ದೆಂದೂ ಹೇಳಿ ಕಳುಹಿಸಿದನು. ಅದರಂತೆ ಕೆಲವು ದಿನಗಳಾದ ಮೇಲೆ ಯಾರಿಗೂ ತಿಳಿಸದೆ ಒಂದುದಿನ ಪೂಜಾಕಾಲಕ್ಕೆ ದೇವ ಸ್ಥಾನಕ್ಕೆ ಬಂದು ಸ್ವಲ್ಪ ಹೊತ್ತು ಪರಮಹಂಸರ ಪೂಜೆಯನ್ನು ದೃಷ್ಟಿಸಿ ನೋಡಿದನು. ಭಾವಾವಿಷ್ಟರಾದ ಪರಮಹಂಸರಿಗೆ ಮಧು ರಾನಾಥನು ಬಂದು ಹತ್ತಿರನಿಂತಿದ್ದು ಗೊತ್ತೇ ಆಗಲಿಲ್ಲ : ಹೀಗೆ ಅನನ್ಯಮನಸ್ಕರಾಗಿ ಮಾಡುತ್ತಿದ್ದ ಪೂಜೆ, ದೇವಿಯಹತ್ತಿರ ಮಗು ವಿನಹಾಗೆ ಹಟಮಾಡುವುದು, ಪೀಡಿಸುವುದು, ಮುಂತಾದನ್ನೆಲ್ಲ ನೋಡಿ ಮಧುರಾನಾಥನು ಅವೆಲ್ಲವೂ ಐಕಾಂತಿಕ ಪ್ರೇಮಭಕ್ತಿ ಯೆಂದು ತಿಳಿದುಕೊಂಡನು. ಹಾಗೆಯೇ ಸ್ವಲ್ಪ ಹೊತ್ತು ನೋಡು ತಿದ್ದು ಕೊನೆಗೆ ಭಕ್ತಿಯಿಂದ ದೇವಿಗೂ ಪರಮಹಂಸರಿಗೂ ದೀರ್ಘ ದಂಡ ನಮಸ್ಕಾರ ಮಾಡಿ ಮನೆಗೆ ಹೋಗಿ ಅಲ್ಲಿಂದ ದೇವಸ್ಥಾನದ ಅಧಿಕಾರಿಗಳಿಗೆ “ ಅರ್ಚಕರು ಹೇಗೆ ಬೇಕಾದರೆ ಹಾಗೆ ಪೂಜೆಮಾಡಲಿ: ಅವರಿಗೆ ಅಡ್ಡಿ ಮಾಡಕೂಡದು,” ಎಂದು ಕಾಗದಬರೆದನು. ರಾಣಿ ರಾಸರಣಿಗೂ ಈ ಸಮಾಚಾರಗಳೆಲ್ಲ ತಿಳಿಯಬಂದುವು.
ರಾಣಿಯು ಆಗ್ಗಾಗ್ಗೆ ದೇವಸ್ಥಾನಕ್ಕೆ ಹೋಗುತ್ತಿದ್ದಳು. ಆಗ ಪರಮಹಂಸರು ಸುಮಧುರವಾದ ಕಂಠದಿಂದ ಭಕ್ತಿಯುಕ್ತವಾಗಿ ಹಾಡುತ್ತಿದ್ದ ದೇವರ ಕೀರ್ತನೆಗಳನ್ನು ಕೇಳಿ ಬಹಳ ಆನಂದಪಡುತ್ತಿ ದ್ದಳು. ಒಂದುದಿನ ಹೀಗೆ ದೇವಿಯದರ್ಶನಕ್ಕೆ ಹೋಗಿದ್ದವಳು ಪರಮಹಂಸರನ್ನು ಕರೆದು ಒಂದು ಕೀರ್ತನೆಯನ್ನು ಹಾಡಬೇಕೆಂದು ಕೇಳಿಕೊಂಡಳು. ಅವರು ಹಾಡುತ್ತ ಹಾಡುತ್ತ ಭಾವಾವಿಷ್ಠರಾಗಿ "ಇಲ್ಲಿಯೂ ಅದೇಯೋಚನೆಯೆ ?" ಎಂದು ಆಕೆಗೆ ಬಲವಾಗಿ ಒ೦ದು ಪೆಟ್ಟನ್ನು ಕೊಟ್ಟರು, ಅಲ್ಲಿದ್ದವರೆಲ್ಲರೂ ಗಾಬರಿಯಾಗಿ ಕೂಗಾಡಲಾರಂಭಿಸಿದರು. ರಾಣಿಯು ತಾನು ಯಾವುದೋ ಒಂದು ಮೊಖದ್ದಮೆಯ ವಿಚಾರವಾಗಿ ಯೋಚನೆ ಮಾಡುತ್ತಿದ್ದಳು ಆದ್ದರಿಂದ ಸಿಟ್ಟಾಗದೆ ತನ್ನನ್ನು ಅರ್ಚಕರು ಶಿಕ್ಷಿಸಿದ್ದು ನ್ಯಾಯ ವಾಗಿದೆಯೆಂದು ಹೇಳಿ ಅವರೆಲ್ಲರನ್ನೂ ಸಮಾಧಾನವಾಡಿದಳು.