ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೭೩

ತೃತಿಯಾಶ್ವಾಸಂ



      ಕಂ|| ಏಳಿಸಿದುವು ಲಕ್ಷ್ಮಣನ ವಿ
            ಶಾಳ ವಿಲೋಚನ ಯುಗಂಗಳಂಗ ಪ್ರಭೆಯಿಂ||
            ಮೇಳಿಸಿ ನಗೆಯಂ ಪಾಳಿಸಿ
            ಕಾಳಿಂದಿಯೊಳಲರ್ದ ಪುಂಡರೀಕ ಶ್ರೀಯಂ||೧೫೫||

            ಹರಿನೀಲ ರತ್ನಮಂ ಕ೦
            ಡರಿಸಿದ ಕಣ್ದೆರವಿಗೆಯ್ದೆ ಜೀವಂಬೊಯ೦||
            ತಿರೆತೋರ್ಪ ಗಂಡಗಾಡಿಗೆ
            ಪುರುಷೋತ್ತಮನೆಂದು ಕೊಂಡು ಕೊನೆದುದು ಲೋಕಂ||೧೫೬||

ಚ|| ಮನಮನಲರ್ಚಿದತ್ತು ಪುರುಷೋತ್ತಮನುಚ್ಚ ಲಲಾಟ ಲೇಖೆ ಕೃ
     ಷ್ಣನ ಕುರುಳೋಳಿ| ವಿಷ್ಣುವಿನ ಪೇರುರಮಾಯತಿವೆತ್ತ ವಾರಿಜಾ|
     ಕ್ಷನ ಧವಳೇಕ್ಷಣ೦ ಪುರುಷಸಿಂಹನ ಸಿ೦ಹ ಕಟೀತಟಂ ಜನಾ|
     ರ್ದನನ ಭುಜಂಗ ಭೀಮ ಭುಜಮಂಬುಜನಾಭನ ನಾಭಿಮಂಡಲಂ||೧೫೭||

     ಪೊಳೆಯೆ ನಖಾಂಶುಮಂಡಲ ಫಣಾಮಣಿ,ಪಂಚಫಣಾಸಿತಾಹಿಗಳ್
     ಬಳೆದಪುವೀಂಟಲೆಂದು ದಶಕಂಠನ ಬಲ್ಲುಸಿರಂತದೀಯ ನಿ||
     ರ್ಮಳತರ ಕೀರ್ತಿ ದುಗ್ಧರಸಪಾನಮನಂಬಿನೆಗಂ ಪೊದಳ್ದು ಕೋ|
     ಮಳಿಕೆಯನಾಳ್ದು ನೀಳ್ದು ಬಗೆಗೊಂಡುವು ಕೃಷ್ಣನ ಬಾಹುಶಾಖೆಗಳ್||೧೫೮||

ಉ|| ಹಾರ ಮರೀಚಿಯಂ ಮರಕತಚ್ಛವಿಯಂ ಗೆಲೆ ದೇಹದೀಪ್ತೀ ನೀ
     ಹಾರ ಮರೀಚಿಯಂ, ಕುಸುಮ ಸಾಯಕನಂ ಗೆಲೆ ಗಂಡಗಾಡಿ
     ಠೀರವ ನಾದಮಂ, ಜಲಧರಧ್ವನಿಯಂ ಗೆಲೆ ಬೇರೆಬೇರೆ ಗಂ|
     ಭೀರರವ೦ ಬಲಾಚ್ಯುತರದೇನೆಸೆದಿರ್ದರೊ ರಾಮಲಕ್ಷಣರ್

ಮ|| ರಣದೊಳ್ ರಾವಣನಂ ಜವಂಗೆ ಪೊಸತಿಕ್ಕಲ್,ತಾರಶೈಲಕ್ಕೆ ತೆಂ
      ಕಣದಂ ಕಂಕಣದಂತೆ ಕೈಗೆವರಿಸಲ್ ಭೂಚಕ್ರಮಂ ಚಕ್ರಮಂ||
      ರಣದೊಳ್ ಸಾಧಿಸಲೆಂದು ಪುಟ್ಟಿದವರೇ೦ ಸಾಮಾನ್ಯರೇ ರಾಮ ಲ
      ಕ್ಷ್ಮಣರಪ್ರಾಕೃತವಿಕ್ರಮರ್ ತ್ರಿಭುವನ ಪ್ರಖ್ಯಾತ ಕೀರ್ತಿಧ್ವಜರ್‌||೧೬೦||

      ಅ೦ತು ರಾಮ ಲಕ್ಷ್ಮಣ ಭರತ ಶತ್ರುಘ್ನರೆಂಬ ನಾಲ್ವರ್‌ ತನೂಭವರುಂ ನಾಲ್ಕುಂ ರತ್ನಶಿಲಾಸ್ತಂಭ೦ಗಳಂತೆ ರಘುಕುಲ ಸಮುದ್ಧರಣ ಸಮರ್ಥರಾಗೆ ದಶರಥಂ ಪರಿಪೂರ್ಣ ಮನೋರಥನಾಗಿ--


೧. ಗೆಯ್ದು, ಕ. ಖ. ಗೆಯ್ದ. ಚ.