ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೫

ತೃತಿಯಾಶ್ವಾಸಂ



      ಕ೦|| ಉದಯಿಸಿದ ತನೂಜನ ತೇ
            ಜದೊಳೇನುಂ ಮಲಿನಭಾವ ಲಾಂಛನ ಮಿಲ್ಲೆ೦||
            ಬುದನರಿಪುವಂತೆ ಪೊಗೆಯಿ
            ಲ್ಲದೆ ಪೊಣ್ಮಿತ್ತಗ್ನಿ ದಕ್ಷಿಣಾವರ್ತಮುಖಂ||೧೧೧||

            ಈ ತನಯನೆ ಸಕಲೋತ್ಸವ
            ಹೇತು ಜಗತ್ತಾಪ ಶಮನನೆಂದರಿಪುವವೋಲ್||
            ಶೀತಲ ಸಮೀರನೆಸಗಿ
            ತ್ತಾತನ ಜಸದಂತೆ ವಿಶದವಾಯ್ತಾಕಾಶಂ||||೧೧೨||

            ಎಳವಿಸಿಲುಂ ಬೆಳ್ದಿಂಗಳು
            ಮೇಳಸಿದುವೆನೆ ರಮ್ಯ ಹರ್ಮ್ಯಶಿಖರ ಸ್ಥಳಿಯೊಳ್||
            ಪೊಳೆದುವು ಪೊಂಗಳಸಂಗಳ
            ಪೊಳೆಪುಂ ಕೇತನ ದುಕೂಲ ಚೇಲಾಂಚಲಮುಂ||೧೧೩||
 
            ಅವಿರಳಮೆನೆ ಪೂವಲಿ ಪುದಿ
            ದುವು|ಗುಡಿಯುಂ ತೋರಣಂಗಳುಂ ತಳ್ತುವು ಬ||
            ದ್ದವಣಂ ಬಾಜಿಸಿದುವು ವೀ
            ಧಿವೀಧಿಯೊಳ್ ಕೇರಿಕೇರಿಯೊಳ್ ಮನೆಮನೆಯೊಳ್||೧೧೪||

    ಉ|| ರಾಗದ ಬಳ್ಳವಳ್ಳಿಯೆನೆ ರನ್ನದ ತೋರಣಮಾಲೆ ಕೂಡೆ ಚೆ|
         ಲ್ಯಾಗಿರೆ ದಾನಮೇಘ ರುತಿಯ೦ತಿರೆ ಮಂಗಳ ಶೂರ್ಯನಾದಮಾ||
         ಶಾಗಜ ಕರ್ಣಪೂರಮೆನೆರಾಗ ರಸಾಮೃತವಾಧಿ ಘೋಷದಂ||
         ತಾಗಿರೆ ಪುಣ್ಯಪಾಠಕ ರವಂ ಪೊಸತಾದುದು ರಾಜಮಂದಿರಂ||೧೧೫||

         ದೇಸಿ ವಿಲಾಸಮಂ ಪಡೆಯೆ ಗೊಂದಳವಕ್ಕಣವಾಗಳಾ ನೃಪಾ|
         ವಾಸದೊಳಾಡಿದತ್ತೆಸೆಯೆ ಪಾಣಿತಲಂ ಪಡೆವಂತೆ ಕುಂಕುಮ||
         ಸ್ಥಾಸಕಮಂ ಕುರುಳ್, ಕೆದರುವಂತೆ ತಮಾಲ ನವ ಪ್ರವಾಳಮಂ|
         ಕೇಸಡಿ ಪಾಸುವಂತೆ ತಳಿರ೦ ನಗೆಗಣ್ಣುಗುಳ್ವಂತೆ ನೆಯ್ದಿಲಂ||೧೧೬||

  ಚ|| ಉದಯಿಪುದುಂ ತ್ರಿಲೋಕತಿಲಕಂಗೃಹದೇವತೆಯರ್ ಪ್ರಸನ್ನವೇ|
       ಹದಿನೆಸೆದಾಡುವಂತೆ ಮಣಿಭಿತ್ತಿಗಳಂ ಮಣಿ ಕುಟ್ಟಿ ಮಂಗಳಂ||
       ಪುದಿದು ಮನಕ್ಕೆ ಸಂತಸವನಿತ್ತುವು ನೃತ್ಯರಸಾಮೃತ ಪ್ರವಾ||
       ಹದೊಳವಗಾಹಮಿರ್ದ ಗಣಿಕಾಪ್ರಚಯ ಪ್ರತಿಬಿಂಬ ಲಕ್ಷ್ಮಿಗಳ್||೧೧೭||