ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚದಶಾಶ್ವಾಸಂ ಕಂ|| ಶ್ರೀರಾಮಾ ರಮಣಂ ವಾ ಕೈ ರಾಮಾ ವಲ್ಲಭಂ ಯಶಶ್ರೀ ಕಾಂತಂ || ವೀರಶ್ರೀ ಪತಿ ಮುನಿ ಬೃಂ ದಾರಕ ಪದ ವಿನತನಾದನಭಿನವ ಪಂಪ | ೧ || ಅಂತು ನಿರ್ಭರ ಭಕ್ತಿಯಿಂ ನಂದಿಸಿ ಸಂಸಾರ ಕ್ಷಯ ಕಾರಣಮಪ್ಪ ಧನುಮ ನಾಸ್ತ ಗುಣಂಗಳುಮಂ ಜೀವಾದಿ ತತ್ವ ಭೇದಂಗಳುಮಂ ಭಟ್ಟಾರಕರ್ ಬೆಸಸೆ ಕೇಳು ಸಂತುಷ್ಟ ಚಿತ್ತನಾದನನಂತರವಿಂದ್ರಜಿನ್ನೇಘವಾಹನ ಕುಂಭಕರ್ಣ ಮಯ ಮಾರೀಚಾದಿಗಳ್ ತಂತಮ್ಮ ಭವಾಂತರಮನವರ ಬೆಸಸೆ ಕೇಳಲ್ಲಿಯೆ ದೀಕ್ಷೆ ಗೊಂಡರ್ ಮಂಡೋದರಿಯುಂ ನಾಲ್ವತ್ತೆಕ್ಟ್ರಾಸಿರ ವಿದ್ಯಾಧರಿಯರ್ವೆರಸು ಶಶಿಕಾಂ ತಾರ್ಯೆಕಾ ಸಮಕ್ಷದೊಳ್ ದೀಕ್ಷೆಗೊಂಡು ಶುಭಧ್ಯಾನ ತಾತ್ಸರದಿನಿರ್ದಳಿತ್ತಲ್ ಪುನರ್ನಮಸ್ಕಾರಂಗೆಯ್ದು ಮಗುಟ್ಟು ಸುಗ್ರೀವಾಂಗದ ಪ್ರಭಾಮಂಡಲ ಮರುತ್ತುತ ವಿರಾಧಿತ ಪ್ರಮುಖ ವಿದ್ಯಾಧರ ಪರಿವೃತರ್ ತ್ರಿಜಗದ್ರೂಷಣ ಗಜಾರೂಢರಾಗಿಮ ಪ್ರಗುಡಿಯುಂ ಸಿಂದಂಗಳುಂ ಮುಂದುರುವರಿಯೆ ದಿನಾಧೀಶ ಬಿಂಬಂಬರಂ ಧಿ೦। ಕಿಡೆ ಶಂಘ ಧ್ಯಾನಮಾಶಾ ವಿವರವನಿತುಮಂ ತೀವೆ ಭೇರೀರವಂ ಬೆ ! : ಳೊಡೆಯುಂ ಚಿತ್ರಾತ ಪತ್ರಂಗಳುನಜನಿಸೆ ಚಂಡಾಂಶುವಂ ಮುಟ್ಟೆವ೦ದರ್ | ಕಡುಚೆಲ್ವಂ ಪೆತ್ತ ಲಂಕಾಪುರದುಷವನಮಂ ರಾಮ ಲಕ್ಷ್ಮೀಧರರ್ಕಲ್ | ೨ || ಅಂತು ಬಂದು ಉ|| ಜಕ್ಕರ ಕಾಪಿನೊಳ್ ನಡೆಯೆ ಮುಂದೆ ಸುದರ್ಶನ ಚಕ್ರ ರತ್ನಮಿ ! ರ್ವಕದೊಳಂ ವಿಯಚ್ಚರ ಕುಲಪ್ರಭುಗಳ್ ಬರೆ ಭೂಷಣಾ೦ಶುಗಳ್ || ತೆಕ್ಕನೆ ತೀವುವಂತು ನಭಮಂ ದನುಜಾಧಿಪ ರಾಜಧಾನಿಯಂ | ಪೊಕ್ಕರಯೋಧ್ಯೆಯಂ ಪುಗುವವೋಲಸಮಾನ ಬಲ ಬಲಾಚು ತರ್ || ೩ || ಅಂತು ಫುರಮಂ ಪೊಕ್ಕು ರಾಜವೀಧಿಯೊಳಗನೆ ಸೀತಾದರ್ಶನೋತ್ಸುಕ ನಾಗಿ ಬರ್ಪ ರಾಮಸ್ವಾಮಿಯ ಮನಮನದು ಚಾಮರಗ್ರಾಹಿಣಿಯರ್ ದೇವ ಸೀತಾದೇವಿಯರಿತ್ತಲೀ ಪುಷ್ಪ ಪ್ರಕೀದ್ಧ ಕಮೆಂಬ ನಗದ ನಂದನದೊಳಿರ್ದರೆಂದು ಬಿನ್ನವಿಸುವುದುಮಾದೆಸೆಗೆ ವಿಜಯವಾರಣಮನಣೆದು ನೂಂಕಿ ರಾಘವಂ ಬರ್ಪ