ಪುಟ:ಶ್ರೀ ಮದಾನಂದ ರಾಮಾಯಣ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಕಾಂಡ, ೧೫ ತನ್ನ ಆಸನದಿಂದ ಎದ್ದುನಿಂತನು, ಬಳಿಕ ಆತನು ವಿಶ್ವಾಮಿತ್ರರ ಪಾದಗಳಲ್ಲಿ ಮಸ್ತಕವನ್ನಿಟ್ಟು ನಮಸ್ಕರಿಸಿ, ವಸ್ತ್ರವನ್ನು ಟೊಂಕಕ್ಕೆ ಸುತ್ತಿ, ಕಿರೀಟ ವೇ ಮೊದಲಾದ ಭೂಷಣಗಳನ್ನು ಸರಿಮಾಡಿಕೊಂಡು ಮೆಲ್ಲ ಮೆಲ್ಲನೇ ಧೈರ್ಯ ದಿಂದ ಧನುಸಿನ ಸಮೀಪಕ್ಕೆ ಬಂದನು. ಆತ್ಯಾಮಸುಂದರವಾದ ರಾಮನನ್ನು ನೋ ಡಿ ಕೆಲವು ಜನರು-ttರಾವಣನಿಗೂ ಅಪಾಯಕರವಾದ ಧನುಸಿನ ಕತೆಗೇ ಈ ಹುಡುಗನು ಯಾಕೆ ಹೋಗುವನು? ನಿಶ್ಚಯವಾಗಿಯೂ ಈತನ ಆಯುಷ್ಯವು ಈ ದಿವಸಕ್ಕೆ ತೀರಿತು. ಹೀಗೆಮಾತನಾಡುವರು. ಕೆಲವರು ಧನುಸನ್ನು ನೋ ಡುವದಕ್ಕೆ ಈ ಕುಮಾರನು ಹೋಗುವನು ಎಂದರು. ಹೀಗೆ ಶ್ರೀ ರಾಮಚಂದ್ರನು ಧನುಸಿನ ಸಮೀಪಕ್ಕೆ ಹೋಗುವದರೊಳಗೆ ಅನೇಕರು ಅನೇಕ ಅಭಿಪ್ರಾಯಗಳ ನ್ನು ಮನಸಿನಲ್ಲಿ ತಂದರು, ಹೆಚ್ಚಾಗಿ ಹೇಳುವದರಿಂದೇನು? ಜನಕಮಹಾರಾ ಜನೂ ಕೂಡ ಈ ಧನುಸನ್ನು ಬಾಲಕನಾದ ರಾಮನು ಯಾವರೀತಿಯಿಂದ ಸ್ವೀ ಕಾರ ಮಾಡ್ಯಾನು? ನಾವೇನಾದರೂ ನಡುವೆ ಮಾತಾಡಲು ಅವಕಾಶವೇ ಇಲ್ಲ. ಗುರುಗಳಾದ ವಿಶ್ವಾಮಿತ್ರರ ಆಜ್ಞೆಯು ಕ್ರೂರವಾದರು” ಎಂದು ಮನಸಿನಲ್ಲಿ ಆಲೋಚಿಸಲಾರಂಭಿಸಿದನು, -, ಇತ್ಯ ಪರದೆಯ ಹಿಂದಿನಿಂದ ರಂದ್ರಗಳಲ್ಲಿ ಸಭೆಯ ವಿಷಯಗಳನ್ನೆಲ್ಲಾ ನೋಡುತ್ತಿರುವ ರಾಜಸ್ತ್ರೀಯರು-ಶಂಭೋ, ಶಂಕರಾ , ನಾರಾಯಣಾ, ಈ ಮಗುವಿಗೆ ಯಾವ ತೊಂದೆರೆಯೂ ಆಗದಂತೆ ಕಾಪಾಡುವ ಭಾರವು ನಿನ್ನನು ಹೊಂದಿರುವದು ” ಎಂದು ಪ್ರಾರ್ಥನೆ ಮಾಡಲಾರಂಭಿಸಿದರು. ರಾಜಪುತ್ರಿಯಾದ ಸೀತಾದೇವಿಯು ಕಾಮನಂತ ಸುಂದರನಾಗಿದ್ದ ಶ್ರೀ ರಾಮಚಂದ್ರನನ್ನು ನೋ ಡಲು ಎದ್ದು ನಿಲ್ಲುವಳು. ಮುಂದೆ ತನ್ನ ತಂದೆಯ ಪ್ರತಿಜ್ಞೆಯು ಸ್ಮರಣೆಗೆ ಬಂ ದೊಡನೆ, ಬಹುಗ್ರಸ್ತನಾದ ಚಂದ್ರನಂತೆ ಯೋಚನೆಗಳಿಂದ ಕಳೆಗುಂದುವಳು. ದ್ವೇಷಿಯಾದ ನಮ್ಮ ತಂದೆಯು ಇಂಥಾಷಣವನ್ನು ಯಾಕೆಮಾಡಿದ್ದಾನು? ಅಹೋ, ಈ ಮನೋಹರಸ್ವರೂಪವುಳ್ಳ ಸುಕುಮಾರನೆಲ್ಲಿ, ಮತ್ತು ಈ ಪರ್ವತದಂತ ಕಠಿ ಣವಾದ ಧನುಸೆಲ್ಲಿ? ದೀನದಯಾಳೋ ಶಂಭೋ, ಈಗ ನಾನು ಮಾಡುವ ಈ ಪಾಯವೇನು? ಪ್ರಭೋ, ನನ್ನ ಮನೋರಥವನ್ನು ನೀನೇನು ಮಾಡುವೆಯೋ ತಿಳಿ ಯದು, ನಾನಂತು ಈ ಹೃದಯಂಗಮಸ್ವರೂಪವಾದ ರಾಮನನ್ನು ಹೊರಗಿ ಮತ್ತೊಬ್ಬರನ್ನು ಸೃಷ್ಟದಲ್ಲಾದರೂ ನೋಡಲಾರೆನು, ಇಷ್ಟರ ಮೇಲೆ ನನ್ನ ತಂ ದೆಯು ಬಲಾತ್ಕಾರ ಮಾಡಿ ಮತ್ತೊಬ್ಬರಿಗೆ ವಿವಾಹಮಾಡಿ ಕೊಟ್ಟಿದ್ದೇ ಆದರೆ