ಪುಟ:ರಾಯಚೂರು ವಿಜಯ ಭಾಗ ೧ .djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೦ ಕರ್ಣಾಟಕಕ್ರಂಥಮಾಲೆ ತೊರೆದುಕೊಳ್ಳುತ್ತಿದ್ದಳು. ಆಕೆಗೆ ಸಮಾಧಾನಮಾಡುವುದಕ್ಕಾಗಿ ಆಕೆಯ ತೌರುಮನೆಗೆ ಹೋಗುವುದು ಒಳ್ಳೆಯದೆಂದು ಬೋಧಿಸಿ, ಆತ್ಮಹತ್ಯಮಾಡಿ ಕೊಳ್ಳದಂತೆ ತಪ್ಪಿಸಿದೆನು. ಆ ರಾತ್ರಿಯೇ ಅರಮನೆಯನ್ನು ಬಿಟ್ಟು ಆಕೆ ಯನ್ನು ಕರೆದುಕೊಂಡು ಬಂದೆನು. ಪೂಜ್ಯರಾದ ಅತ್ತೆ ಮಾವಂದಿರಿಗೂ ತಿಳಿಸುವುದಕ್ಕೆ ನನಗೆ ಅವಕಾಶ ಸಿಕ್ಕಲಿಲ್ಲ. ಆದುದರಿಂದ ನನ್ನ ಈ ಮಹಾಪರಾಧವನ್ನು ಕ್ಷಮಿಸಬೇಕೆಂದು ಪ್ರಾರ್ಥಿಸುವೆನು. ನಾನು ನಿರ್ದೋಷಿಯೆಂದು ದೇವರ ಇದಿರಿಗೆ ನನ್ನ ಆತ್ಮಸಾಕ್ಷಿಯಾಗಿ ಪ್ರಮಾಣ ಮಾಡುವೆನು. ಆದುದರಿಂದ ನನ್ನನ್ನು ಅನುಗ್ರಹಿಸಿ ಪೂರ ದಂತೆ ದಯ ಯನ್ನು ತೋರಿಸಿ ” ಎಂದು ಅಳುತ್ತಾ ಗದ್ದದ ಸ್ಪುರದಿಂದ ಕೇಳಿಕೊಂಡಳು. - ಶಂಕರರೆಡ್ಡಿಯು ವಿಜಯನಗರದ ನಿವಾಸಿ ಈತನು ರಾಯರ ಊಳಿಗದಲ್ಲಿದ್ದನು. ಹಿಂದೆ ವಿಜಯನಗರದಲ್ಲಿ ನಡೆದ ಮಲ್ಲಯುದ್ಧದಲ್ಲಿ ರುದ್ರದೇವನನ್ನು ಇದಿರಿಸಿದವನು ಈತನೇ ಎಂದು ವಾಚಕಮಹಾಶಯರು ತಿಳಿದಿರುವಿರಲ್ಲವೇ ? ಅದು ನಡೆದ ದಿನವೇ ಸುರ ಭೌಮರ ಆಜ್ಞೆಯಂತೆ ಮೈಸೂರು ರಾಜರ ಪ್ರತಿನಿಧಿಯ ಬಳಿಗೆ ಬಂದು ಕಾಠ್ಯಕ್ಕಾಗಿ ಹೋಗಲೇ ಕಾಯಿತು. ಆ ಕೆಲಸವನ್ನು ಆಗುಮಾಡಿಸಿಕೊಂಡು ವಿಜಯನಗರಕ್ಕೆ ಎಂದನು. ತನ್ನ ಮನೆಗೆ ಹೋಗಿ ನೋಡಲು ಆತನ ತಾಯಿಯು ಗೋಳಾಡು ತಿದ್ದಳು. ಕಾರಣವನ್ನು ವಿಚಾರಿಸಲು ಸೊಸೆಯಾದ ಮಾಲತಿಯು ತಪ್ಪಿಸಿಕೊಂಡು ಹೋಗಿರುವಳೆಂದು ಹೇಳಿದುದು ಮಾತ್ರವಲ್ಲದೆ ಅತ್ತೆ ಗಳಿಗೆ ಸ್ವಾಭಾವಿಕವಾದ ದೊಪೈಕದೃಷ್ಟಿಯಿಂದ, ದುಶ್ಚರಿತ್ರಳಾದ ಅನಂಗ ಸೇನೆಯ ಸಹವಾಸದಲ್ಲಿದ್ದು ಮಾಲತಿಯ ದುರಾತ್ಕಳಾಗಿರುವಳಂದು ಯೋ ಗ್ಯತಾಪತ್ರವನ್ನು ಕೊಟ್ಟಳು. ಶಂಕರರೆಡ್ಡಿಯು ವಿವೇಕಶಾಲಿಯಾದುದ ರಿಂದ ಆಗಲೇ ಯಾವಮಾತನ್ನೂ ಆಡದೆ ಮನಸ್ಸಿನಲ್ಲಿಯೇ ಕೊರಗಿಕೊಳ್ಳು ಆದ್ದನು. ಇಷ್ಟರಲ್ಲಿ ತಿಮ್ಮರಸನ ಅಪ್ಪಣೆಯಂತೆ ರಾಮರಾಜನ ಸಹಾಯ 0 ೧