ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಥಮಾಶ್ವಾಸಂ

೨೧

ಕಂ||ವನಜ ವನರಾಜಿ ಕೂಜ
ದ್ವನವಿಹಗವಿ ರಾಜಿ ಪುರ ಬಹಿಃಪುರ
ವನದೊದವುರತಿಯ ಪೊಸಜೌ
ವನದೊದವೆನೆ ನೆರೆಯೆ ಪೊಗುಳಿಲಾವಂ ನೆರೆವಂ||೧೧೧||

ಬೇರ್ವಿಡಿದು ಕಾಯ್ತ ಪಲಸೆಳ
ನೀರ್ವೊನಲಂ ಕರೆವ ತೆಂಗು|ಪೊಂಬಾಳೆಗಳಿ೦||
ಸೋರ್ವಡಕೆಯ ಸಸಿ| ಬೆಳಗಂ
ಪೇರ್ವೆಲೆವಳ್ಳಿಗಳೆ ಸೊಗಯಿಕುಂ ಪುರವನದೊಳ್||೧೧೨||

ಅಂತು ಕಂತುಗಜ ವಿಹಾರವೀಧಿಯುಂ ಸುಕೃತ ಸುರಭಿ ಸಂಚಾರಕ್ಷೇತ್ರಮುಂ
ನೇತ್ರಪುತ್ರಿಕಾ ಪ್ರಸಾಧನ ಸದನಮುಂ ಲಕ್ಷ್ಮೀಲೀಲಾಲಾಸ್ಯ ಮಾಂಗಲ್ಯರಂಗಮು
ಮೆನಿಪ ಪುರ ಬಹಿಃಪುರದಿಂದೊಳಗೆ--

ಕಂ||ಬಡಬಾನಲಂಗೆ ಸೆಡೆದಿಂ
ಗಡಲೆ ಸರಣ್ಬೊಕ್ಕುದಮರಶೈಲಮನೆಂಬೀ||
ಪಡೆಮಾತಂ ನೀರ್ಗಾದಿಗೆ
ಪಡೆಯುತ್ತುಂ ಪೊನ್ನ ಕೋ೦ಟೆಯಂ ಬಳಸಿರ್ಕು೦||೧೧೩||

ಚೆಂಬೊನ್ನ ಕೋ೦ಟೆ ಪರಿವೇ
ಷಂಬೆತ್ತೆಳನೇಸರಂತೆ ನೀ ರ್ಗಾದಿಗೆಯಂ||
ತುಂಬಿದ ನೀರ್ವೂಗಳ ಪಲ
ವುಂ ಬಣ್ಣದಿನಾರ ಕಣ್ಣುಮಂ ಸೆಜಿಗೆಯ್ಗುಂ ||೧೧೪||

ಮಂದರ ಕಂದರಮೆಂಬೀ
ಸಂದೆಗದಿಂ ಮಾರಿ ಸೂತನಂ,ಕೀರಿನಿಜ||
ಸ್ಯಂದನಮಂ ಕೋ೦ಟೆಗೆ ಭರ
ದಿಂದೆಳೆಗುಂ ಕರ್ಚಿ ಕೀಳಿನಿನನ ಹಯಂಗ ||೧೧೫||

ಮುಗಿಲಟ್ಟಳೆಗಳ ಕೆಲದಂ
ಬುಗಂಡಿಯಿಂ ನುಸುಳ್ದು ನಡೆವ ದಿನಕರನ ಹಯ೦||
ಗಗನಾಧ್ವ ಖೇದಮಂ ಪಳಿ
ಯಿಗೆಗಳ ತಣ್ಣೆಲರ ತೀಟದಿಂ ತೊಲಗಿಸುಗುಂ||||೧೧೬||


೧. ಪೂ೦ಬಳೆಯಮದಂ, ಕ, ಖ, ಚ,
೨. ದಾರಿ ೨ ಚ.