ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬೫ ಪ೦ಚದಶಾಶ್ವಾಸಂ ಮಾರ್ಕೊಳ್ಳದಿರೆಂದು ತನ್ನ ಮೇಲೆ ಸೂರುಳು ಮಾರ್ನುಡಿಯದಂತು ಮಾಡಿ ಕೃತಾಂತ ವಕನಂ ಕರೆದು ಸೀತೆಯನೊರ್ವಳನೇ ಬೇಗಮುದ್ದು ಭೀಮಾಟವಿಯೊಳಕ್ಕೆ ಬಾರೆಂದು ಪೇದುಮಾ ಮಾತಂ ಲಕ್ಷಣಂ ಕೇಳು ತಲ್ಲಳಿಸಿ ರಾಮಸ್ವಾಮಿಯ ಪಾದಾರವಿಂದಕ್ಕೆ ವಿನತನಾಗಿ ಮತ್ತೆ ಮಿಂತೆಂದಂ ಚ | ಜನಕ ತನೂಜೆ ನೆಟ್ಟನೆ ಮಹಾಸತಿ ಗರ್ಭಿಣಿ ಪಾಪಭೀರು ಕಾ ! ನನಮತಿ ರೌದ್ರನಲ್ಲಿ ಸಲಗಂಜದೆ ಪಾತಕಮಕ್ಕು ಮಂಬಿದಂ || ನೆನೆಯದೆ ಬಾಯ ಬಂದ ತೆ ಆದಿಂ ಪೇಜರೆಂದೊಡೆ ಕೇಳು ಬೆಟ್ಟವೆ | ಟ್ಟನೆ ಬಿಸುಡೆಂದು ನಿಷ್ಕರುಣ ವೃತ್ತಿಯಿನಿಂತುಸಿರಿ ತಕ್ಕುದೇ ! ೭೨ || ಎಂದುಲ್ಲು ನುಡಿದಟ್ಟಿ ಕಲಿಯದೆನಗೆ ಕ್ಷಮಿಯಿಸುವುದೆನೆ ರಾಘವ ನಿಂತೆಂದಂ ಕಂ || ಪcಯಕ್ಕೆ ಪಾಪಮಕ್ಕೆಮ ಸಲುಗ೦ಪುವೆನೆನಗೆ ಕೂರ್ಪೊಡುಸಿರದಿರಿನ್ನೆ | ದಲದೆ ಸೀತೆಯ ಸ೦ಬಲ ನುಲದೇಂ ಲೋಕಾಪವಾದ ಭೀರುವೊ ರಾಮಂ !! ೭೩ || ಅಂತು : ಸೌಮಿತ್ರಿಯನುಬೈಗಂ ಬಡದಿರೆಂದು ಬಾರಿಸಲೊಡಂ ಸಭೆಯಿನೆಟ್ಟು ಪೋಪುದುಮನಂತರಂ ಕೃತಾಂತವಕ್ಕನಂ ರಾಮಸ್ವಾಮಿಯೆಂದನಯೋಧ್ಯಾ ನಗರದ ಸಮ್ಮೇದ ಪರ್ವತದ ಸಮೀಪದೆಡೆಯ ಜಿನಾಲಯಂಗಳಂ ವಂದಿಸಿ ನಿನ್ನ ಬಯಕೆ ಯಂ ತೀರ್ಚಿ ಬರ್ಸ೦ ಬನ್ನಿಮೆಂದು ಸೀತೆಯನೊಡಗೊಂಡು ಪೋಗಿ ಭೀಮಾಟವಿ ಯೊಳ್ ನಿರ್ಜ೦ತುಕ ಪ್ರದೇಶದೊಳ್ ಬಿಟ್ಟು ಬರ್ಪುದೆನೆ ಕಂ || ಸೇವೆಯೆ ಕಷ್ಟಂ ಸೀತಾ ದೇವಿಯನೀಡಾಡಿ ಬರ್ಪುದಡವಿಯೊಳೆನೆ 'ದೋ !! ಷಾವಿಲನನಳ್ಳಿ ರಾಘವ ದೇವಂಗೆ ಕೃತಾಂತವಕ್ರನದನೆಗೊಂಡಂ || ೭೪ || ಅ೦ತು ಬೆಸನಂ ಕೈಕೊಂಡು ಸೀತಾದೇವಿಯ ಕೆಲಕ್ಕೆ ಬಂದು - - - - - - - - - - - - 1. ಎ೦ದು ನುಡಿದಲು ಸಿತಾದೇವಿಯ: ಇತಿವೃತಾಗ.ಣ ಪುಣಿ ಮಂಡನಯನಟ್ಟ. 2. ದೋಷಾವಿಲನುನಳ್ಳಿ, ಚ. ಗ, ಘ