ಪುಟ:ರಮಾನಂದ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ ರ್೪ ಲಕ್ಷಣವು, ಬುದ್ದಿಹೀನರಿಗೆ ಅದು ಸರಿತೋರುವುದು ಹೇಗೆ ? ಸೌಮ್ಯ: ಅಯ್ಯ! ಯುವಾನನ ವಿವೇಕಶೂನ್ಯರಿಗೆ, ಕಿಡು ಕರ ಕುಹಕಿಗಳು ಕಿವಿಗಿಂಪಾಗಿ ತೋರುವಂತೆ, ಹಿತೈಷಿಗಳ ಹಿತಬೋಧೆಯು `ರುಚಿಸುವುದಿಲ್ಲ. ಸುಮುಖ:- ಸಹಜವಾಗಿಯೇ ಇದೆ, ನೆಳಲಂತ ತನ್ನ ನೈ 5 ನೆರೆನಂಬಿ ಸೇವಿಸುತ್ತಿರುವ ಸಾದ್ವಿಮಣಿಯಾದ ಪತ್ನಿಯನ್ನು ನಿರಾಕ ಡಿಸಿ, ವಾನ, ಧನ, ಕೀರ್ತಿ, ಭೋಗ್ಯ ಸಂಪದಗಳೆ೦ಬ ಸರ್ವಸ್ವವನ್ನೂ ಸೂರೆಗೊಳ್ಳುವ ವಾರವನಿತೆಯರಲ್ಲಿ ಮರುಳಾಗುವುದು, ದುರ್ಜನರ ಸ್ವಭಾವವೇ ಸರಿಯಷ್ಟೆ. ಇದಕ್ಕೆ ಮತ್ತೊಂದು ನೀತಿಯ ಉ೦ಟು, ಕಂದು ಧರೆಯೊಳ್ ಸುಕಳತ್ರಂ | 10. ತನಗಿರೆಯುಂ ಪರದಾರಸಕ್ತ ನಪ್ಪಂ ನೀಚಂ | ಸರದೊಳ್ ವರಜಲಮಿರೆಯುಂ | ಕರಟಿಂ ಕೂಳೆನೀರನೆಳೆಪುದಕ್ಕೆ ಸುಬುದ್ಧಿ' || (ಸ, ಶ.) ಸೌಮ್ಯ: -'ಕಿಡುವವಗೆ ಹಿತರಿಲ್ಲ ; ಸಾಯುವವಗೆ ಮದ್ದಿಲ್ಲ ಎಂಬ ಗಾದೆಯು, ಅದೇನು, ಸುಮ್ಮನೆ ಹುಟ್ಟಿತೆ? ಸುಮುಖ:- (ವಿನಾಶಕಾಲೇ ವಿಪರೀತ ಬುದ್ಧಿ: ' ಎಂಬಂತ ಆತನ ಮತ್ತು ಆತನ ಸಹಚರರ ಈ ದುರಾಚಾರವು ಅವರ ವಿನಾಶಕ್ಕೆ ಕಾರಣವೇ ಆಗಿದೆ. ರಮಾ:- (ನಿಟ್ಟುಸಿರಿಟ್ಟು) ಸನ್ನಿತರೇ ! ಭಗವತ್ಸ ಹಾಯವಿದ್ದರೆ, ಅವರನ್ನು ಸನ್ಮಾರ್ಗಕ್ಕೆ ತಿರುಗಿಸದೆ ಬಿಡಲಾರೆನೆಂದು ಸಂಕಲ್ಪಿಸಿರು 20 ತೇನೆ. ಸೌಮ್ಯ:- ಆ ವಿವೇಕಶೂನ್ಯರಾದ ಗೋಮುಖವ್ಯಾಘ್ರರು, ನಿನ್ನ ಉಪದೇಶಕ್ಕೆ ಕಿವಿಗೊಡುವರೆಂದೆಣಿಸಿದೆಯೋ? ಎಂದಿಗೂ ಅದು ಸಾಗದ ಮಾತು, ಸುಮ್ಮನೇಕೆ ಬಳಲಬೇಕು? ರಮ:-(ನಕ್ಕು ಪ್ರಯತ್ನ ಪಡದೆಯೇ, ಅದು ನಮಗೆ ಅಸಾಧ್ಯ 25 15