ್ತ ಬಾ. 9