ಪುಟ:ರಮಾನಂದ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ ೬೯ ವಿದ್ಯಾ :- ( ಸಂಶಯದಿಂದ ) ಜೂಜಿಗೂ ಸೇರಿದನೆ ? ಆಗಲಿ; ಅದರಿಂದಾಗುವ ಅನಿಷ್ಟವು ಇನ್ನೂ ಈಗಲೇ ಹೇಗೆ ತಿಳಿಯಬೇಕು ? ಫಲಪ್ರಾಪ್ತಿ ಕಾಲದಲ್ಲಿ ಪರಿತಪಿಸಬೇಕಾದೀತು. ಇರಲಿ; ಆ ಪತ್ರವನ್ನು ಇಲ್ಲಿ ತಾ. ರವಿ:-(ಅಂಗಿಯ ಕಿಸೆಯಿಂದ ಮಡಿಸಿದ್ದ ಪತ್ರವನ್ನು ತೆಗೆದು ಕೊಡುವನು) 5 ವಿದ್ಯಾ:- (ಹಿಂದೆಮುಂದೆ ನೋಡಿ) ಇದೇನಯ್ಯ ಮಣ, ಮಸಿ ಕೋಳ ? ರವಿ:- ಇದು ಬಿದ್ದಿದ್ದ ಸ್ಥಳವು ನೀರಿನಿಂದ ತೊಯ್ದು ಹೋಗಿದ್ದ ನೆಲವಾಗಿದ್ದಿತು, ಆದುದರಿಂದ ಹೀಗಾಗಿದೆ.

  • ವಿದ್ಯಾ:- ರಮಾನಂದ ! ಇತ್ತ ಬಾ; ಇದು ನಿನ್ನ ಬರಹವೇ 10 ಆಹುದೋ ಅಲ್ಲ ವೋ ನೋಡಿ ಹೇಳು.

ರಮಾ:- ( ಮುಂದೆಬಂದು ನೋಡಿ, ವಿನಯದಿಂದ ) ಇದು ನನ್ನ ಬರಹವೇ ಅಹುದು, ವಿದ್ಯಾ :-ಹಾಗಿದ್ದರೆ, ನೀನು ಜೂಜಿಗೆ ಹೋಗಿದ್ದು ರೂ ನಿಜ! ರಮಾ:- ಜೂಜಿಗಾಗಲಿ, .ಮತ್ತಾವ ಮನೋವಿಕಲ್ಪಹೇತು 15 ಗಳಾದ ಆಟಗಳಿಗೇ ಆಗಲೀ ನಾನು ಈ ವರೆಗೂ ಸೇರಿರುವುದಿಲ್ಲ; ಮುಂದೆಯೂ ಸೇರತಕ್ಕವನಾಗಿಲ್ಲ ಹಿರಿಯರ ಆಶೀರ್ವಾದದಿಂದ ಅವೆಲ್ಲವನ್ನೂ ಮನಃಪೂರ್ವಕವಾಗಿ ತಿರಸ್ಕರಿಸಿರುವೆನು, ಮತ್ತು ಈ ವರೆಗೆ ಹೇಳಲ್ಪಟ್ಟು ದಾವದ ನಿಜವಲ್ಲ ವೆಂದೂ ನಾನು ಖಂಡಿತವಾಗಿ ಹೇಳಬಲ್ಲೆನು. 20 ವಿದ್ಯಾ :- ಆಗಲಿ; ಕಳ್ಳನಿಗೆ ಸುಳ್ಯ ಮಂತ್ರಿ, ಇರಲಿ; ಈಗ ನಿನ್ನ ಪತ್ರವು ಆತನಿಗೆ ಮತ್ತೆ ಹೇಗೆ ಸಿಕ್ಕಿತು ? ರಮಾ:- ನನಗೆ ತಿಳಿಯದು. ವಿದ್ಯಾ:- ನಿನಗೆ ತಿಳಿಯದೆ ನಿನ್ನ ಪದಾರ್ಥವು ಮತ್ತೊಬ್ಬರ ಬಳಿಗೆ ಹೋಗುವುದೇ ? 25