ಪುಟ:ರಮಾನಂದ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ. ೧೧ ವಿದ್ಯಾ- ಬಂದುದೇನು ? ಕ್ಷೇಮ:- ಶ್ರೀಮಂತನ ಆಜ್ಞಾನುವರ್ತಿಯಾಗಿ ಬಂದಿರುವೆನು. ವಿದ್ಯಾ :- ಉದ್ದೇಶವೇನು ? ಕ್ಷೇಮ:- “ ಮಕ್ಕಳಿಗೆ ತಂದೆ ಬಾಲ್ಯದೊಳಕ್ಕರ ವಿದ್ಯೆಗಳ ನರುಪದಿರ್ದೊಡೆ ಕೊಂದಂ ” ಎಂಬ ನಾಣ್ಣುಡಿಯುಂಟಷ್ಟೆ? ವಿದ್ಯಾ :- ಮತ್ತೇನು ? ಕ್ಷೇಮ:- ಶ್ರೀಮಂತನಿಗೆ ರಮಾನಂದನೆಂಬ ಕುಮಾರನಿರು ವನು. ವಿದ್ಯಾ :- (ತಲೆದೂಗಿ) ಅಭಿಪ್ರಾಯವಾಯಿತು. ಸಂತೋಷ ! ಕ್ಷೇಮ:- ಹಾಗಿದ್ದರೆ, ದರ್ಶನಾಕಾಂಕ್ಷಿಯಾಗಿರುವ ಶ್ರೀಮಂತ 10 ನಲ್ಲಿ ಅನುಗ್ರಹಿಸಬೇಕೆಂದು ಕೋರುವೆನು. ವಿದ್ಯಾ :- ಅಗತ್ಯವಾಗಿಯೂ ಆಗಲಿ, ಮತ್ತೇನು ? ಕ್ಷೇಮ:- ಆತುರನಾಗಿರುವ ಶ್ರೀಮಂತನಲ್ಲಿ ಗೆ ಹೊರಡಲು ಈಗಲೇ ಸುಮುಹೂರ್ತವಾಗಿದೆ. ವಿದ್ಯಾ:- (ಎದ್ದುನಿಂತು) ಹಾಗಿದ್ದರೆ ಹೊರಡಬಹುದು; ನನ್ನ 15 ತಡೆಯಿಲ್ಲ. (ಕ್ಷೇಮದರ್ಶಿಯು ವಿದ್ಯಾವಾಗೀಶನೊಡನೆ ಹೊರಡುವನು.) ಸಾ ನ ೨:-ಶ್ರೀಮಂತನ ಮಂತ್ರಾಲಯ. ( ಮಂತ್ರಾಲಯದಲ್ಲಿ ಕರಣಿಕನೊಡನೆ ಶ್ರೀಮಂತನ ಪ್ರವೇಶ.) ಶ್ರೀಮಂತ:- ಅಯ್ಯ, ವಿನಯಂಧರ ಸಮಾಚಾರವೇನು? 20 ವಿನಯಂ:- ಮಹಾಸ್ವಾಮಿ ! ತಮ್ಮ ಮೈದುನರ ಪತ್ರವು ಬಂದಿದೆ. ಶ್ರೀಮಂತ:→ ವಿಚಾರವೇನಿರಬಹುದೋ ವಾಚಿಸು. ವಿನಯಂ:- (ಕಾಗದವನ್ನು ಬಿಚ್ಚಿ ಓದುವನು.) ( ಪೂಜ್ಯರಾದ ಶ್ರೀಮಂತರ ಸಮ್ಮುಖದಲ್ಲಿ, ವಿಧೇಯನಾದ 25