ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೮

ರಾಮಚಂದ್ರ ಚರಿತಪುರಾಣಂ

ವುದುಂ, ಬಿಸಿಲ್ಗು ದುರೆಯಂತೆ ಪೊಳೆದುಚ್ಚೈಶ್ಶ್ರವದಂತೆ ನಭಕ್ಕೆ ನೆಗೆದ ರವಿರಥ
ವಾಜಿಯಂತೆ ಪವನ ಪಥದೊಳ್ ಪರಿವುದುಂ--

ಕಂ||ತ್ರಿದಶಂ ಮೇಣ್ ಖಚರಂ ಮೇಣ್
ಕುದುರೆಯ ರೂಪಿಂದಮರಸನಂ ಮುನ್ನಿನ ಜ||
ನ್ಮದ ಪಗೆವನುಯ್ದನಂತ
ಲ್ಲದೊಡೆ ವಿಯದ್ಗಾಮಿಯಪ್ಪ ಕುದುರೆಗಳೊಳವೇ||೧೨೧||

ಎಂದು ಸಕಳ ಪರಿಜನಂ ವಿಕಳಮಾಗಿಯುಂ ನೈಮಿತ್ತಿಕನಿಂದರಸನ ಬರವ
ನರಿದುಮ್ಮಳಮನುಟದಿರ್ಪುದುಮಿತ್ತಲ್--

ಕಂ||ಎಡೆಯೆಡೆಯ ಬೆಟ್ಟನೆಡೆಯೆಡೆ
     ಯಡವಿಯನೆಡೆಯೆಡೆಯ ನಾಡನೆಡೆಯೆಡೆಯೂರಂ||
     ಮಿಡಿದನಿತು ಬೇಗದಿಂ ಕಳಿ
     ದೊಡರಿಸಿದುದು ನೃಪತಿಗಾಹಯಂ ವಿಸ್ಮಯಮಂ||೧೨೨||

ಚ || ತ್ವರಿತದಿನೆಯ್ದೆವಂದು ಪುರಮಂ ರಥನೂಪುರಚಕ್ರವಾಳಮಂ|
      ಪುರ ವನ ವೀಧಿಯೊಳ್ ನಡೆಯೆ ವಾಜಿ ವಿಳಂಬಿತದಿಂ ಧರಾಧಿಪಂ||
      ಧರಣಿಗೆ ಪಾಯ್ದು ಕಯ್ಯ ಕರವಾಳಳಿಮಾಳೆ ಸರೋಜ ಕೋಶದೊಳ್|
      ಮೊರೆಯದೆ ನೀಳ್ದವೋಲಿರೆ ವಸಂತನನೇಳಿಸಿದಂ ವನಾಂತದೊಳ್||೧೨೩||

      ಕಂ || ಇಡಿದಡರೆ ಕಾಯ್ತ ಮಾಮರ
             ದಡಿಯೊಳ್ ವಿಶ್ರಮಿಸಿ ಪಥ ಪರಿಮ್ಲಾನತೆಯಂ||
             ಕಿಡಿಸಿ ನರೇಂದ್ರಂ ತನ್ನೊಳ್
             ನುಡಿದಂ ಸಂಸ್ಕೃತಿಯ ಕರ್ಮ ವಿಷಮ ಸ್ಥಿತಿಯಂ||೧೨೪||

             ಅಮೃತಂ ವಿಷಮಕ್ಕುಂ ವ
             ಕ್ರಮಾದೊಡಾವಿಷಮುಮಮೃತಮಕ್ಕುಂ ವಿಧಿವ||
             ಕ್ರಮನುರಿದೊಡಂತೆ ಹಯಮೆ
             ನ್ನುಮನಿಲ್ಲಿಗೆ ತಂದುದಿನ್ನವಘಟತಮೊಳವೇ ||೧೨೫||

             ಆನೆಲದಿಂ ಮಾಯಾ ಹಯ
             ಮಿಾನೆಲದತ್ತೆನ್ನನೆಳಿದು ತರ್ಪುದುಮಾಕ||


೧. ನಿಂದ.