ಪುಟ:ರಮಾನಂದ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ ೧೭ ರನ್ನು ವುದು ಆಶ್ಚರ್ಯ ! ವಿಚಾರವೇನೋ ಇರಬೇಕು, ಇರಲಿ; ಸಂತೋಷ ! ಬೇಗ ಬರಲಿ ! (ದ್ವಾರಪಾಲಕನು ಕೈಮುಗಿದು ಹೊರಟು ಹೋಗುವನು.) (ರವಿವರ್ಮನ ಪ್ರವೇಶ.) ( ರವಿವರ್ಮನು ಶ್ರೀಮಂತನ ಮುಂದೆಬಂದು ತಲೆಬಾಗಿ ನಿಲ್ಲುವನು.) ಶ್ರೀಮಂತ:- (ಕೈಹಿಡಿದು ) ಆಯುಷ್ಯಂತನೆ ಸುಕ್ಷೇಮಿಯಾಗಿ ರುವೆಯಷ್ಟೆ! ರವಿ:- ತಮ್ಮ ಅನುಗ್ರಹದಿಂದ ಇಂದಿನವರೆಗೆ ಸುಕ್ಷೇಮ. ಶ್ರೀಮ೦ತ:- ನಿನ್ನ ಮಾವನು ಸಪರಿವಾರನಾಗಿ ಕುಶಲಿಯ ? ರವಿ:- ಕುಶಲಿ. 10 ಶ್ರೀಮ೦ತ:- ನಿನ್ನ ಮೂವನು ಕಳುಹಿದ ಪತ್ರವು ಇದೇ ನನ್ನ ಕೈ ಸೇರಿತು, ಅದರಲ್ಲಿ ನೀನು ಅಲ್ಲಿ ಯೇ ವ್ಯಾಸಂಗಮಾಡುತ್ತಿರುವು ದಾಗಿ ತಿಳಿದಿತು. ಇದೇನು ಕರೆಯಿಸಿದಂತೆಯೇ ಬಂದೆ ? ರವಿ:-- ಅಲ್ಲಿ ನನ್ನ ವಿದ್ಯಾವ್ಯಾಸಂಗಕ್ಕೆ ಸರಿಯಾದ ಸಹಾ ಧ್ಯಾಯಿಗಳಾಗಲೀ, ಬೋಧಕರಾಗಲೀ ಇಲ್ಲ, ಅಲ್ಲದೆ ನನಗೆ ತಮ್ಮ 15 ಅಸನ್ನಿಧಾನದಲ್ಲಿರಲು ಮನಸ್ಸು ಸಮ್ಮತಿಸಲಿಲ್ಲ, ಇದಕ್ಕಾಗಿ ನನ ದಂತೆ ಹೊರಟು ಬಂದೆನು. - ಶ್ರೀಮಂತ:- ನಿನ್ನ ಮಾವನ ಒಪ್ಪಿಗೆಯನ್ನು ಪಡೆದು ಬಂದೆಯೋ? ಇಲ್ಲವೊ ? ರವಿ:-ಆತನ ಒಪ್ಪಿಗೆಯಿಂದಲೇ ಇಲ್ಲಿಗೆ ಬರುವಂತಾಯಿತು, 20 ಶ್ರೀಮಂತ:- ಒಳ್ಳೆಯದು, ನಾನೇ ನಿನ್ನನ್ನು ಕರೆಯಿಸಿಕೊಳ್ಳ ಬೇಕೆಂದಿದ್ದೆ ನು, ಇದೋ ನೋಡು, ಇವರೇ ಸಾಕ್ಷಾತ್ ಅಭಿನವ ಬೃಹಸ್ಪತ್ಯಾಚಾರರು, ಮಹನೀಯರಾದ ಇವರಲ್ಲಿ ಗುರುಕುಲವಾಸ ಮಾಡಿ, ವಿದ್ಯಾ ಲಾಭವನ್ನು ಪಡೆಯಬೇಕೆಂದು ನಿನ್ನ ನ್ಯೂ , ನಿನ್ನ ಸಹ ಜಾತನನ್ನೂ ಇವರಿಗೆ ಒಪ್ಪಿಸುವುದರಲ್ಲಿ ರುವೆನು, ಮೊದಲು ಇವರಿಗೆ 25