ಪುಟ:ರಾಣಾ ರಾಜಾಸಿಂಹ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪] ಪತ್ರವಚನ ಆಳ ••••• • • • • • • • • • • • • • • • ರಾಣಾನು ಆ ಪತ್ರಗಳನ್ನು ಕೈಯ್ಯಲ್ಲಿ ತಕ್ಕೊಂಡನು ಪತ್ರಗಳ ಮೇಲೆ ತನ್ನ ಹೆಸರು ಬರೆದಿತ್ತು ಅವುಗಳನ್ನು ಅಲ್ಲಿಯ ಓದದೆ_• ಈಗ ಈ ಪತ್ರಗಳನ್ನು ಓದಲಿಕ್ಕೆ ವೇಳೆಯಿಲ್ಲ ನಿನಗೆ ದಾರಿ ಗೊತ್ತಿರಬೇಕು. ಮೊದಲು ದಾರಿಗೆ ನಡೆ ಎಂದನು | ಜಯಸಿಂಹನು ದಾರಿಯನ್ನು ತೋರಿಸುತ್ತ ಮುಂದಾದನು. ಜಯ ಸಿಂಹನು ತನ್ನ ಬೆರಳಿನ ಕಡೆಗೆ ಒಮ್ಮೆಯ ನೋಡಲೊಲ್ಲನು. ಅದರ ಬಗ್ಗೆ ವೇದನೆಯನ್ನೂ ತೋರಿಸಲೊಲ್ಲನು ಒಂದೇ ಸವನೆ ನಡೆದಿರು ತಾನೆ ಇದನ್ನು ಕಂಡು ರಾಣಾನಿಗೆ ಒಂದು ಪ್ರಕಾರದ ಆನಂದವಂಟಾ ಯಿತು. - ಸ್ವಲ್ಪ ಹೊತ್ತಿನಮೇಲೆ ಅವರು ಆಪರ್ವತದಲ್ಲಿ ಒಂದು ರಮಣೀಯ ವಾದ ಸ್ಥಳಕ್ಕೆ ಮುಟ್ಟಿದರು. ಅಲ್ಲಿ ಒಂದು ಕಲ್ಲಿನಮೇಲೆ ಕುಳಿತು ರಾಣಾನು ಪತ್ರವನ್ನು ಓದಹತ್ತಿದನು | ೧೪ ನೆಯ ಪ್ರಕರಣ ಪತ್ರ ವಾಚನ ಮೊದಲು ವಿಕ್ರಮಸಿಂಹನ ಪತ್ರವು ಕೈಯಲ್ಲಿ ಬಂತು ಅದನ್ನು ಓದಿ ಹರಿದು ಚಲ್ಲಿದನು, ಬ್ರಾಹ್ಮಣನಿಗ ಎನಾದರೂ ಒಹುಮಾನವನ್ನು ಕೊಟ್ಟರೆ ತೀರಿತೆಂದಂದುಕೊಂಡನು ಆಮೇಲೆ ಚಂಚಲಕುಮಾರಿಯ ಪತ್ರ ವನ್ನು ಓದಲಾರಂಭಿಸಿದನು. (“ಮಹಾರಾಜರೇ, ತಾವು ರಜಪೂತ ಕುಲದೀಪಕರು ; ಹಿಂದೂಗ ಳಿಗೆ ಶಿರೋಭೂಷಣರು. ನಾನು ತಮಗೆ ಗುರ್ತಿಲ್ಲದ ಅಜ್ಞಳಾದ ಅಬ ಲೆಯು, ನಾನು ನಿಶ್ಚಯವಾದ ಸಂಕಟದಲ್ಲಿ ಬೀಳದಿದ್ದರೆ ಈ ಪತ್ರವನ್ನು