ಪುಟ:ಶ್ರೀ ಮದಾನಂದ ರಾಮಾಯಣ.djvu/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದಾನಂದ ಮಯಣ, ಹೋಗಿ ಶ್ರೀ ವಾದಿಗಳನ್ನು ಎಬ್ಬಿಸಿಕೊಂಡು, ನಾನು ಹೊರಡುವೆನು ಎಂದು ಹೇಳಿ ಒಳಕ್ಕೆ ಪ್ರವೇಶಮಾಡಿ, ದೇವತಾರ್ಚನೆಯ ಸಾಮಾನುಗಳನ್ನೂ, ದೇವರ ನ್ಯೂ ಸ್ವೀಕರಿಸಿ ಕೈಯಲ್ಲಿ ಒಂದು ಕೋಲನ್ನು ತೆಗೆದುಕೊಂಡು ಹೊರಕ್ಕೆ ಬಂದ ನು. ಆ ನೀಚರು ಇವನು ಹುಚ್ಚನಿರಬಹುದೆಂದು ತಿಳಿದು ಒಳಕ್ಕೆ ಪ್ರವೇಶಿಸಿದರು. ಆ ಬ್ರಾಹ್ಮಣನು ಅತಿ ಪ್ರಯಾಸದಿಂದ ಹೊರಕ್ಕೆ ಬಂದು ನಿಂತು, ಮಳೆಯ ಹೊಡ ತವನ್ನು ತಡೆಯಲಾರದೆ, ಮನಸ್ಸಿನಲ್ಲಿ ಈ ಮಾರುತಿಯ ಪರಾಕ್ರಮವನ್ನು ಪರಿಣ ಗಳಲ್ಲಿ ಬಹಳವಾಗಿ ವರ್ಣಿಸಿರುವರು. ಅದರೆ ಇಂಥಾ ಸಮಯದಲ್ಲಿ ಅದೇನೂ ಉಪಯೋಗಕ್ಕೆ ಬರಲಿಲ್ಲ' ಎಂದು ತಿಳಿದು ಕೈಯಲ್ಲಿರುವ ಸಾಮಾನುಗಳನ್ನು ಕಳ ಗಿರಿಸಿ ಪೆಟ್ಟಿಗೆಯಲ್ಲಿ ರುವ ಅಂಜನೇಯನ ಬಾಲವನ್ನು ಹಿಡಿದು ಮೇಲಕ್ಕೆ ಎಸೆದನು, ಅಷ್ಟರೊಳಗೆ ಆಕಾಶದಲ್ಲಿ ಭಯಂಕರವಾದ ಧ್ವನಿಯುಂಟಾಯಿತು. ಅದನ್ನು ಕೇಳಿ oಜನ ಸೇನಾಜಿನಗಳು, ಕುದುರೆ, ಆನೆ ಇವೆಲ್ಲ ಮೂರ್ಛಹೊಂದಿದವು. ಆ ಗ್ರಾಮದಲ್ಲಿ ಒಬ್ಬ ಪುರುಷನಾದರೂ ಉಳಿಯಲಿಲ್ಲ, ಮಾರುತಿಯ ಹಾಗು ಶ್ರೀರಾಮು ನ ಕೃಪೆಯಿಂದ ಆ ಬ್ರಾಹ್ಮಣಪುತ್ರನು ಮಾತ್ರ ಬದುಕಿದ್ದನು, ಆ ಗ್ರಾಮದಲ್ಲಿರುವ ಸ್ತ್ರೀಯರೆಲ್ಲರೂ ತಮ್ಮ ಪತಿಗಳು ಮೃತರಾಗಿರುವದನ್ನು ನೋಡಿ ಗಾಬರಿಗೊಂಡ ರು. ಆ ಬ್ರಾಹ್ಮಣವತ್ರನು ಮಾತ್ರ ಬದುಕಿರುವನೆಂದು ಕೇಳಿ, ಅಲ್ಲಿಗೆ ಬಂದರು. ಆ ಸ್ತ್ರೀಯರು ಕೆಸರಿನಲ್ಲಿ ಬಿದ್ದಿರುವ ಮಾರುತಿಯನಿಗ್ರಹವನ್ನೂ, ಅದರ ಹತ್ತರ ಛಳಿಯಿಂದ ನಡುಗುತ್ತ ನಿಂತಿರುವ ಬ್ರಾಹ್ಮಣಪುತ್ರನ್ನೂ ನೋಡಿ ಆಶ್ಚರ್ಯಗೊಂಡ ರು, ಮತ್ತು ಆ ತರುಣಿಯರು 'ಹೇ ಬ್ರಾಹ್ಮಣೋತ್ತಮನೆ, ಇದೇನು? ಅಷ್ಟು ಛಳಿ ಗಲದಲ್ಲಿ ನಡುಗುತ್ತ ಹೊರಗೆ ನಿಂತಿರುವೆಯಲ್ಲ' ಎಂದು ಕೇಳಿದರು, ಆ ಬ್ರಾಹ್ಮಣ ನು ತ್ರಿ ನಡೆದ ಸಂಗತಿಯನ್ನೆಲ್ಲ ಹೇಳಿದನು. ಬಳಿಕ ಆ ಸ್ತ್ರೀಯರು ಆ ರಾಮ ಭಕ್ತನನ್ನು ತಮ್ಮ ರಾಜ್ಯಕ್ಕೆ ರಾಜನಾಗುವಂತೆ ಪ್ರಾರ್ಥಿಸಿದರು. ಶ್ರೀ ರಾಮನ ಅಪಘ್ನಯಂತ ಆ ಬ್ರಾಹ್ಮಣನು ರಾಜನಾಗಲು ಒಪ್ಪಿಕೊಂಡನು. ಅನಂತರ ಆ ಕಾರುಭಕ್ತನು ಸಮಸ್ತ ಸ್ತ್ರೀಯರಿಗೂ ರಾಜನಾದನು. ಇರಲಿ, ಆ೦ಜ್ಯದಲ್ಲಿ ಸ್ತ್ರೀಯರೇ ರಜ್ಯಕಾರ್ಯವನ್ನು ನಡಿಸುವoದ್ದರಿಂದ ರಾಜ್ಯವೆಂದು ಹೆಸರು ಬಂತು ಆ ಬ್ರಾಹ್ಮಣನಿಗೆ ಮುಂದೆ ವಿಷ್ಣುಲೋಕವೇ ಪ್ರಸ್ತವಾಯಿತ್ತು ಆದ ರಿಂದ ಕಾಮೋಪಾಸನೆಯನ್ನು ಅಶಕ್ತನಾದರೂ ಭಕ್ತಿಯಿಂದ ಮಾಡಿದರೆ ಪರರು ಫಲವನ್ನು ಹೊಂದುವನು