ಪುಟ:ರಮಾನಂದ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ ೭೧ ಮೇಲಿನ ದುರ್ವಿಷಯಚಿ೦ತೆಗಳಿಗೆ ಒಳಪಡಿಸದೆ ಎಚ್ಚೆತ್ತಿದ್ದು ವಿನಯ, ಸತ್ಯ, ಶಾಂತಿ ಕ್ಷಮಾ ವಿವೇಚನೆಗಳನ್ನು ಅವಲಂಬಿಸಿ, ಬ್ರಹ್ಮಚರ್ಯ ನಿಷ್ಠೆಯಿಂದ ಗುರುಕುಲವಾಸದಲ್ಲಿ ಪರಿಪಕ್ವ ಬುದ್ದಿಯನ್ನು ಹೊಂದು ವವನೇ ನಿಜವಾದ ವಿದ್ಯಾ ಧನವನ್ನು ಅರ್ಜಿಸಲು ಅರ್ಹನು. ಇದನ್ನು ನಿಮಗೆ ಎಷ್ಟೋಬಾರಿ ಹೇಳಿದ್ದೆನು. ಆದರೂ ನೀವು ಇನ್ನೂ ನಂಬಿಕೆ 5 ಯನ್ನುಂಟುಮಾಡಲು ಪ್ರಯತ್ನಿಸಿದಂತೆ ತೋರಲಿಲ್ಲ. ಮತ್ತೇನು ಹೇಳಲಿ ? ರಮಾನಂದ | ಅಪಾತ್ರನಿಗೆ ದಾನಮಾಡಬಾರದೆಂಬ ನೀತಿ ಯು೦ಟು. ಆದುದರಿಂದ ಶ್ರೇಷ್ಠವಾದ ವಿದ್ಯಾಧನವನ್ನು ದಾನಮಾ ಡಲು, ಪಾತ್ರಾ ಪಾತ್ರವನ್ನು ತಿಳಿಯಬೇಕೆಂದೇ ಈ ವರೆಗೂ ನಿಮ್ಮನ್ನು ಕೇವಲ ಅಲ್ಪ ವಿಷಯವಿಚಾರದಲ್ಲಿ ಮಾತ್ರ ನಿಯವಿಸಿದ್ದೆನು, ನಿಮ್ಮ 10 ಯೋಗ್ಯತಾ ಪರಿಶೀಲನೆಗೆಂದೇ ಈ ದಿನವನ್ನು ಗೊತ್ತು ಮಾಡಿದ್ದನು. ಆದರೆ ಇಷ್ಟು ದೀರ್ಘ ಕಾಲವೂ ನಿನ್ನ ನಡೆನುಡಿಯಲ್ಲಿ ಲೇಶಮಾತ್ರದ ಸಂಶಯಕ್ಕೂ ಅವಕಾಶವಿಲ್ಲ ದಿದ್ದುದು, ಇಂದು ಒಂದೇಡವೆ ಒಟ್ಟಾಗಿ ಹೊರಬಿದ್ದಿರುವುದನ್ನು ನೋಡಿದರೆ, ನನಗೆ ಅತ್ಯಂತ ವ್ಯಾಕುಲವೂ, ಕ್ರೋಧವೂ ಸಂದೇಹವೂ ಉಂಟಾಗಿವೆ. ಇದರ 15 ಪೂರ್ವಾಪರವನ್ನು ಚನ್ನಾ ಗಿ ತಿಳಿದು ಸಂಶಯವು ಪರಿಹಾರವಾಗುವ ವರೆಗೂ, ನಾನು ನಿಮ್ಮನ್ನು ಬಿಟ್ಟು ಬಿಡುವುದಕ್ಕಾಗಲೀ, ಇಲ್ಲ ವೇ ಪ್ರೌಢವಿದ್ಯಾಭ್ಯಾಸದಲ್ಲಿ ನಿಯೋಜಿಸುವುದಕ್ಕಾಗಲೀ ಇಷ್ಟವುಳ್ಳವ ನಗಿಲ್ಲ, ಇದಕ್ಕೆ ಇನ್ನೂ ಒಂದು ವಾರದ ವರೆಗೆ ಅವಧಿಯನ್ನು ಕೊಟ್ಟಿರುವೆನು. ಅಷ್ಟರಲ್ಲಿಯಾದರೂ ಅಪಚಾರವಿತಹುದೆಂದು 20 ತಿಳಿದು ಹೇಳಿ, ಕ್ಷಮೆಯನ್ನು ಕೋರುವುದು ಶ್ರೇಯಸ್ಕರವೆಂದು ನಿಮ್ಮೆ ಲ್ಲರಿಗೂ ಹೇಳಿರುವೆನು. (ಕೆರೆಯಲ್ಲಿ): ಪರಿಚಾರಕರೇ ! ಶಾರದಾ ಉಪಾಸನೆಗೆ ಹೊತ್ತು ಮೀರುತ್ತಿದೆ. ನಿಮ್ಮ ನಿಯಮಿತ ಕಾರ್ಯಗಳನ್ನು ಸಾಂಗವಾಗಿ ಮಾಡಿರುವಿರಷ್ಟೆ? 25