ಪುಟ:ರಮಾನಂದ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ ೨೩ ಲ್ಲವೆ? ಇದಕ್ಕೆ ತಕ್ಕಷ್ಟು, ನಿನ್ನ ವಯೋವಾನಕ್ಕೆ ಒಪ್ಪುವಷ್ಟು ಪ್ರತಿ ಭಾವಿಶೇಷವು ನಿನ್ನಲ್ಲಿರಬೇಡವೆ ? ಚೆನ್ನಾಗಿ ಯೋಚಿಸಿನೋಡು. ಇವುಗಳಲ್ಲಿ ನೀನು ವಿಶೇಷ ಗಮನವಿಟ್ಟು ಶ್ರಮ ಸಹಿಷ್ಣುತೆಯಿಂದ ಅದನ್ನು ಅಭ್ಯಾಸಮಾಡಬೇಕೆಂಬುದೇ ನಮ್ಮ ಮುಖ್ಯ ಆಶಯವಾಗಿದೆ. ಅಷ್ಟೇ ಅಲ್ಲದೆ, ನಿನ್ನಲ್ಲಿ ನಮಗೆ ಉದಾಸೀನಕ್ಕೆ ಕಾರಣವಿಲ್ಲ. ನಿನ್ನ 5 ಶ್ರೇಯೋಭಿವೃದ್ಧಿಗಾಗಿ ನಿನ್ನ ತಂದೆ ಪಡುತ್ತಿರುವ ಶ್ರಮವನ್ನು ಇಲ್ಲಿ ನಿನಗೆ ಹೇಗೆ-ಎಷ್ಟೆಂದು ವಿವರಿಸಿ ತಿಳಿಸಲಿ? ಮಗುವೆ! ಇನ್ನಾದರೂ ಸಮಾಧಾನವನ್ನು ಹೊಂದು, ನಿನ್ನ ಒಡಹುಟ್ಟಿದವರಲ್ಲಿ ಮರುಕವನ್ನೂ, ನಿನ್ನ ಒಡನಾಡಿಗಳಲ್ಲಿ ಆಕೃತಿಮ ಸ್ನೇಹವನ್ನೂ, ನಿನ್ನ ಅನ್ಯ ವರ್ಗದಲ್ಲಿ ವಿಶ್ವಾಸಗೌರವವನ, ನಿನ್ನನ್ನು 10 ಹೆತ್ತ ತಾಯಿತಂದೆಗಳಲ್ಲಿ ಮತ್ತು ಇತರ ಗುರು ಜನರಲಿ ದೈವಿಕ ಪ್ರೇ ಮದ ವಿಶುದ್ಧವಾದ ಭಕ್ತಿಭಾವವನ್ನೂ ಪ್ರದರ್ಶಿಸುವುದು ನಿನ್ನ ಮುಖ್ಯಧರ್ಮವೆಂದು ಚೆನ್ನಾಗಿ ನಂಬು, ಸುಕುಮಾರ ಮತ್ತೇನು ಹೇಳಲಿ? ರವಿ:- (ಕಲೆದೂಗುತ್ತ) ಅಮ್ಮ ! ನೀವು ಏನನ್ನು ಹೇಳಿದರೂ 15 ಕೇಳಲು ಹಿಂತೆಗೆಯುವವನಲ್ಲ, ಮತ್ತೆ ಯಾರ ವಿಚಾರದಲ್ಲಿ ಯಾ ದರೂ ನಾನು ಅವಿಧೇಯನಾಗಿರುವೆನಲ್ಲದೆ, ನಿಮ್ಮ ವಿಚಾರದಲ್ಲಿ ನನ್ನ ಮನೋಭಾವವು ಹೇಗಿರುವುದೆಂಬುದನ್ನು ಮಾತ್ರ ಹೇಳಿ ತಿಳಿಸ ಲಾರೆನು. - ವಸು:- ( ಆನಂದೋದ್ರೇಕದ ಗದ್ಧ ದಸ್ವರದಿಂದ) : ಸುಕುಮಾರ 20 ನಮ್ಮ ವಿಚಾರದಲ್ಲಿ ಈಗ ನಿನಗಿರುವ ಗೌರವವೇ ಮುಂದೆಯ, ಎಂದೆಂದೂ ಸ್ಥಿರವಾಗಿರುತ್ತಿದ್ದರೆ, ನೀನು ಸುಪು ಆನೆನ್ನಿಸುವುದರಲ್ಲಿ ಸಂಶಯವಿಲ್ಲ. ಆದರೆ ಈ ಕಾಲದ ಸೊಕ್ಕಿನ ಮಕ್ಕಳಂತೆ, ಕೇವಲ ತಮ್ಮ ಕಾರ ಸಾಧನೆಯಾಗುವವರೆಗೆ ಮಾತ್ರ ಎಂದರೆ - ತಮ್ಮ ಬಾಹುಗ ಇಲ್ಲಿ ಶಕ್ತಿಯ ಅಂತರಂಗದಲ್ಲಿ ಇಂದ್ರಿಯಪಟುತ್ವವೂ ಅವುಗಳನ್ನು 25