ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೭

ತೃತಿಯಾಶ್ವಾಸಂ



        ಕಂ|| ಅರುಣಮಣಿ ಕರ್ಣಭೂಷಣ
              ಮರೀಚಿ ಪಸರಿಸಿದ ರಾಮಚಂದ್ರ ಶರೀರ೦||
              ಪರಿಭವಿಸಿದುದೆಳವಿಸಿಲಾ
              ವರಿಸಿದ ಕಮನೀಯ ಪುಂಡರೀಕ ಶ್ರೀಯಂ||೧೨೩||

              ಅರಸಿಯ ಮನದೊಳ್ ಕೆಂಜಡೆ
              ದೊರೆಕೊಳಿಸುವುದುಚಿತಮೊಡನೆ ಕಜ್ಜಲರುಚಿಯೊಳ್||
              ಪೊರೆದ ನಯನೋತ್ಪಲಂಗಳ್
              ದೊರೆಕೊಳಿಪುದು ಚಿತ್ರಮಲ್ತೆ ರಾಗೋತ್ಸವಮಂ||೧೨೪||

              ಧಾತ್ರಿಯೊಳನ್ಯರ ತೇಜೋ
              ಮಾತ್ರಮನಾಂ ಸಲ್ಲಿಸೆನೆಂಬ ತೆರದಿಂ ಪೊಯ್ಯಲ್||
              ಧಾತ್ರಿಯ ಕಯ್ಯಿಂ ನಿಮಿರ್ವ೦
              ಕ್ಷತ್ರಶಿಖಾಮಣಿ ಮಣಿಪ್ರದೀಪಾಂಕುರಮಂ||೧೨೫||

              ಕಿವಿಗಿನಿದೆನಿಪ್ಪ ವೀಣಾ
              ರವದೊಳನಾದರಮನುಂಟುಮಾಡಿತು ತನೂ||
              ಭವನ ತಳರ್ನಡೆಯೊಳ್ ಪೊ
              ಣ್ಮುವ ಮೃದುಪದ ಕನಕ ಕಿಂಕಿಣೀ ಝಣರುಣಿತ೦||೧೨೬||

              ಶ್ರವಣಕ್ಕರ್ಥವ್ಯಕ್ತಿಯ
              ನವಟಯಿಸದೆ ನೆಗಳ್ವಿ ವಶ್ಯಮಂತ್ರಾಕ್ಷರದಂ||
              ತೆವೊಲೆಲ್ಲರುಮಂ ಸೋಲಿಸಿ
              ದುವು ತೊದಲಂನುಡಿವ ರಾಮಚಂದ್ರನ ನುಡಿಗಳ್||೧೨೭||

              ತಿಳಿಗೊಳದೊಳಗೆಡೆಯಾಡುವ
              ಕಳಹಂಸನ ಬಾಲಕೇಳಿ ಪುದುವೆನೆ ಮಧುಪಾ||
              ಟಳನೇತ್ರಂ ಧವಳಾಂಗಂ
              ಪಳಿಕಿನ ಕುಟ್ಟಿಮದಮೇಲೆ ದಟ್ಟಡಿಯಿಟ್ಟಂ||೧೨೮||


೧. ಪರಿಕಲಿಸೆ, ಚ,
೨. ಸಹಿಸೆ, ಘ.
೩. ತೂದಳೊಳ್ಪುದಿನ. ಗ. ಫ.