ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೭೨

ರಾಮಚಂದ್ರಚರಿತಪುರಾಣಂ

ಮ|| ಸೊಡರಂ ಪೊತ್ತಿಸಿಕೊಂಡು ಪೋಗೆ ಸೊಡರೊಳ್ ತೇಜಂ ಗುಣಾಧಿಕ್ಯದಿಂ|
     ಕಡುಗೊರ್ವಂ ಪಡೆವಂತೆ| ತಮ್ಮ ವಿಶದಪ್ರಜ್ಞಾ ಗುಣೋತ್ಕರ್ಷದಿಂ||
     ಪಡೆಮಾತೇನರುವತ್ತುನಾಲ್ಕು ಕಳೆಯುಂ ತತ್ಕೋವಿದರ್ ಮೆಚ್ಚೆ ನೂ|
     ರ್ಮಡಿ ಮೇಲಾದುವು ರಾಮಲಕ್ಷ್ಮಣರೊಳೇಂ ಸತೇವೆ ಸಾಮಾನ್ಯ ಮೇ

ಚ|| ಕಲಿತನಮುಂ ಮಹಾಬಲಮುಮಳ್ಳನ ಕಯ್ದುವೆ ಕಯ್ದು ಪಂದೆದು|
     ರ್ಬಲನೆನಿಸಿರ್ದವಂ ಪಿಡಿದ ಕೈದುವದೇತರ ಕೈದುವೆಂಬಿನಂ||
     ಕಲಿಸಿದ ಭಾರ್ಗವಾತ್ಮಜರನೋಡಿದ ತಜ್ಞರ ಮುಯ್ವು ನೆತ್ತಿಯಂ|
     ಗೆಲೆ ಸಲೆ ರಾಮಲಕ್ಷ್ಮಣರದೇಂ ನೆರೆ ಕಲ್ತರೊ ಕೈದುವೆಲ್ಲಮಂ||೧೫೦||

ಮ|| ಮಿಗೆ ವಂದೆಲ್ಲರ ಬಿಲ್ಲ ಬಿನ್ನಣದ ಬಿಣ್ಪಂ ರಾಮನೇಸೆಂಬಿನಂ|
     ಮಿಗೆ ತನ್ನೇಸುಪಮಾನಮಾದುದೆನೆರಾಮಂ ಕಲ್ತ ಬಿಲ್ಬಲ್ಮೆಯಂ||
     ಪೊಗಳಿಲ್ವೇಳ್ಪುದೆ|ರಾಮನೊಳ್ ಸದೃಶವೆಂಬನ್ನಂ ಧನುರ್ವಿದ್ಯೆಯಿಂ|
     ಜಗಮಂ ಮೆಚ್ಚಿಸಿ ಚಾಪ ಚಾಪಲತೆಯಂ ಕೊಂಡಾಡಿದ೦ ಲಕ್ಷ್ಮಣಂ||೧೫೧||

     ಅಂತವರ್ ಸಕಲಶಸ್ತ್ರ ಶಾಸ್ತ್ರ ವಿದ್ಯಾವಿಶಾರದರಾಗಿ ಕುಮಾರ ದತ್ತಾತಿಶಯ
ಮನಪ್ಪುಕೆಯ್ವುದುಂ---

ಚ|| ಹಿಮಕರ ಬಿಂಬದಿಂ ಕಡೆದುದೋಪಳಿಕಿಂ ಪಡೆದತ್ತೊ ಪೂಗಳಿ೦|
     ಸಮೆದುದೊ ಚಂದ್ರಕಾಂತಮಣಿಯಿಂ ಬೆಸಕೆಯ್ದುದೊಮೌಕ್ತಿಕ೦ಗಳಿ೦||
     ಸಮನಿಸಿದತ್ತೊ. ಕೋಮಲಮೃಣಾಳಿಕೆಯಿಂ ಪರಿಪೂರ್ಣಮಾಯ್ತೊ ಪೇ|
     ಳಿಮಿದೆನೆ ರಂಜಿಸಿತ್ತು ರಘುರಾಮನ ಪಾಂಡುರ ದೇಹಮ೦ಡಲ೦||೧೫೨||

     ಕಂ|| ಉನ್ನತ ಲಲಾಟ ಪಟ್ಟ೦,
           ಮನ್ನಿಸದಷ್ಟಮಿಯ ಚಂದ್ರನಂ ನಗೆಗಣ್ಗಳ್|
           ಮುನ್ನಡೆವಿಡಿದುವು ಕಮಳಮ
           ನಿನ್ನೇವಣ್ಣಿಪುದೊ ರಾಮನಭಿರಾಮತೆಯಂ||೧೫೩||

ಚ|| ತೆರೆ ಕರೆಗಣ್ಮಿದಿಂಗಡಲ ಗಾಡಿಯನೇಳಿಸೆ ತೋರಮುತ್ತಿನೈ|
     ಸರದ ಮರೀಚಿಯಿಂ ಸಿರಿಯ ತಾಯ್ವನೆ ರಾಮನ ಪೇರುರಂ ಮನೋ||
     ಹರಮೆನಿಸಿತ್ತು ವಾರವನಿತಾಜನ ವಶ್ಯವಿಧಾನ ವೇದಿಯೊಳ್|
     ದೊರೆಯೆನಿಸಿತ್ತು ಧೈರ್ಯಗುಣ ರೋಹಣಶೈಲ ಶಿಲಾತಲೋಪಮಂ||೧೫೪||


೧. ತ್ಮಜನಿನೋದಿತ ತಜ್ಞರ ಮುಯ್ವು ನೆತ್ತಿಯುಂ, ಚ,
೨. ಮುನ್ನುರೆ ಕ. ಖ. ಗ. ಘ.