ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೭೧

ತೃತಿಯಾಶ್ವಾಸಂ



     ಕಂ ||ಪರಮ ಪ್ರೇಮಂ ಜನ್ಮಾಂ
           ತರದಿಂದೊಡವಂದುದೆನಿಸಿ ಗೆಡೆ ಬೆಚ್ಚವೊಲ
           ಚ್ಚರಿಯಾಗೆ ರಾಮ ಲಕ್ಷ್ಮೀ
           ಧರರೊಳಮಾದತ್ತು ಭರತಶತ್ರುಘ್ನರೊಳಂ||೧೪೩||
    
           ಅಮಳ್ಗಳಿವರೆಂಬಿನಂ ತಮ
           ಗಮಳ್ವೆಸರಮರ್ದೆಸೆಯೆ,ತಾಯ ತಂದೆಯ ಚಿತ್ತ||
           ಕ್ಕಮರ್ದಿನ ಮಳಿಯಂ ಕರೆದರ್‌
           ಕುಮಾರಕರ್‌ ಮೂರ್ತಿಗೊಂಡ ಪುರುಷಾರ್ಥದವೋಲ್||೧೪೪||
ಮ ||ಸುರಧೇನು ಸ್ತನಭಾರದಂತೆ ಪುರುಷಾರ್ಥ೦ ಮೂರ್ತಿಗೊಂಡಂತೆ ನಾ|
     ಲ್ವರುಮೊಂದಾಗಿರೆ ನಂದನರ್ ದಶರಥಂ ನಾಲ್ಕುಂ ಸಮುದ್ರಂಬರಂ||
     ಧರೆಯಂ ಕೂಡೆ ನಿಮಿರ್ಚಿ ನಾಲ್ದೆಸೆಯೊಳಂ ನಾಲ್ಕುಂ ಜಯಸ್ತಂಭಮಂ|
     ಚರಿತಾರ್ಥರ್ ನಿಲಿಸಲ್ ಸಮರ್ಥರಿವರೆಂದುತ್ಸಾಹಮಂ ತಾಳ್ದಿದಂ||೧೪೫||

     ಮತ್ತಂ ನಿಜ ತನೂಭವರ ನಿರ್ಜಿತ ಮನೋಜಾಕಾರಮುಮಂ, ತಿಳ ಮಸೂರಿ
ಕಾದಿ ಶುಭ ವ್ಯಂಜನರಂಜಿತ ಪ್ರಶಸ್ತಾವಯವಂಗಳುಮಂ, ಹಲ ಕುಲಿಶ ಶಂಖ ಚಕ್ರ ಲಾಂಛನಂಗಳಪ್ಪ ಕರ ಚರಣಂಗಳುಮಂ ನೋಡಿ 'ಸಕಲ ಸಾಮ್ರಾಜ್ಯಶ್ರೀಯನಪ್ಪು
ಕೆಯ್ದಂತೆ ಸಂತೋಷದಂತಮನೆಯ್ದಿ--

     ಕ೦।। ಸವಿವವಸರಮಿದು ವಿದ್ಯಾ
          ಯುವತಿಯ ವದನಾರವಿಂದ ಮಧುವನೆನುತ್ತುಂ||
          ವಿವಿಧ ಕಳಾಚಾರ್ಯರನಾ
          ರ್ಯವರ್ಯರಂ ಗುರು ನಿಯೋಗದೊಳ್ ಯೋಜಿಸಿದಂ||೧೪೬||

          ಶುಭದಿನ ಮುಹೂರ್ತದೊಳ್ ಪು
          ಣ್ಯಭಾಗಿಗಳ್ ಕಲಿಸೆ ಗುರುಗಳೊಡವಂದುದೊ ಪೂ||
          ರ್ವ ಭವೋಪಾರ್ಜಿತ ವಿದ್ಯಾ
          ವಿಭವಮೆನಲ್ ಸಕಲಶಾಸ್ತ್ರ ಪರಿಣತರಾದರ್||೧೪೭||

          ರೋಮಾಂಚಮನೊಡರಿಸೆಯುಂ
          ರಾಮನ ಲಕ್ಷ್ಮಣನ ಭರತ ಶತ್ರುಘ್ನರ ವಿ
          ದ್ಯಾ ಮಹಿಮೆ ಚತುಷ್ಪಷ್ಟಿಕ
          ಲಾ ಮಹಿತರ ಮನದೊಳೀರ್ಷ್ಯೆಯಂ ಪುಟ್ಟಿಸುಗುಂ||೧೪೮||


೧. ಮುಡಿಳ. ಘ. ; ತೀಳಿಳ, ಚ.