ಪುಟ:ರಮಾನಂದ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ ೩೧ ವಸುಮತಿ:- ಆರ ಪುತ್ರ! ಮಧ್ಯಾಹ್ನ ಕಾಲವ ಸಮಾಹಿತವಾ ಗಿದೆಯೆಂದು ಸೂಚಿಸುವ ಭೇರೀ ತಾಡನದೇ ಕೇಳುತ್ತಿರುವದು. ಸುಕುಮಾರರು ಗುರುಕುಲವಾಸಕ್ಕಾಗಿ ತೆರಳುವವರಾಗಿರುವರು, ಪರ ಮಕಲ್ಯಾಣಗುಣಸ್ವರೂಪರಾಗಿ ಸಾಕ್ಷಾತ್ಕರಿಸಿರುವ ಈ ಮಹನೀಯ ರನ್ನು ಈ ವೇಳೆಯಲ್ಲಿ ಹಾಗೆಯೇ ಬೀಳ್ಕೊಡುವುದು ಸರಿಯಾಗಿ 5 ಕಾಣುವುದಿಲ್ಲ. ಶಿಷ್ಯರೊಡನೆ ಗುರುವರ್ಯರೂ ಆಗ್ನಿ ಕಕ್ರಿಯೆಗಳನ್ನು ನೆರೆವೇರಿಸಿ, ಭಗವದಾರಾಧನೆಯನ್ನು ಯಧಾವಿಧಿಯಾಗಿ ನಡೆಯಿಸಿ, ನಮ್ಮ ಸತ್ಕಾರವನ್ನೂ ಸ್ವೀಕರಿಸಿ, ಆ ಬಳಿಕ ಪ್ರಯಾಣವನ್ನು ಬೆಳೆಯಿಸ ಬಹುದೆಂಬುದು ನನ್ನ ಪ್ರಾರ್ಥನೆಯಾಗಿದೆ. ಶ್ರೀಮಂತ:- (ವಿದ್ಯಾವಾಗೀಶನ ಕಡೆಗೆ ತಿರುಗಿ) ದೇವಿಯ ಪ್ರಾರ್ಥ 10 ನೆಯನ್ನು ಅಂಗೀಕರಿಸಬೇಕೆಂದು ಕೋರುವೆನು. ವಿದ್ಯಾ :- (ಸಂತೋಷದಿಂದ) ಹಾಗೆಯೇ ಆಗಲಿ, ನಡೆಯಿರಿ; ಎಲ್ಲರೂ ಒಟ್ಟಾಗಿ ದೇವರ ಪ್ರಾರ್ಧ ನೆಯನ್ನು ನಡೆಯಿಸುವ. (ಎಲ್ಲರೂ ಕರಳುವರು.) ಭಗವತ್‌ ಪ್ರಾರ್ಥನೆ. ರಾಗ ( ಸಾಕೇಳಿದೂರು, ©ಕಲ ) ಸಾಕೇತಾಧಿಸ-ಶ್ರೀಕರರೂಪ-ಜಿತಕೊಪ-ಸತ್ವ ಸ್ವರೂಪ ||ಪ|| ಕರಧೃತಜಾಪ-ಖಂಡಿತ ತಾಪ | ಕವಿಜನಾಲಾಪ-ಫಾಹಿ ಪರಂತಪ || ಸಾಕ ತಾ ||೧|| ಅರಿಜನ ಭೀಕರ-ಕರಿವರ ಶ್ರೀಧರ | ವರದಾಭಯಕರ_ಪರಮ ಕೃಪಾಕರ || -ಸಾಕೇತಾ ||೨|| ಇನಕುಲ ಮಂಡನ- ವನರುಹಭೋಚನ | ಭವಬಂಧ ಮೋಚನ- ಭರ್ಕ್ತಾ ಭಂಜನ | -ಸಾಕೇತ 1311 ಕ್ರೀನಾಥರಾಘವ- ಸತತಸು ಭವ | ಸುತಶೇಷಗಿರೀಧವ-- ವಿಜಿತಮನೋ ಭವ 11, -ಸಾಕೇತಾ ||೪|| ಇಷ್ಟಕ್ಕೆ ಪ್ರಥಮಾಂಕವು~