ಪುಟ:ಶಂಕರ ಕಥಾಸಾರ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ ಕಾದಂಬರೀಸಂಗ್ರಹ ಬಂದು ಅಲ್ಲಿರುವ ವಿದ್ವಾಂಸರಿಗೆ ತಮ್ಮ ಭಾಷ್ಯಗಳಂ ಪ್ರವಚನ ಮಾಡಿಸಿ, ಅಲ್ಲಿ ಒಂದು ರಮ್ಯವಾದ ಸ್ಥಳದಲ್ಲಿ ಮನೋಹರವಾದ ದೇವಾಲಯವಂ ಕಟ್ಟಿಸಿ, ಒಳ್ಳೆಯ ಸುಮುಹೂರ್ತದಲ್ಲಿ ಮಂತ್ರಶಾಸ್ಪೋಕಪ್ರಕಾರವಾಗಿ ಬೀಜಾಕ್ಷರಗಳಿಂದ ಕೂಡಿದ ಶ್ರೀ ಚಕ್ರವಂ ಬರೆದು ಅಲ್ಲಿ ಶಾರದೆಯನ್ನು ಪ್ರತಿಷ್ಠೆ ಮಾಡಿ, ಆಕೆಯನ್ನ ನೇಕವಿಧವಾಗಿ ಪ್ರಾರ್ಥಿಸಿ, ವ್ಯಾಖ್ಯಾನ ಸಿಹ್ಮಾಸನ ಪ್ರತಿಷ್ಟಾನಂತರದಲ್ಲಿ, ದಕ್ಷಿಣಾಮ್ರಾ ಯ ಜಗ ದ್ಗುರು ಶ್ರೀಮಠದ ಶಾರದಾ ಪೀಠದಲ್ಲಿ ಸುರೇಶ್ವರಾಚಾರೈರನ್ನು ಜಗದ್ಗು ರುಪೀಠ ಪಟ್ಟಾಭಿಷಿಕ್ತರನ್ನಾಗಿ ಮಾಡಿ, ಶ್ರೀಮಠದ ಕಾರ್ಯನಿರ್ವಹಣಕ್ಕಾಗಿ ಶೃಂಗಗಿರಿ ಭಟ್ಟ ನೆಂಬ ಮಹಾ ಭೂತನನ್ನು ನಿಯಮಿಸಿದರು. ದಕಮವಲ್ಲರೀ ಗುರುಬ್ರ್ರಹ್ಮವಿದ್ಯಾಪ್ರಚಾರಾಯ ಶಿಷ್ಯತಿ | ಪ್ರಬಂರ್ಧಾ ಕೃರ್ತಾ ವೀಕ್ಷ್ಯ, ಸಂಪ್ರಾಸ್ಯ ಮೋದಮ್ || - ಸುರೇಶಾಯ ಚಾದಾದನುಜ್ಞಾಂ ಕಯೋತ್ | ತ್ರಯೀಶಿರ್ಷಯೋಃ ಕರ್ತುಕಾಮಾಯಟೀಕಾಮ್ | ಸ 1 ಕೊಂದುದಿನ ಸುರೇಶ್ವರಾಚಾರ್ಯರು ಆಚಾದ್ಯರಲ್ಲಿಗೆ ಹೋಗಿ Hಬ ನಮಸ್ಕರಿಸಿ, ನಾನು ಭಾಷ್ಯಗಳಿಗೆ ವಾರ್ಷಿಕವನ್ನು ರಚಿಸಬೇಕೆಂ ದಿದೇನೆ ; ಅಪ್ಪಣೆಯಾಗಬೇಕು” ಎಂದು ಪ್ರಾರ್ಥಿಸಲು ಆಚಾ ರ್ಯರು ಹಾಗೆಯೇ ಮಾಡೆಂದರು. ಇದನ್ನು ತಿಳಿದ ಚಿತ್ಪುಖರೇ ಮೊದಲಾದವರು ಆಚಾರೈರ ಸಮೀಪಕ್ಕೆ ಹೋಗಿ * ಸುರೇಶ್ವರರು ಕರ್ಮವಾದಿಗಳಷ್ಟೆ. ಈಗ ಅವರು ಮಾಡುವ ವೃತ್ತಿಗ್ರಂಥವು * ಜ್ಞಾನಪರವಾಗದೇ ಕರ್ಮಪರವೆಲ್ಲಾಗುವುದು ? ' ಎಂಬ ಶಂಕೆಯಿರುವುದು, ಆದ ರಿಂದ ಎಷ್ಟ್ರವತಾರಿಯಾದ ಪದ್ಮಪಾದನನ್ನು ವಾರ್ತಿಕ ರಚನೆಮಾಡುವಂತೆ ಹೇಳ ಬಹುದು' ಎಂದರು. ಇಷ್ಟರಲ್ಲಿ ಪದ್ಮಪಾದಮುನಿಯು ಬಂದು “ ಹಸ್ತಾಮಲಕ್ಷ ನನ್ನು ಭಾಷ್ಯಗಳಿಗೆ ವಾರ್ತಿಕವನ್ನು ಮಾಡುವಂತೆ ಹೇಳಬಹುದು ” ಎಂದನು.