ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೧

ಪ೦ಚಮಾಶ್ವಾಸಂ


ಆಗಳಾಪುರೋಹಿತಾದೇಶದಿನನೇಕ ಮಂಗಳಾನಕ ನಿನದ ಮೊದನೆ ರಥವನೇರಿ-

ಕಂ || ರಮಣಿಯರೆರಡುಂ ಕೆಲದೊಳ್
ಚಮರರುಹಮನಿಕ್ಕೆ ಬೀತಿ ಬೆಳ್ಕೊಡೆ ಬೇರೊಂ ||
ದಮೃತಾಂಶುವನಾಕ್ಷಣದೊಳ್
ಹಿಮಾಂಶುಮುಖಿ ಮೆರೆದಳೀಕ್ಷಣಾಕರ್ಷಣಮಂ || ೪೭||

ಆಗಳಾಸ್ಯಂದನನ್ನಂ ಸುತ್ತಿ ಮುತ್ತಿ ಕುಂಚದಡಪದ ಡವಕೆಯ
ಕನ್ನಡಿಯ ಪರಿಚಾರಿಕೆಯರುಮೊಡನಾಡಿಗಳಪ್ಪಯೂ ರ್ವರ್ ಕನ್ನೆಯರುಂ ಮಂಗಳೋಪಕರಣ
ದೃಶ್ಯಂಗಳಂ ಪಿಡಿದು ನಡೆಯೆ-

ಚ || ಮದನ ಪತಾಕೆ ಚುಂಬಿಸೆ ವಿಯನ್ನುಖಮಂ ಸ್ಮರಚಾಪ ಟಂಕೃತಂ ।
ಪುದಿಯೆ ದಿಗಂತಮಂ ಕುಸುಮಸಾಯಕ ಸಾಯಕವುರ್ಚೆ ರಾಜಲೋ ||
ಕದ ಮನಮಂ ಮನೋಜ ವಿಜಯಾಂಗನೆ ಜಾನಕಿ ಪೊಕ್ಕಳಾ ಸಭಾ |
ಸದನ ಸುವರ್ಣ ಗೋಪುರವನೇ ಹಿರಣ್ಮಯಮಂ ವರೂಥಮಂ || ೪೮ ||

ಕಂ || ಕನ್ನೆಯರಖಿಲ ಕಲಾ ಸಂ
ಪನ್ನೆಯರಯೂಶ್ವರಲರ್ದ ತಾವರೆಗಳವೋಲ್ ||
ತನ್ನೊಡವರೆ ಬಂದಳ್ ಸಿರಿ
ಸನ್ನಿದಮಾದಂತೆ ಸೀತೆ ಕನ್ಯಾರತ್ನಂ || ||೪೯||

ಅ೦ತುಬಂದು-

ಚ | ಜನಕಜೆ ವಶ್ಯದೀಪ ಕಲಿಕಾಕೃತಿಯಿಂ ಪುಗೆ ತತ್ಸಭಾ ನಿಕೇ |
ತನ ಕುಸುಮೋಪಹಾರ ಮಣಿರಂಗಮನಂಗಣಮಂ ನರೇಂದ್ರನಂ ||
ದನರ್ಗೆ ಮನೋವಿಕಾರದೊಡನಂಗ ವಿಕಾರವದೇಂ ಪೊದಟ್ಟುದೋ |
ನನೆಕೊನೆಯೇಲುವಂತೆ ವನರಾಜಿ ಮಧು ಪ್ರಥಮ ಪ್ರವೇಶದೊಳ್ || ೫೦ ||

ಕ೦ || ಉದಯಿಸ ಶಶಿಕಳೆ ತೆರೆಮಸ
ಗಿದ ಪಾಲ್ಗಡಲಂತೆ ನೃಪಕುಮಾರ ಕದ೦ಬ೦ ||
ಸುದತಿ ಪುಗೆ ಸಭೆಯನೊಳಕೊ೦
ಡುದು ಮದನ ವಿಕಾರ ಚೇಷ್ಟೆ ಯಂ ಬಹುವಿಧವಂ ||೫೧ ||

ದಿನಲಕ್ಷ್ಮಿಯ ಪುಗಿಲೊಳ್ ಕೋ
ಕನದಾಕರ ನಿಕರಮೊಡನೆಸಲ್ಮಸಗುವವೋಲ್ ||