ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
33

ಕಬ್ಬಿಣದ ಕಡಲೆಯ ತಿಂದನು, ಕಳವಳದ ಕಂಬನಿ ಕುಡಿದನು, ಮುಳ್ಳಿನ ಮಾಲೆಯ ಧರಿಸಿದನು, ಬೆಂಕಿಯ ಅಂಕವನ್ನಲಂಕರಿಸಿದನು. ಅದರ ವಿವರಗಳನ್ನು ಮುಂದಿನ ಆರನೆಯ 'ಅಲೆ'ಯಲ್ಲಿ ಕಾಣಬಹುದು. ಇಲ್ಲಿ ಅದರ ಒಂದೆರಡು ಅಂಶಗಳನ್ನು ಅರುಹಿ ಮುಂದುವರಿಯುವೆ.

ಬಸವಣ್ಣನು ಭಕ್ತಿಸಾಧನವನ್ನು ಪ್ರಾರಂಭಿಸಿದ ಕೂಡಲೆ ಅವನಿಗೆ ಮನೋವಿಕಾರ- ಇಂದ್ರೀಯವಿಕಾರಗಳು ಕಾಡತೊಡಗಿದವು. ಆಗ ಆತನು ಅವುಗಳೊಡನೆ ಹೋರಾಡಿ, ಸೋತು, ಸಂಗನನ್ನು ಈ ರೀತಿ ಮೊರೆಯಿಟ್ಟನು:

ವಿಕಳನಾದೆನು ಪಂಚೇಂದ್ರಿಯ ಧಾತುವಿನಿಂದೆ.
ಮತಿಗೆಟ್ಟೆನು ಮನದ ವಿಕಾರದಿಂದ

ದೃತಿಗೆಟ್ಟೆನು ಕಾಯವಿಕಾರದಿಂದ.
ಶರಣುವೊಕ್ಕೆನು ಕೂಡಲಸಂಗಮದೇವಾ!
ಸುಚಿತ್ತದಿಂದಲೇ ಮನವು
ನಿಮ್ಮ ನೆನೆಯಲೊಲ್ಲದು, ಎಂತಯ್ಯಾ?
ಎನಗಿನ್ನಾವುದು ಗತಿ? ಎಂತಯ್ಯಾ?
ಎನಗಿನ್ನಾವುದು ಮತಿ? ಎಂತಯ್ಯಾ?
ಹರ ಹರಾ! ಕೂಡಲಸಂಗಮದೇವಾ! ಮನವ ಸಂತೈಸೆನ್ನ!

ಈ ಬಗೆಯ ಕಳವಳದ ಕಡಲೊಳಗಿಂದ ಹಾಗೂ ಅವನು ಶಿವಕರುಣದಿಂದ ಆಚೆಯ ದಂಡೆಯನ್ನು ತಲುಪಿದನು. ತನ್ನ ದೃಢವಾದ ನಿಷ್ಠೆಯ ಬಲದಿಂದ ಮಹೇಶನ ದರ್ಶನವನ್ನು ಪಡೆದನು, ಮಾಹೇಶನಾದನು. ಅದರ ಜತೆಯಲ್ಲಿ ಆತನ ಕೆಲ ಅತೀಂದ್ರಿಯ ಸಿದ್ಧಿಗಳನ್ನು ಪಡೆದನು.

ವಚನರಚನೆ:

ಮಾಹೇಶ ಬಸವಣ್ಣನು, "ಶಿವನೇ ಸರ್ವೋತ್ತಮ, ಆತನೊಬ್ಬನೇ ಪರದೈವ! ಆತನ ಭಕ್ತಿಯೇ ಮಿಗಿಲಾದುದು. ಅದನ್ನುಳಿದ ಬಾಳು