ಪುಟ:ರಾಯಚೂರು ವಿಜಯ ಭಾಗ ೧ .djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಗ್ರಂಥಮಾಲೆ ಇಪ್ಪತ್ತನೆಯ ಪ್ರಕರಣ. ರಾ ಯ ಚ ರು ದುರ್ಗ, ಶಿ ಕೃಷ್ಣಾ ತುಂಗಭದ್ರಾ ನದಿಗಳ ಮಧ್ಯ ಪ್ರದೇಶದಲ್ಲಿ ರಾಯರು ಎಂಬ ದುರ್ಗವೊಂದಿರುವುದು, ಆ ದುರ್ಗವು ಸಾಧಾರಣವಾದುದೇ ಆದ ರೂ ಚರಿತ್ರೆಯಲ್ಲಿ ಬಹಳ ಪ್ರಖ್ಯಾತವಾದುದು. ಈ ಕಥೆಯು ನಡೆದ ಕಾಲ ದಲ್ಲಿ ಅದು ಬಿಜಾಪುರಕ್ಕೆ ಸೇರಿತ್ತು. ಇದನ್ನು ಕೆಲವು ಕಾಲ ವಿಜಯ ನಗರದವರೂ ಮತ್ತೆ ಸ್ವಲ್ಪ ಕಾಲ ಬಿಜಾಪುರದವರೂ ವಶಪಡಿಸಿಕೊಳ್ಳು ತಿದ್ದರು. ಇದನ್ನು ವಶಪಡಿಸಿಕೊಳ್ಳಲು ಈ ಎರಡು ರಾಜ್ಯದವರಿಗೂ ಎಷ್ಟೋ ಸಾರಿ ಯುದ್ಧಗಳು ನಡೆದಿದ್ದುವು. ಈ ಗಡಿಯದುರ್ಗವನ್ನು ತಮ್ಮ ವಶಪಡಿಸಕೊಳ್ಳಬೇಕೆಂದು ಶ್ರೀಕೃಷ್ಣದೇವರಾಯರು ಸಮಯವನ್ನು ಕಾದು ಕೊಂಡಿದ್ದರು. ಈ ಕಾಲದಲ್ಲಿ ಬಿಜಾಪುರಕ್ಕೆ ಇನ್ನೆ ಆದಿಲ್‌ಪಹಾ ಎಂಬವನು ದೊರೆಯಾಗಿದ್ದನು. ಅವನು ರಾಯಚೂರನ್ನು ಕಾಪಾಡುವುದಕ್ಕಾಗಿ ತೋಫ‌ರ್ಖಾ ಎಂಬವನನ್ನು ನೇಮಿಸಿದ್ದನು. ಇವನು ಮೊದಲು ಹಿಂದು ವಾಗಿದ್ದು ಧನಾಪೇಕ್ಷೆಯಿಂದ ಮಹಮ್ಮದೀಯ ಮತವನ್ನು ಅವಲಂಬಿಸಿ ದನು. ಇತರ ಹಿಂದುಗಳನ್ನೂ ಮಹಮ್ಮದೀಯರನ್ನಾಗಿ ಮಾಡಿ ಅವರಿಗೆ ಉತ್ತಮಗತಿಯನ್ನುಂಟುಮಾಡಬೇಕೆಂದು ಬಹಳವಾಗಿ ಕುತೂಹಲರಡು ತಿದ್ದನು. ಖಾನನು ಬಹಳ ಶರನು. ಆದುದರಿಂದಲೇ ಅವನು ರಾ ಯ್ಯರಂತಹ ಮುಖ್ಯ ದುರ್ಗದ ಕಾವಲಿಗೆ ನಿಯಮಿತನಾಗಿದ್ದನು. ಈ ತೋಫಖಾನನು ಹಿಂದುವಾಗಿದ್ದುದರಿಂದ ಇತರ ಮಹಮ್ಮದೀಯ ಸರ ದಾರರು ಇವನನ್ನು ಅಷ್ಟು ಉತ್ತಮನೆಂದು ಭಾವಿಸಿರಲಿಲ್ಲ. ಆದುದರಿಂದ ದಿ