ಪುಟ:ರಮಾನಂದ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬ ಸತೀಹಿತೈಷಿಣೀ, ರೆಂದೂ ನನ್ನ ಅಂತರಾತ್ಮವು ಹಗಲೂ ಇರಳೂ ಕೊರಗಿ ಕೊರಗಿ ಬೇಸತ್ತು ಹೋಗುತ್ತಿರುವುದು, ಇದಕ್ಕೇನು ಮಾಡಲಿ ? ಉಪಾಯ ವೇನು ? ನಳ:- ವಿ.ತ್ರನೆ ವೃಧಾಶೋಕದಿ೦ದ ಫಲವಿಲ್ಲ. ಮಾಡಬೇ 5 ಕಾದುದೇನಿದ್ದರೂ, ಚರ್ಚಿಸಿ ಮಾಡುವುದರಿಂದ ಲಾಭವುಂಟು, ಈ ಸ್ಥಳವು ನಮ್ಮ ಮಂತ್ರಾಲೋಚನೆಗೆ ತಕ್ಕುದಾಗಿರುವುದರಿಂದ, ಇಲ್ಲಿಯೇ ಕುಳಿತು, ಸಾವಧಾನವಾಗಿ ಸಮಾಲೋಚಿಸುವ? ಕಳಿಂಗ:-ಸಹಜ, ಇದೊ ಇಲ್ಲಿರುವ ಕಲ್ಲು ಮಂಟಪದಲ್ಲಿ ಕುಳಿತು, ನಮ್ಮ ಕೆಲಸಗಳನ್ನು ನಿರ್ಧರಿಸಬಹುದು. 10 ರವಿ:- ಹಾಗಿದ್ದರೆ ಬನ್ನಿರಿ, (ಮಿತ್ರರೊಡನೆ ಮುಂದೆಬಂದು ಕುಳಿತು) ನನ್ನ ಪ್ರಾಣಾಪ್ತಮಿತ್ರರೆ! ನನಗೆ ತಾಯಿತಂದೆಗಳೇ ಮೊದಲಾದ ಸಮಸ್ತ ಬಾಂಧವರಿಗೂ ಹೆಚ್ಚಾದ ಆಪ್ತರೇ ನೀವೆಂದು ನಂಬಿರು ವೆನು. ಇದನ್ನು ನಾನು ತ್ರಿಕರಣಶುದ್ಧವಾಗಿ ಹೇಳಿದ ಮಾತೆಂದು ನಂಬಿರಿ. 15 ನಳ:-ಆಯುಷ್ಯಂತನೇ ಇದೇನಿ೦ದು ಇಷ್ಟು ಕಾತರನಾಗಿ ರುವೆ ? ನೀನಿದನ್ನು ಬಾಯ್ದೆರೆದು ಹೇಳಬೇಕೆ ? ನಿನ್ನ ವಿಶ್ವಾಸವು ಎಷ್ಟರದೆಂಬುದನ್ನು ನಾವು ಅರಿತಿಲ್ಲವೇ? ಸುಮ್ಮನೇಕೆ ಬಳಲುವೆ? ಯಾವ ವಿಚಾರವಿದ್ದರೂ ನಮ್ಮಲ್ಲಿ ಸಂಪೂರ್ಣ ಭರವಸೆಯಿಟ್ಟು ಹೇಳು, ನಮಗೆ ತೋರಿದಂತ ಸರಿಪಡಿಸುವೆವು. 26 ರವಿ:-(ನಳನ ಕೈಹಿಡಿದು) ನಳನೆ? ಆ ದುರಭಿಮಾನಿಯಾದ ರಮಾ ನಂದನು ನನಗೆ ಪ್ರಬಲ ವೈರಿಯಾಗಿದ್ದಾನೆಂಬುದು ನಿಮಗೆ ತಿಳಿದೇ ಇದೆಯಷ್ಟೆ? ನಳ-ಕಳಿ೦ಗ:-ಬಲ್ಲೆವು, ಬಲ್ಲೆವು.. ರವಿ:- ಅವನು ತಾನೇ ತಾಯ್ತಂದೆಗಳ ಮತ್ತು ಗುರುಗಳ 25 ಪೂರ್ಣಾನುಗ್ರಹಕ್ಕೆ ಪಾತ್ರನಾದವನೆಂಬ ಹೆಮ್ಮೆಯಿಂದಲೂ ತಾನೊ