ಪುಟ:ರಮಾನಂದ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ಸತೀಹಿತೈಷಿಣೀ. ನೀನೇ ವಿದ್ಯಾಧೀಶ್ವರಿಯ ಕೃಪಾಪಾತ್ರನಾದವನು ಮೆಚ್ಚಿದೆ ! ನಿನ್ನ ತಂದೆಯ ಹಿತವಾದವನ್ನು ಮರೆಯದಿರು. - ರಮಾನಂದ:- ( ಭ್ರಾಂತನಂತೆ ನೋಡುತ್ತ, 'ಆರರೆ 1 ವಿದ್ಯಾ ಸ್ವರೂಪ-ಸ್ವಭಾವಗಳನ್ನು ಸ್ವಲ್ಪ ಮಾತ್ರವೂ ತಿಳಿಯಲಾರದಿರುವ ನನಗೆ 5 ಇಷ್ಟರ ಹೊಗಳಿಕೆಯೇಕೆ ! ವಿದ್ಯಾ :- (ಸಂತೋಷದಿಂದ) ಸುಕುಮಾರ ಇದೇ-ಈ ವಿನಯ ಗುಣವೇ ನಿನಗೆ ಭೂಷಣವಾಗಿರಬೇಕು, ನಿಜ, ಈ ವಿನಯದಿಂದಲೇ ನೀವು ಅರ್ಥ ಸಿದ್ಧಿ ಹೊಂದಬೇಕು, ನಿಮ್ಮಲ್ಲಿ ನೂತನಶಕ್ತಿಯುತ್ಪನ್ನ ವಾಗುವಂತೆ ಪ್ರೋತ್ಸಾಹಿಸುವದೇ ನಮ್ಮ ಗುಣವಾಗಿರಬೇಕು, ಅದಿ 10 ರಲಿ; ವಿದ್ಯಾ ಪ್ರಭಾವವನ್ನು ಕೇಳಿದೆಯಲ್ಲ ವೆ? ಹಾಗಾದರೆ ಕೇಳು « ಮುರಿದು ನರಾಧಿಪಂಗೆ ಕೊಳಬಾರದು,.-ಕಿಚ್ಚಿನೊಳೆಯ್ಲಿ ಬೇಯದಿ | ಇರೆ ಮಗುಟ್ಟುತ್ತರೋತ್ತರದೆ ಪೆರ್ಚುವುದಕ್ಕರ ವಿದ್ಯೆ ನೀರೊಳುಂ || ನೆರೆಯದು ಗಾಳಿಯಿಂಕಿಡದು ತಸ್ಕರಭಾಧೆಗಸಾಧ್ಯ ನಿಂತಿದಂ | ಮರೆಯದೆ ನಿಚ್ಚಮೋದು ವುದು, ಓದಲಿಹಕ್ಕೆ ಪರಕ್ಕೆ ಸಾಧನಂ ||” (ಪ.ಸಾ.) 15 ಇಂತಹ ಸುಖಾಧಾರವಾದ ವಸ್ತುವನ್ನು ಪಡೆದು, ಆತ್ಮಾನಂದ ಸಾ ಮ್ರಾಜ್ಯದಲ್ಲಿ ನಲಿದಾಡಬೇಕೆಂಬುದು ಪ್ರತಿಯೊಬ್ಬರಿಗೂ ಇರಬೇಕು. ಈ ಅಭಿಲಾಷೆಯಿಲ್ಲದೆ, ಬರಿಯ ಊಟ ನಿದ್ರೆಗಳಲ್ಲಿ ಯೇ ಬೆರೆದಿರುವ ವರಾರೋ, ಅವರನ್ನು ಯಾರೂ ಮನುಷ್ಯರೆಂದು ಹೇಳಬಾರದು. ಏಕೆಂದರೆ- IC ವಿದ್ಯಾವಿಹೀನಃ ಪಶುಃ ” ಎಂದಿರುವುದು. 20 ರವಾ:- ಪೂಜ್ಯರೆ ಗುರುಜನರಲ್ಲಿ ನಾನು ಮತ್ತೆ ಮತ್ತೆಯ ಕೇಳತಕ್ಕುದೇನು ? ನನ್ನ ಅಭ್ಯುದಯಕ್ಕೆ ತಾವುಗಳೇ ಕಾರಣರಾಗಿ ರುವಿರಲ್ಲವೆ ! ದ್ವಾರಪಾಲಕ:- (ಓಡಿಬಂದು) ಪ್ರಭುಗಳಿಗೆ ಶುಭವರ್ತಮಾ ನವ, ರವಿವರ್ಮ ಕುಮಾರರು ಈಗಲೇ ಬರುತ್ತಿರುವರು. 25 ಶ್ರೀಮಂತ:- (ಚಕಿತನಾಗಿ) ಹಾಗೆಂದರೇನು? ನೆನೆದಂತೆ ಬಂದ