ಪುಟ:ರಮಾನಂದ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܫ ಸಹಿತೈಷಿಣೀ ಪ್ರಯತ್ನ ಪಟ್ಟ ಮಾತ್ರಕ್ಕೆ ಎಲ್ಲವೂ ಫಲಕಾರಿಯಾಗುವುದೆಂದು ಈಗ ತಿಳಿದೆನು. ರಮಾ:~ ಹಾಗಲ್ಲ; ಧರ್ಮ ವಿರುದ್ಧವಲ್ಲದ ಮತ್ತು ಪರರಿಗೆ ಕೇಡನ್ನುಂಟುಮಾಡದ ಆವ ಕೆಲಸವಾದರೂ ಪ್ರಯತ್ನದಿಂದ ಸಾಧ್ಯ 5 ವಾಗುವುದು. ರವಿ:- ಹಾಗೋ ? ಇರಲಿ; ಒಳ್ಳೆಯದು-ಕೆಟ್ಟು ದು ಎಂಬಿ ವನ್ನು ತಿಳಿಯುವ ಬಗೆ ಹೇಗೆ ? ಫಲಪ್ರಾಪ್ತಿಯಾದ ಬಳಿಕಲ್ಲವೇ ? ಹಾಗೆ ಬಂದಾಗ ನೋಡಿಕೊಳ್ಳುವ? ರಮಾ:- ವಿವೇಚನಾಪರನಾದವನು, ಮುಂದೆ ಒದಗಬಹು 10 ದಾದ ಫಲವನ್ನು ಇಂದೇ ತಿಳಿದತ್ಥತ್ತು, ಅದಕ್ಕೆ ತಕ್ಕಂತ ಅನುಕೂಲ ಪ್ರತಿಕೂಲಗಳನ್ನು ವಿಮರ್ಶಿಸಿ ಜಾಗರೂಕನಾಗಿರುವನು. ವಿವೇಚನೆ ಯಿಲ್ಲದವರಿಗೆ ಇದು ಸಾಧ್ಯವಲ್ಲ. ರವಿ:- ಹೋಗಲಿ, ನೀನು ವಿವೇಚನಾಪರನಷ್ಟೆ; ನಿನಗೆ ಮು೦ದ ಒದಗಬಹುದಾದ ಕಷ್ಟ ನಷ್ಟಗಳ ಫಲಗಳು ಎಂತಹವೆಂಬು 15 ದನ್ನು ಈಗ ತಿಳಿದುಹೇಳು; ಕೇಳುವ? ರಮಾ:- (ಕಿರುನಗೆಯಿಂದ) ಅಣ್ಣ! ಅಸತ್ಯವಾದಿಗಳ ಮತ್ತು ಅಸೂಯಾಪರರಾದ ಮರ್ಖರ ಕಿರುಕುಳದಿಂದ ಅಷ್ಟಿಷ್ಟು ಕಷ್ಟ ಗಳುಂಟಾಗಬಹುದಾದರೂ, ಕರ್ತವ್ಯ ಜಾಗ್ರತನಾಗಿರುವ ನನಗೆ ನನ್ನ ಗುರುವಿನ ಅನುಗ್ರಹವಿರುವ ಪರೆಗ, ಮತ್ತಾವ ಉಪಹತಿಯುತ 20 ಉಂಟಾಗಲಾರದು. ರವಿ:-(ತಲೆದೂಗಿ ಸಕ್ಕು ದರ್ಪದಿಂದ) ಭಲೆ, ನಿನೇ ಕರ್ತವ್ಯನಿಷ್ಠನ ಲ್ಲವೆ ? ನೀನೇ ಸತ್ಯಸಂಧನಾಗಿರುವವನಲ್ಲ ವೆ ? ಆಗಲಿ, ಸಂತೋಷ ! ನಾವೆಲ್ಲ ರು, ಕಳ್ಳರು; ಸುಳ್ಳುಗಾರರು. ರಜಯ:- ಅಣ್ಣ ! ನಾನು ಕನಸಿನಲ್ಲಿ ಯಾದರೂ ನಿಮ್ಮನ್ನು #5 ಹಾಗೆಂದು ಹೇಳುವುದಿಲ್ಲ, ಹೀಗೇಕೆ, ಇಲ್ಲಿ ದಸಲ್ಲದ ಮಾತುಗಳ