ಪುಟ:ರಾಯಚೂರು ವಿಜಯ ಭಾಗ ೧ .djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೦ ಕರ್ಕಟಿಕಗ್ರಂಥಮಾಲೆ ಶಂ-“ ಆ ಮಾಲತಿಯು ನನಗೆ ಒಂದು ಕಾಗದ ಅನಂಗಸೇನೆಯ ಸಂತಾಪವು ಸಂಪೂಣt”ವಾಗಿ ನಶಿಸಿತೆಂದು ನಿನ್ನೊಡನೆ ಮಾತನಾಡಿ ನಿನಗೆ ಈ ಕಾಗದವನ್ನು ತಲುಪಿಸುವುದಕ್ಕಾಗಿ ಹೀಗೆ ಸುಳ್ಳು ಹೇಳಬೇಕೆಂದು ಹೇಳಿದ್ದಳೆಂದು ಬರೆದಿದ್ದಳು. ಎರಡನೆಯ ಕಾಗದ ವನ್ನು ಅನಂಗಸೇನೆಯ, ಸಾರ್ವಭೌಮರ ಹೃದಯವನ್ನು ಕರಗಿಸುವುದ ಕ್ಯಾಗಿ ಬರೆದುಕೊಂಡಿದ್ದಳು. ರಾಮರಾಜ-' ಅಯ್ಯಾ ! ನೀನು ನಿನ್ನ ಕೆಲಸವನ್ನು ನೋಡಿಕೊ ಇಸ್ತಾ ಇದೇ ಸಮಯದಲ್ಲಿ ಈ ದೇವಾಲಯದಲ್ಲೇ ನನ್ನನ್ನು ಕಾಣು ತಿರು” ಎಂದು ಹೇಳಿ ( ಸಹೋದರಾ ! ತಿರುಮಲರಾಯ ! ನೀನು ಹೋ ದ ಕಲಸವೇನಾಯಿತು ? " ತಿರು-“ ಸಹೋದರನೇ ? ಆ ಮರುದಿನವೇ ಪ್ರಹರೇಶರಪಾತಾ। ದಿಗಳನ್ನು ಕಂಡುಹಿಡಿದು ಅವರ ಹಿಂದೆಹಿಂದೆಯೇ ಬರುತ್ತಿದ್ದನು. ನಮ್ಮ ಮಂತ್ರಿಪುಂಗವರು ಈ ಪ್ರಕರೇಕ್ಟರಾದಿಗಳ, ರಾಯರಿಗೆ ಹೋಗು ವುದಾದರೆ ಸುಮ್ಮನಿರು ಬೇರೊಂದು ಸ್ಥಳಕ್ಕೆ ಹೋಗುವುದಾದರೆ ಅವ ರನ್ನು ಬಂಧಿಸಿ ಕರೆದುಕೊ೦ಡು ಬಾ, ಎಂದು ಆಜ್ಞೆ ಮಾಡಿದ್ದುದರಿಂದ ನಾನು ಮಧ್ಯಮಾರ್ಗದಲ್ಲಿ ಏನನ್ನೂ ಮಾಡಲಾಗಲಿಲ್ಲ. ಈಗ ಇವರನ್ನು ಹಿಡಿದುಕೊಂಡು ಹೋಗಬೇಕಾದರೆ ಎಷ್ಟು ಕಷ್ಟ ಪಡಬೇಕು ! ಬುದ್ದಿ ಸಾಲಿ ಗಳಾದ ನಮ್ಮ ಮಂತ್ರಿಯವರು, ನನಗೆ ಹೀಗೆ ಆಜ್ಞಾಪಿಸುವುದರಲ್ಲಿ ಏನು ಅಭಿಪಯವಿರಬಹುದು ? " - ರಾಮರಾಜ- ತಿರುಮಲರಾಯ ! ತಿಮ್ಮರಸರ ಬುದ್ದಿಯು ಅದ್ದಿ ತೀಯವಾದುದು. ಮಹತ್ಸಲವಿಲ್ಲದಿದ್ದರೆ ಹೀಗೆ೦ದಿಗೂ ಆಜ್ಞಾಪಿಸುತ್ತಿರಲಿಲ್ಲ. ನಮ್ಮ ರಾಜಮಂತ್ರಿಗಳಿಬ್ಬರಿಗೂ ರಾಯ್ಕರನ್ನು ಹಿಡಿದುಕೊಳ್ಳಬೇಕೆಂದು ಬಹಳಕಾಲದಿಂದ ಯೋಚನೆಯಿರುವುದು, ಆದರೆ ಬಿಜಾಪುರದ ರಾಜನು ದಿ ರ ಎ ಕ ಟಿ ಬ