ಪುಟ:ರಾಯಚೂರು ವಿಜಯ ಭಾಗ ೧ .djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ಕರ್ಣಾಟಕಕ್ರಂಘಮಾಲೆ

  • ಅದಕ್ಕೇನು ? ಖಾನ್‌ಸಾಹೇಬರು ಕಪಧವನ್ನು ತರುವುದಕ್ಕಾಗಿ ಈ ಉಂಗುರವನ್ನು ಕೊಟ್ಟಿರುವರು. ಈಗಲೇ ಹೋಗಿ ಔಷಧವನ್ನು ತಂದುಕೊಡುವೆನು, ರೋಗವನ್ನು ವಾಸಿಮಾಡಿಕೊಂಡು ಸಿದ್ದವಾಗಿರು. ನಾನು ನಿನ್ನ ಕೈಯಿಂದ ಆತನೊಡನೆ ಮಾತನಾಡಿಸಿದರೆ ನನಗೆ ಬಹಳ ದೊಡ್ಡ ಬಹುಮಾನವು ಸಿಕ್ಕುವುದು. ನೀನು ಆತನೊಡನೆ ಮಾತಾಡಿ ಆ ಬಹುಮಾನವನ್ನು ಕೊಡಿಸಿಕೊಡಬೇಕು. ಮರೆತುಬಿಟ್ಟರೆ ಆಗದು.” ಎಂದು ಮಾಲತಿಯು ಹೇಳಿದಳು.

“ಮಿತ್ರಳೇ! ನಿನಗೆ ಬರುತ್ತಿರುವ ಬಹುಮಾನವನ್ನು ನಿಷ್ಕಾರಣವಾಗಿ ನಾನೇಕೆತಪ್ಪಿಸಲಿ ? ಆತನಲ್ಲಿ ಅನುರಾಗವುಂಟಾಗುವಂತೆ ನನಗೆ ನೀನು ಮಾಡಿದರೆ, ಈ ಉಪಕಾರಕ್ಕಾಗಿ ನಿನಗೆ ಬಹುಮಾನವನ್ನು ಕೊಡು ವನು, ಆ ಮಹಾನುಭಾವನಲ್ಲಿ ನನಗೆ ಅನುರಾಗವನ್ನುಂಟುಮಾಡುವುದ ರಿಂದ ನಾನೂ ನಿನಗೆ ಒಂದು ಬಹುಮಾನವನ್ನು ಸಮರ್ಪಿಸಿ ಕೃತಾರ್ಥಳಾದೆ ನಂದು ಹೇಳಿಕೊಳ್ಳಬೇಡವೇ ? ನೀನು ಬರುವಾಗ ಬಂದು ಹರಿತವಾದ ಖಡ್ಗವನ್ನು ತೆಗೆದುಕೊಂಡು ಬಾ, ನನಗಾಗಿ ಇಷ್ಟು ಕಷ್ಟಪಟ್ಟಿರುವ ನಿನಗೆ ಖಾನನ ಪತ್ರವನ್ನು ಬಹುಮಾನಮಾಡುವೆನು. ಆಗ ಖಾನನ ಬಹುಮಾನವು ಶ್ರೇಷ್ಠವಾದುದೊ ಸನ್ನದು ಶ್ರೇಷ್ಠವಾದುದೋ ತಿಳಿಯು ವುದು.೨೨ ಎಂದು ಕೂಪಪರಿಹಾಸಗಳಿಂದ ಅನಂಗಸೇನೆಯು ನುಡಿದಳು. 66 ಅಮ್ಮಾ ! ನಿನಗೆ ಇಷ್ಟು ಕೋಪವೇಕೆ ? ನಾನಿರುವಾಗ ನಿನಗೆ ಇಷ್ಟು ಶ್ರಮವನ್ನು ಕೊಡುವನೇ ? ” ಎಂದು ಮಾಲತಿಯು ಹೇಳ ಸಮಾ ಧಾನಪಡಿಸಿಗಳು. ಬಳಿಕ ರಾತ್ರಿ ಒಂದು ಹನಿವ ಕಳೆದಮೇಲೆ ಅನಂಗಸೇನೆಯ ಅನು ಮತಿಯನ್ನು ಪಡೆದು, ಉಂಗುರದ ಸಹಾಯದಿಂದ ದುರ್ಗದ ಹೊರಕ್ಕೆ ಬಂದಳು. ತನಗಿದ್ದ ನಿರ್ಬಂಧವು ತಪ್ಪಿದುದಕ್ಕಾಗಿ ಸಂತೋಷವಾಗಿದ್ದರೂ