ಪುಟ:ಶ್ರೀ ಮದಾನಂದ ರಾಮಾಯಣ.djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮನೋಹರಕಾಂಡ. ೨೮ ಹದಿಂದ ನನಗೆ ಜ್ಞಾನದಾಯಿತು ಎಂದು ಹೇಳಿದಳುಆಗ ಶ್ರೀ ರಾಮನು (ಜನನಿ ಹೇ, ಉಪದೇಶಮಾಡುವದು ಗುರುವಿನಕೆಲಸ, ನಾನು ನಿನಗೆ ಮಗನಾದ್ದರಿಂದ, ಈ ಕಲಸವು ನನಗೆ ಯುಕ್ತವಲ್ಲವೆಂದು ತಿಳಿದು ಬೇರೆ ಯುಕ್ತಿಯನ್ನು ಹುಡುಕಿದನು, Hಯಿಯೇ ಯಾರಿಂದಲಾದರೇನು? ದುಃಖಪರಿಹಾರವಾಗುದು ಮುಖ್ಯ ಕೆಲಸ ಇನ್ನು ಮೇಲೆ ನಿನಗೆ ಸಾಂಸಾರಿಕ ಸುಖದುಃಖಗಳ ಗಂಧವಾದರೂ ಇಲ್ಲ. ಅವೆಲ್ಲ ದೇಹದ ಪದರಿಗೆ ಬಂದವುಗಳಲ್ಲವೇ? ನೀನು ಮುಕ್ತಳಾದೆ' ಎಂದು ಹೇಳಿದನು, ಈ ರೀತಿಯಾಗಿ ಸರ್ವರಿಗೂ ಸುಖವನ್ನುಂಟುಮಾಡುತ್ತ ಸೀತಾರಾಮರು ಅಯೋಧ್ಯ ಯಲ್ಲಿ ಆನಂದದಿಂದ ದಾಸಮಾಡಿದರು ಕಾಮೋಪಾಸನಾಪ್ರಕಾರ, ವಿಷ್ಣುದಾಸರು ಗುರುವರ್ಯರೆ, ರಾಮೋಪಾಸನೆಯನ್ನು ಯಾವ ರೀತಿ ಯಿಂದ ಮಾಡಬೇಕು? ಶ್ರೀ ರಾಮಮಂತ್ರವನ್ನು ಎಂಥ ಗುರುಗಳಿಂದ ಉಪದೇಶ ತೆಗೆದುಕೊಳ್ಳಬೇಕು. ಈ ವಿಷಯಗಳನ್ನು ನಮಗೆ ಕೃಪೆಮಾಡಿ ಹೇಳಿರಿಎಂದು ಪ್ರಾರ್ಥನೆ ಮಾಡಿದರು. ಈ ಮಾತುಗಳನ್ನು ಕೇಳಿ ರಮದಾಸರು (ಶಿಷ್ಯನ ಮೋಪಾಸನೆಗೆ ಮೊದಲು ಮಂತ್ರಬೇಕಾಗುವದು. ಅದು ಸದ್ದು ರವಿನಿಂದ ಸಿಗಬೇಕು. ಗುರುಗಳು (ಪರನಿಂದೆ, ಸಿಟ್ಟು, ತಿಷ, ಅಜ್ಞಾನ, ಅಹಂಕಾರ, ದಂಭ ಕಳ್ಳತನ, ಇತ್ಯಾದಿ ದುರ್ಗುಣಗಳಿಲ್ಲದವರಾಗಿರಬೇಕು. ಅವರು ಸದ್ಗುಣ ಸಂಪನ್ನ ರೂ, ಜ್ಞಾನಿಗಳೂ ಆಗಿರತಕ್ಕದ್ದು. ಅಂಥಗುರುಗಳಿಂದ ಉಪದೇಶವನ್ನು ಹೊಂದುವ ಶಿಷ್ಯನು ದುಷ್ಟ ಗುಣಗಳಿಲ್ಲದವನಾಗಿಯೂ ಗುರುಭಕ್ತಿಯುಳ್ಳವನಾಗಿ ಇರಬೇಕು. ಉಪಾಸನೆಯು ಗುಣಗಳ ಬದಲಾವಣೆಗಳಿಂದ ಮೂರು ವಿಧ ದಾಗಿರುತ್ತದೆ, ಭಗವಂತನ ಅವತಾರಗಳು ಲೋಕದಲ್ಲಿ ಅನಂತವಾಗಿದ್ದರೂ ರನ-ಇ) ನರಗಳ ಮುಖsಂದವುಗಳೆಂದು ಹಿಂದೆ ಹೇಳಿರುವನು. ಸಕೋಪಾಸಕರು ಅಂಥಾ ಮೂರ್ತಿಗಳನ್ನು ಆರಾಧನೆಮಾಡುವರು. ಅವೆ ಗಳಲ್ಲ ಕಾಮೋಪಾಸನೆಯು ಶ್ರೇಷ್ಠವಾದದ್ದು, ಗುರುಗಳು ಉಪದೇಶಿಸಿದ ಮಂತ್ರವನ್ನು ಪ್ರತಿದಿವಸವೂ ಜಪಮಾಡುತ್ತಿರಬೇಕು. ಆ ಮಂತ್ರವು ಎರಡು ಅಕ್ಷರ ಗಳಿಂದ ಹದಿನೈದು ಅಕ್ಷರಗಳವರೆಗೂ ಇರುವದು, ರಮಣೀಯರಾದ ಶ್ರೀ ರಮ ಮತಿಯನ್ನು ಒಂಬತ್ತು ವಿಧವಾದ ಪುಷ್ಪಗಳಿಂದ ಪೂಜಿಸಬೇಕು. ಅದಲ್ಲದೆ ಶ್ರೀ ದುಮೂರ್ತಿಯನ್ನು ಅರ್ಭ್ಯ, ಪಾದ್ಯ, ಮಧುಪರ್ಕ, ಅಭಿಷೇಕ, ಸ್ನಾನ, ಪೀತಂಬರ, ಬ್ರಹ್ಮ ಸೂತ್ರ ಅಲಂಕಾರ, ಚಂದನ, ತುಲಸೀವಿ, ಧೂಪ, ದೀಪ,