ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೪೮

ರಾಮಚಂದ್ರಚರಿತಪುರಾಣಂ

ಕೊಂಡು ಲೆಪ್ಪದರಸನಂ ಕರುಮಾಡದೆರಡನೆಯ ನೆಲೆಯೊಳಿರಿಸಿ ಪರಿಜನಮುಂ
ತಾನುಮೋಲಗಿಸುತ್ತಿರೆ---

ಕಂ|| ಜನಕನ ಮಂತ್ರಿಯುಮೀ ಕ್ರಮ
      ದಿನನುಷ್ಥಿಸಿ ಕಳಿಪೆ ಜನಕನುಂ ದಶರಥನುಂ||
      ದಿನಕರನುಂ ಹಿಮಕರನುಂ
      ಘನಾಘನಾ೦ತರಿತರಾದರೆನೆ ತಲೆಗರೆದರ್||೨೭||

      ಅನ್ನೆಗಮಿತ್ತ ವಿಭೀಷಣಾದೇಶದಿಂ ಬಂದ ತೀಕ್ಷ್ಣ ಪುರುಷರ್ ಪುರಮಂಪೊಕ್ಕು ಕರುಮಾಡಮಂ ಪುಗಲ್ಪಡೆಯದೆ ತಡೆದಿರ್ಪುದುಂ---

ಉ|| ಅಟ್ಟಿದ ಜಟ್ಟಿಗರ್ತಡೆದುದರ್ಕೆ ಕನಲ್ದು ವಿಭೀಷಣಂ ಮುಗಿ|
     ಲ್ವಟ್ಟೆಯಿನಟ್ಟ ತಿ೦ಬ ಜವನಂತಿರಯೋಧ್ಯೆಗೆ ಬಂದು ಪೊಕ್ಕು ಪೊ೦||
     ಬೆಟ್ಟ ಮೆನಿಪ್ಪ ಪೊನ್ನ ಕರುನಾಡಮನ೦ದಿರುಳಲ್ಲಿ ಕಂಡು ಕ|
     ಣ್ಮುಟ್ಟಿನೊಳಿರ್ದ ಲೆಪ್ಪದರಸಂ ಕೊಲವೇಳಿ ನಸಾರ ಚೇತನಂ||೨೮||

ಅಂತುಪೇಳ್ವುದುಂ---

ಕಂ|| ಬೆಸನಂ ವಿದ್ಯುದ್ದ್ವಿಳಸಿತ
      ವೆಸರ ವಿಯಚ್ಚರ ಭಟೋತ್ತಮಂ ಪಡೆದು ಜವಂ||
      ಮಸಗಿದನೆನೆ ಕಾಪಿನವ
      ರ್ದೆಸೆಗಿಡೆ ಪೊಕ್ಕಿಳಿದು ಕೊ೦ದು ತಲೆಯಂ ತಂದಂ||೨೯||

ಆ ಸಮಯದೊಳ್---

ಕಂ||ಪರಿಜನದ ಭೂಪನಂತಃ
     ಪುರದಬಳಾಜನದ ನೆಗೆದ ಹಾಹಾರವಮೆ||
     ಯ್ತರೆ ಕಿವಿಗೆ ಕೇಳ್ದು ನಲಿದ೦|
     ಕರುಣಾರಸ ರಹಿತನಾವನಾಖಚರನವೋಲ್||||೩೦||

ಕ೦||ಕೊಲಲೆಂದು ಬಂದು ಲೆಪ್ಪದ
     ತಲೆಯಂ ಕೊಂಡುಯ್ದನಾ ವಿಭೀಷಣನಾರುಂ||
     ಕೊಲಲಾರ್ಪರೆ ಸಾಯದರಂ|
     ಲಲಾಟದೊಳ್ ವಿಧಿಯ ಬರೆದ ಲಿಪಿ ಜಲಲಿಪಿಯೇ||೩೧||


೧. ತೆವಿನೀತೆಗೆ. ಗ.