ಪುಟ:ರಮಾನಂದ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧o ಸಹಿತೈಷಿಣೀ ಚಿತ್ರಕ:-( ಮುಂದೆ ಬಂದು ಕೈಕಟ್ಟಿ ನಿಲ್ಲುವನು.) ಕ್ಷೇಮ:- ಅಯ್ಯ { ರಮಾನಂದನ ವಿಷಯದಲ್ಲಿ ರವಿವರ್ಮ ಕುಮಾರನೂ, ಕಳಿಂಗ, ನಳರ ನಿರಪರಾಧಿಗಳೆಂದು ನಾನು ಹೇಳು ವೆನು ನಿನ್ನ ಅಭಿಪ್ರಾಯವೇನು? 5 ಚಿತ್ರಕ-ಮಹಾಸ್ವಾಮಿ! ಹುಲಿಯನ್ನು ಸಾಧುವಾದ ಹಸು ವೆಂದು ಹೇಳುವ ತಯ ಕುಮಾರನ ಪಾಣಾಪಹಾರಿಗಳಾದವರನ್ನು ನಿರಪರಾಧಿಗಳೆಂದು ಹೇಳಬಹುದು, ಕ್ಷೇಮ:- ಹೇಗೆ ಹೇಗೆ ? ಇವರಲ್ಲಿ ದೋಷವೇನು? ಏನು ಮಾಡಿದರು ? 10 ಚಿತ್ರಕೆ:-ಮತ್ತೇನೂ ಇಲ್ಲ. ಗುರುಗಳ ಮನೆಯಿಂದ ಒಂಟಿ ಯಾಗಿ ಬರುತ್ತಿದ್ದ ಕುಮಾರನನ್ನು ಹಿಂದಿನಿಂದ ಹೊತ್ತುಕೊಂಡು ಹೋಗಿ ಮ೦ದಾರಣ್ಯದಲ್ಲಿ ಕಡಿದುಹಾಕಿ ಬರಬೇಕೆಂದು ಮಾತ್ರ ನನಗೆ ಕಟ್ಟು ಮಾಡಿದರು. ಕ್ಷೇಮ:- ಈ ಅಧಮಕಾರ್ಯವನ್ನು ಮಾಡಿ ಇವರಿಂದ ನೀನು 15 ಹೊಂದಿದ ಪ್ರತಿಫಲವೇನು ? ಚಿತ್ರಕ:- ಕುಮಾರನ ಮೈಮೇಲಿದ್ದ ಉಡುವು, ತೊಡವುಗಳು ಮತ್ತು ಇಪ್ಪತ್ತು ವರಹಗಳು ನನಗೆ ಪ್ರತಿಫಲವಾಗಿ ಬಂದುವು. ಇವ ಲ್ಲ ದೆ, ಇನ್ನೂ ಹತ್ತು ವರಹಗಳನ್ನು ಕೊಡುವುದಾಗಿ ಮಾತುಕೊಟ್ಟಿ ದ್ದರು. 20 ಕ್ಷೇಮ:- ರಮಾನಂದನ ಸೇವಕನೆಲ್ಲಿ ? ಏನಾದನು? ಚಿತ್ರಕ:- ಅವನೂ ನಮ್ಮನ್ನು ಪ್ರತಿಭಟಿಸಿ, ನಮ್ಮಿಂದ ಕಾಲ ವಾದನು. ಕ್ಷೇಮ:- ಹಾಗಾದರೆ ರಮಾನಂದನನ್ನು ಮಾಡಿದಿರಿ ? ಎಲ್ಲಿ ಬಿಟ್ಟು ಬಂದಿರಿ? 25 ಚಿತ್ರಕ-(ತಲೆ ತಗ್ಗಿಸಿ ನಿಲ್ಲುವನು.)