ಪುಟ:ರಾಯಚೂರು ವಿಜಯ ಭಾಗ ೧ .djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೮ ಕರ್ಣಾಟಕ ಗ್ರಂಥಮಾಲೆ MMMMwwwMwwwMMAM •wwvwwwvvvvy ಅನಂತರ ಖಾನನು ಅತ್ಯಾನಂದಭರಿತನಾಗಿ ರಾಮಯಮಂತ್ರಿಯನ್ನು ಕರೆದುಕೊಂಡುಬರುವುದಕ್ಕೆ ಒಬ್ಬ ಆಳನ್ನು ಕಳುಹಿಸಿದನು. ರಾಮಯ ಮಂತ್ರಿಯು ಜಾಗ್ರತೆಯಾಗಿಯೇ ಅಲ್ಲಿಗೆ ಬಂದು ಉಚಿತಾಸನದಲ್ಲಿ ಕುಳಿತು ಕೊಂಡನು. ಆಗ ಭಾನನು ಆತನನ್ನು ನೋಡಿ, “ ಓ ಅಮಾತ್ಯತೆಷ್ಟರೇ ! ನಾನು ಬಂದಕಲಸ ಮುಗಿಯಿತು, ನಾನು ನಮ್ಮ ಊರಿಗೆ ಹೊರಡುವೆನು. ತಕ್ಕ ಸಮಯದಲ್ಲಿ ನಮಗೆ ಹೇಳಿ ಕಳುಹಿಸಿದರೆ, ಸೈನ್ಯಸಮೇತನಾಗಿ ಬಂದು ಸಹಾಯಮಾಡುವೆನು. ಮೊನ್ನೆ ಯ ಸಭೆಯಲ್ಲಿ ನಿಮ್ಮ ರಾಜಕುಮಾರನು ಮಾತನಾಡಿದ ವಚನಗಳನ್ನು ಕೇಳಿ ಬಹಳ ಸಂತೋಷವಾಯಿತು, ಆಗಿ ನಿಂದ ಆತನೊಡನೆ ಸ್ನೇಹವನ್ನು ಮಾಡಬೇಕೆಂದು ನನಗೆ ಆಸೆ ಇರು ವುದು, ಆತನನ್ನು ಒಂದುಸಾರಿ ಇಲ್ಲಿಗೆ ಕರೆದುಕೊಂಡು ಬರಬೇಕು. ಇಲ್ಲದಿದ್ದರೆ ನನ್ನನ್ನೆ ನಿಮ್ಮ ಮನೆಗೆ ಬರಹೇಳಿದರೆ ಬರುವೆನು” ಎಂದನು. ರಾಮದುವುಂತಿಯು ಈ ಮಾತಿನ ಸ:ಣಿಯನ್ನು ಕಂಡು ಸಂದೇ ಹಚಿತ್ತನಾಗಿ ಆತನನ್ನು ಕುರಿತು, “ ಓತುರುಷ್ಕ ಕೋಷ್ಟರೇ ತಮ್ಮ ಅಭೀ ಸ್ವವನ್ನು ನೆರವೇರಿಸುವುದಕ್ಕೆ ಅಡ್ಡಿಯೇನು ? ಆದರೆ ನಮ್ಮ ರಾಜಕುಮಾರ ನಿಗೆ ಈ ದಿನ ಬಹಳ ತಲೆನೋವು ಉಂಟಾಗಿದೆ, ಮತ್ತೊಂದು ದಿನ ಕರೆದು ಕೊಂಡು ಬರುವೆನು ೨೨ ಎಂದು ಹೇಳಿದನು. 6 ಮಂತ್ರಿವಯ್ಯರೇ ! ತನ್ನ ರಹಸ್ಯವು ನನಗೆ ಗೊತ್ತಾಗಿದೆ. ಬಚ್ಚಿಟ್ಟು ಕೊಂಡರೂ ಪ್ರಯೋಜನವಿಲ್ಲ, ತಮ್ಮ ಸ್ನೇಹಿತರಾದ ನಮ್ಮನ್ನೂ ಹೀಗೆ ವಂಚೆಸಬಹುದೇ ? ಹೋಗಲಿ; ತಮ್ಮ ರಾಜಕುಮಾರಿಕೆಯನ್ನು ಇಳ ರರ ಕಣ್ಣಿಗೆ ಬೀಳದಂತೆ ಉಪಾಯವಾಡಿದುದು ಯುಕ್ತವಾಗಿಯೇ ಇರು ವುದು, ನಾನು ತಮಗೆ ಪರಮಾಪ್ತನೆಂದು ತಿಳಿಯಿರಿ, ನನ್ನಿಂದ ತಮಗೆ ಬಹಳ ಸಹಾಯವಾಗುವುದು, ಉತ್ತಮರು ಮಿತ)ರ ಕಾವ್ಯಗಳನ್ನು ಸಫಲ ಮಾಡುವರು. ಉತ್ತಮೋತ್ತಮರೂ ಮಿತ್ರಸತ್ತವರೂ ಆದ ತಾವು