ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಷಡಶಾಶ್ವಾಸಂ ೫೬ ಕಂ|| ಬಗೆಗಿಡಿಸಿ ಮೋಹನೀಯಂ ನಗಧರ ಶವಧಾರಿಯಾಗೆ ಷಣ್ಮಾಸಮುದೇಂ || ನೆಗಟ್ಟು ದೊ ಸಲೆ ಬಲದೇವನ ಹೆಗಲ ಸೆಣಂ ಕುಂದದೆಂಬ ನಾಲ್ಕು ಡಿ ಜಗದೊಳ್ | ೫೩ | ಅಂತು ರಾಮಸ್ವಾಮಿ ರಾಜ್ಯ ರಕ್ಷಣಮಂ ಮಅಲೆದು ಲಕ್ಷಣ ವಿಯೋಗದಿಂ ವಿಕಲನಾಗಿರೆ ಕೆಲದ ನೆಲದರಸುಮಕ್ಕಳ್ ಪೊಡರ್ಪುಗೆಟ್ಟು ಮಟ್ಟಮಿರ್ಪುದುಮಿತ್ತ ಲಿಂದಗಿಯ ಮಗನಪ್ಪ ವಜ್ರಮಾಲಿ ಸುಂದರನ ಮಗನಪ್ಪ ಚಾರುರತ್ನಂಬೆರಸು ಪಲರ:ಮಂ ಕೂಡಿಕೊಂಡಿದ್ದೆ ಗಾಸನ್ನಮಾಗೆ ಬೀಡಂಬಿಟ್ಟುದಂ ರಾಮಂ ವಚನ ಪರಂಪರೆಯಿಂ ಕೇಳು ಲಕ್ಷಣನಂ ಬಿಟ್ಟು ಪೋಗಲಾಟದತಿ ದುಃಖಿತನುಂ ಕಲುಷ ವಶಗತನುವಾಗಿ ನಿಜ ವಜ್ರಾವರ್ತ ಚಾಪಮುಮನಗ್ನಿಮುಖ ಶಿಲೀಮುಖಮುಮಂ ನೋಡುತ್ತುಮಿರೆ ದೇವಗತಿ ವಡೆದ ಜಟಾಯುವುಂ ಕೃತಾಂತವನುವಾಸನಳಿ?೦ಪ ಮಾಗಲವಧಿಬೋಧದಿಂ ಲಕ್ಷಣಂ ಮರಣ ಪ್ರಾಪ್ತನಪ್ಪುದುಂ ರಾಮಂ ಶೋಕಾಭಿ ಭೂತನಾಗಿರೆ ಪಗೆವಡೆಯಿಆಯಲೆಂದು ಬಂದಯೋಧ್ಯೆಯಂ ಬಳಸಿ ಬಿಟ್ಟಿರ್ದುದನ. ದಿರ್ವರ್ ದೇವರುಂ ಬಂದು ಮಾರ್ಪಡೆಯನೋಡಿಸುವದುಂ ವಜ್ರಮಾಲಿಯುಂ ಚಾರುರತ್ನ ನುಂ ತಮಗದುವೆ ನಿರ್ವ(ಗ ಕಾರಣವಾಗೆ ಪಲಬರರಸುಮಕ್ಕಳೊರಸು ರತಿವೇಗ ಭಟ್ಟಾರಕರ ಪಕ್ಕದೆ ತಪಸ್ಕೃರಾದರಿತ ಕೃತಾಂತವಕ್ರ ಜಟಾಯು ದೇವರ್ಕಳ್ ರಾಮನಲ್ಲಿಗೆ ಬಂದು ಕಂ|| ಎನಿತಾನುಂ ತೆ ಆದಿಂ ಧ ರ ನಿರೂಪಣೆಗೆಯು ಮೆಂತು ಮೇನಾರ್ತರೆ ರಾ || ಮನ ವಿಕಲತೆಗಿಡಿಸಲ್ ಮು ನಿನ ಭವದನುಬಂಧಮಂ ಕಲ್ಬುವರೊಳರೇ ೫೪ 1 ಅಂತು ಧರ ವಾತ್ಸಲ್ಯದಿ೦ ರಾಮನ ವೈಕಲ್ಯಮಂ ಕಳೆಯಲೆಂದೊಂದೆಡೆ ಯೋಳ್ ನಯನ ಪಥದೊಳಿರ್ದು ಮಪ್ರಕಲನೊಂದಂ ತೀವಿ ನೀರಂ ಪೊಸೆದು ಸಿಕತದೊಳ್ ಗಾಣಮಂ ಪೊಯ್ದು ಮತ್ತಂ | ಶಿಲೆಯೊಳ್ ಧಾನ್ಯಂಗಳಂ ಬಿತ್ತಿಯುಮೊಣಗಿದ ಭೂಜಕ್ಕೆ ನೀರ್ವೋಯ್ತು ದುಂ ಕೊ ? ಟಲೆವಟ್ಟ ನಿಷ್ಪಲೋದ್ಯೋಗಮನೊಡರಿಪುದೇನೆಂಬುದುಂ ದೇವರೆಂದರ್ | ಬಲದೇವಂಗಣ್ಣ ನೀನೀ ಪೆಣನನಪಿನಿ೦ ಪೊತ್ತಿರಲ್ ಬರ್ಪುದುಂಟೀ ॥ ೫೫ ೧