ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವಾಗ ದೋಷ ಕಂಡುಬಂತು

೭೦

ರಾಮಚಂದ್ರ ಚರಿತಪುರಾಣಂ

      ಅಂತು ದಶರಥಮಹೀನಾಥಂ ಸಂತಾನ ಸಮೃದ್ಧಿಯಿನತಿಪ್ರವರ್ಧಮಾನಸುಖಾ
ಧೀನ ಮಾನಸನಾಗಿರ್ಪುದುಂ---

      ಕಂ|| ಅವನೀವಲ್ಲಭ ತನಯರ್‌
            ನವ ಶಶಿಕಲೆಯಂತೆ ಪಡೆದು ನಯನೋತ್ಸವಮಂ||
            ದಿವಸಕ್ರಮದಿಂದಂ ವೃ|
            ದ್ಧಿವಡೆದರಮರಾವನೀಜದಗೆಯೆಂಬಿನೆಗಂ||೧೩೮||

            ನಸುನಗೆ ಕಮಳದ ಸಿರಿಯಂ
            ನಸುನಗೆಜನನಿಯರ ಲೋಚನಭ್ರಮರಂಗಳ್||
            ಮುಸುರಿದುವು ಮೋಹವಲ್ಲರಿ
            ಪಸರಿಸಿ ಪರ್ವಿದುದು ಸುತರ ಲಾಲಾಜಲದಿಂ||೧೩೯||

            ತಳರಡಿ ಯಿಡುವತ್ತಲೆ ಪರಿ
            ದೆಳಸುವ ಜನನಿಯರ ದಿಟ್ಟ ಮಣಿಕುಟ್ಟಿಮಮಂ||
            ಬಳಸೆ ಪೊಸತಲರ್ದ ನೆಯ್ದಿ
            ಲ್ಗೊಳದೊಳಗಣ ರಾಜಹಂಸನಂ ನೆನೆಯಿಸಿದರ್||೧೪೦||

ಚ|| ಅರಳೆಲೆ ಮತ್ತಿಗಾಯ್, ಪುಲಿಯುಗುರ್ ನವರತ್ನದ ಕಂಕಣಂಗಳುಂ|
     ಗುರುಮುಡೆನೂಲ ಪೊನ್ನ ಮಣಿಕಿಂಕಿಣಿ ರನ್ನದ ಫಂಟೆ ನೂಪುರಂ||
     ವರ ವಲಯಂಗಳೆ೦ಬ ಪಲವಂದದ ಚಂದದ ಬಾಳಿವಂದಮೊ|
     ಪ್ಪಿರೆ ಪಿತೃಮಾತೃಗಳ್ಗೆ ಪಡೆದ‌ರ್ ತನಯ‌ರ್ ನಯನೋತ್ಸವಂಗಳಂ||೧೪೧||

     ಅಂತು ದಶರಥ ಮಹೀನಾಥನ ಸಾಮ್ರಾಜ್ಯಶ್ರೀಯ ಮಣಿಮಯಾಭರಣ
ದಂತೆ ಸೊಗಯಿಸುವ ಸುತರ ಬಾಲಕೇಳೀದರ್ಶನದಿಂ ಸುಮಿತ್ರೆಯ ನಯನಪುತ್ರಿಕೆ
ನಲಿದು ನರ್ತಿಸೆಯುಂ, ಕೈಕೆಯ ತನುಲತಿಕೆ ಪುಳಕ ಕಳಿಕೆಯಂ ತಳೆಯೆಯುಂ,
ಸುಪ್ರಭೆಯ ಮನಃಪ್ರಮೋದಮುದಿತೋದಿತಮಾಗೆಯುಂ ರಾಮ ಲಕ್ಷ್ಮಣ ಭರತ ಶತ್ರುಘ್ನರನುಕ್ರಮದಿಂ ಶೈಶವಮನತಿಕ್ರಮಿಸೆ---
      ಕಂ|| ವಸುವ ದುದವನ್ನರ್ಥಂ
ವಸುರ್ಧೆಲ್ ಕ೦ದು ಪೊನ್ನ ಮಳೆಯಂ ದಾನ | ವ್ಯಸನಿ ದಶರಥನದೇಂ ಪೊಸ ಯಿಸಿದನೊ ಚೌಲೋಪನಯನ ಮಹಿಮೋತ್ಸವಮಂ
|| ೧೪೨ ||