ಪುಟ:ಶಂಕರ ಕಥಾಸಾರ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರೀಸಂಗ್ರಹ ೧೪ ಆಗ ಶಂಕರನು ಅಮ್ಮಾ! ಒಂದು ಮೊಸಳೆಯು ನನ್ನ ಪಾದವನ್ನು ಹಿಡಿದು ಬೆಳೆಯುತ್ತಿದೆ; ಏನು ಮಾಡಲಿ? ಪ್ರಾಣಪಾಯಕ್ಕೆ ಸಿಕ್ಕಿದೆನಲ್ಲಾ! ಅನ್ಯಾಯವಾಗಿ ದುರ್ಮರಣವಾಗುವ ಸಂದರ್ಭವು ಹಿಂತು; ನನ್ನ ಪ್ರಾಣಗಳು ಇನ್ನು ಕೆಲವು ನಿಮಿಷ ಗಳು ಮಾತ್ರ ಬದುಕಬಹುದಾದಷ್ಟು ವ್ಯವಧಾನವಿದೆ; ನಾನು ಬದುಕಿರಬೇಕೆಂದು ನಿನಗಿಷ್ಟವಿದ್ದರೆ ಸನ್ಯಾಸಕ್ಕಾದರೂ ತಡ ಮಾಡದೆ ಅಪ್ಪಣೆಯನ್ನು ಕೊಡು,” ಎಂದು ವ್ಯಸನದಿಂದ ಘಟ್ಟಿಯಾಗಿ ಕೂಗಿದನು. ನದಿಯ ದಡದ ಮೇಲಿದ್ದ ಬ್ರಾಹ್ಮಣರು, ಸನ್ಯಾಸಕ್ಕಾದರೂ ಅಪ್ಪಣೆ ಕೊಡ ಬಹುದೆಂದರು. ಆಗ ಆಕಾಶವಾಣಿಯು ಈಗ ತಡ ಮಾಡದೇ ಸನ್ಯಾಸಗ್ರಹಣವಂ ಮಾಡಿ ದರೆ ಇನ್ನೂ ಕೆಲವು ಕಾಲ ಬದುಕುವುದು ” ಎಂದಿತು. ಆರ್ಯಾಂಬೆಯು ಇದನ್ನೆಲ್ಲಾ ನೋಡಿ ಬೇರೆ ಮಾರ್ಗವಿಲ್ಲದೇ «« ಮಗುವೇ ! ನೀನು ಸನ್ಯಾಸವನ್ನಾ ದರೂ ತೆಗೆದುಕೊಂಡು ಸುಖವಾಗಿ ಬದುಕು” ಎಂದು ಚಿಂತೆಯಿಂದ ಕೂಗಿ ಹೇಳಿದಳು. ತಾಯಿಯ ಉತ್ತರವನ್ನು ಕೇಳಿದಕೊಡಲೇ ರಂಕರನು ಈಷಣಾಭಿಮಾನ ಗಳಂ ತೊರೆದು ಭೂತನಾಗಿ ಅಭಯಂ ಸರ್ವಭೂತೇಭ್ಯಃ ಎಂದು ಎರಡು ಕೈಗಳನ್ನೂ ಮೇಲಕ್ಕೆತ್ತು, ನಾವು ಶಂಕರನನ್ನು ಒಬ್ಬ ಗಂಧರ್ವರೂಸನಂ ಪೋಂದಿ ಶಂಕರಯತಿಗೆ ನಮಸ್ಕರಿಸಿ ಹೊರತು , ಶಂಕರರು ಸಂಸಾರಸಾಗರವಂ ದಾಂಟದಮೇಲೆ ಸ್ನಾನಮಾಡಿಕೊಂಡು ಮೇಲಕ್ಕೆ ದ್ದು ಬಂದು ತಾಯಿಗೆ ವಂದಿಸಿ, ದುತನ ಸುತ್ತಿದ್ದ ತಾಯಿಯಂ ಸಮಾಧಾನಗೊಳಿಸಿ ಕಷ್ಟ ಕಾಲದಲ್ಲಿ ಸ್ಮರಿಸಿಕೊಳ್ಳುವಂತೆ ಹೇಳಿ, ಅವಳಣೆಯಂ ಪಡೆದು ಕ್ರಮಸನ್ಯಾ ಸವಂ ತೆಗೆದುಕೊಂಡು ನೈಷ್ಕರ್ಮಸಿದ್ಧಿಯನ್ನು ಹೊಂದಬೇಕೆಂದು ತಕ್ಕ ಗುರುವನ್ನು ಹುಡುಕುತ್ತಾ ಹೊರಟರು. ಆ ಅಗ್ರಹಾರದ ಜನರು ಶಂಕರರನ್ನು ಆ ದಿನ ಅಲ್ಲಿಯೇ ಇದ್ದು ಮಾರ ನೆಯದಿನ ಹೊರಡಬಹುದೆಂದರು. ಶಂಕರರು ಅವರ ಮಾತಿನಂತೆ ಆ ದಿನವೆಲ್ಲಾ ಅಲ್ಲಿನ ಕೃಷ್ಣ ದೇವಾಲಯದಲ್ಲಿ ನುಂದ ಸೇವಿಸಲ್ಪಡುತ್ತಿದ್ದರು.