ಪುಟ:ರಮಾನಂದ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮ ಸಹಿತೈಷಿಣೀ, ರವಿ:-ಇಲ್ಲ, ಹಾಗೆ ನನ್ನೊಡನೆ ಕದನಕ್ಕೆ ಬಂದಿದ್ದರೆ, ಆತನಿಗೆ ಆಗಲೇ ಸರಿಯಾದ ಪ್ರಾಯಶ್ಚಿತ್ತವನ್ನು ತೋರಿಸುತ್ತಿದ್ದೆ, ಅದನ್ನು ಅವನೇನೂ ತಿಳಿಯದವನಲ್ಲ. ನಳ:-ಹಾಗಾದರೆ ಮತ್ತೇನು ಮಾಡಿದನು? 5 - ರವಿ:- ತನ್ನ ಪ್ರೌಢಿಮೆಯನ್ನು ಕುರಿತು ಹೊಗಳಿಕೊಳ್ಳುತ್ರ, ನನ್ನ ನ್ನು ವಾಕ್ಸಲ್ಯದಿಂದ ಬಲವಾಗಿ ನೋಯಿಸಿದನು. ನಳ:-(ಕುತೂಹಲದಿಂದ) ಏನೆಂದು ಹೇಳಿದನು? ಬಿಚ್ಚಿ ಹೇಳ ಬಹುದಷ್ಟೆ? ರವಿ:- ಕಳ್ಳನಾಗಬೇಡ; ಸುಳ್ಳುಗಾರರೊಡನೆ ಸೇರಬೇಡ; 10 ಮೈಗಳ್ಳರೊಡನಾಡಿ, ಮೇಲಾದ ವಿದ್ಯೆಯನ್ನು ತೊರೆಯಬೇಡ; ತಾಯ್ತಂದೆಗಳ ಶೋಕಕ್ಕೆ ನೀನೆಂದಿಗೂ ಕಾರಣನಾಗಬೇಡ.” ಹೀಗೆ ಹೇಳಿ ನನ್ನನ್ನು ನಿರ್ಲಕ್ಷವಾಗಿ ಕಂಡು ಅಗೌರವಪಡಿಸಿದನು. ಕಳಿಂಗ:-ಆಹಾ! ಹೀಗೂ ಹೆಮ್ಮೆಯುಂಟೋ? ಇರಲಿ, ಈ ಹೆಮ್ಮೆಯು ಎಲ್ಲಿಯವರೆಗೆ ನಿಂತಿರುವುದೆಂಬುದನ್ನು ನಾನೂ ನೋಡದೆ 15 ಹೋಗುವುದಿಲ್ಲ! ನಳ:- ಅಯ್ಯ! ಆತನು ನಿನಗೇನೂ ಅಹಿತವನ್ನು ಹೇಳಿಲ್ಲ ಅದನ್ನು ಹೇಳಿರುವುದು ನಿನ್ನ ಸಂಗಡಿಗರಾದ ನಮ್ಮನ್ನು ಕುರಿತು ಹೇಳಿದ ಮಾತಾಗಿದೆ. ಇದಕ್ಕೆಕೆ ನಿನಗೆ ಚಿಂತೆ? - ರವಿ:-(ನಿಟ್ಟುಸಿರಿಟ್ಟು) ಅಯ್ಯ, ಮಿತ್ರನೆ! ಕೈ, ಕಾಲು, ಕಣ್ಣು. 20 ಕಿವಿಗಳಲ್ಲಿ ಯಾವುದಕ್ಕೆ ಏಟುಬಿದ್ದರೂ, ಆತ್ಮನು ಕೇಶಪಡುವ ನಲ್ಲ ವೆ? ಏಕದೇಹಾಯದಿಂದ ವರ್ತಿಸುತ್ತಿರುವ ನಮ್ಮಲಿ ಯಾವ ಒಬ್ಬನನ್ನು ಹಳಿದರೂ, ನಮಗೆಲ್ಲರಿಗೂ ಅದು ಸೇರಿದಂತಲ್ಲವೇ? ಇದರಿಂದ ನಮ್ಮ ಚಿತ್ರವು ಅಸಮಾನಾಗ್ನಿಗೆ ತುತ್ತಾಗಿ ತಪಿಸುವುದೂ ಸ್ವಭಾವವಲ್ಲ ವೇ? ಕಳಿಂಗ:-ಓಹೋ! ಸಂದೇಹವೇ ಇರುವುದಿಲ್ಲ. ಇದು 25