ಪುಟ:ಶ್ರೀ ಮದಾನಂದ ರಾಮಾಯಣ.djvu/೩೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Sg ಶ್ರೀಮದಾನಂದ ರಾಮಾಯಣ, ದಣಿದು ಒಂದು ದುರದಕೆಳಗೆ ಕುಳಿತನು ಹಸಿವೆ ಬಾಯಾರಿಕಗಳಿಂದ ಕಳಕಳಿ ಕುತ್ತಿರುವ ಶ್ರೀರಮನ ಬಳಿಗೆ ಒಬ್ಬ ಶಬರಿಯು ಓಡಿಬಂದಳು ಮತ್ತು ಶ್ರೀರ ಮನನ್ನು ಉಡುಪಗಳಿಂದ ರಾಜನೆಂದು ತಿಳಿದು ನಮಸ್ಕರಿಸಿದಳು. ಶ್ರೀರಾಮನು ತನ್ನ ಸ್ಥಿತಿಯನ್ನು ಅಕಗೆ ತಿಳುಹಿದನು ಈ ವಚನವನ್ನು ಕೇಳಿ ಆಶಬರಿಯು (ರಜಿ, ಅಲ್ಲಿಗೆ ಸಮೀಪದಲ್ಲಿ ಒಂದು ದುರ್ಗಾದೇವಲಯವದ, ಈ ದಿವಸ ಮಂಗಳವರ ವಾದ್ದರಿಂದ ಸಾವಿರಾರು ಜನ ಭಕ್ತರು ದೇವಿಯ ಸೇವೆಗಾಗಿ ಬರುವರು. ನಾವು ಅಲ್ಲಿಗೆ ಹೋದರೆ ಮೃಷ್ಟಾನವು ದೊರೆಯುವದು” ಎಂದಳು. ಈ ಮಾತುಗಳನ್ನು ಕೇಳಿ ಶ್ರೀರಾಮನು ಸೀತೆ, ಲವ, ಕುಶ ಇತ್ಯದಿಗಳ ಹಾದಿಯನ್ನು ಕಾಯುತ್ತಿ ನಾನು ಅಲ್ಲೇ ಕುಳಿತಿರುವೆನು, ನೀನು ಹೋಗಿ ಆ ಪರಿಷೆಗೆ ಬಂದ ಜನರಿಗೆ ನನ್ನ ಸ್ಥಿತಿಯನ್ನು ತಿಳುಹು, ಅಂದರೆ ನಿನಗೆ ಅನ್ನ ದೊರೆಯುವದು ಎಂದು ಹೇಳಿದನು. ಆತರುಣಿಯು ಶ್ರೀಂಖವನ ಅಪ್ಪಣೆಯನ್ನು ಹುರ್ಗ ದೇವಾಲಯಕ್ಕೆ ಬಂದ ಸ್ತ್ರೀಯ ರಿಗೆತಿಳುಹಿದಳು. ಅವರು ಪರಧನಂದದಿಂದ ದುರ್ಗಾಪೂಜೆಯನ್ನು ಮುಗಿಸಿ ಕೊಂಡುಕಮನ ಕಡೆಗೆ ಹರಡಬೇಕೆಂದು ನಿಶ್ಚಯಿಸಿದರು. ಮತ್ತು ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ದುರ್ಗಾಪೂಜೆಗಾಗಿ ಹೊರಟರು, ದೇವಾಲಯ * ಹೋಗುವಲ್ಲಿ ದೇವಾಗಾರದ ಬಾಗಿಲುಗಳೆಲ್ಲಾ ಮುಚ್ಚಿಕೊಂಡಿದ್ದವು. ಇದನ್ನು ನೋಡಿ ಆ ಸ್ತ್ರೀಯರಿಗೆ ಬಹಳ ಆಶ್ಚರ್ಯವಾಯಿತು. ಅಷ್ಟರಲ್ಲಿ ಒಳಗಿನಿಂದ ದೇ ವಿಯು “ಹೇ ಶ್ರೀಯರ, ಮೊದಲು ಶ್ರೀರಾಮನನ್ನು ತೃಪ್ತಿಗೊಳಿಸಿರಿ, ಅನಂತರ ನಾನು ನೈವೇದ್ಯವನ್ನು ಸ್ವೀಕರಿಸುವೆನು. ನಾನು ಸೀತೆಯಾಗಿರುವನು. ಪರ ಮೇಶ್ವರನೇ ರಾಮನಿರುವನು, ಆದಕಾರಣ ಆತನಿಗಿಂತ ಮೊದಲು ನಾನು ನೈವೇ ದೃವನ್ನು ಸ್ವೀಕರಿಸಲಾರನು ” ಎಂದು ಕೂಗಿ ಹೇಳಿದಳು. ಈ ಮಾತುಗಳನ್ನು ಕೇಳಿ ಆ ಸ್ತ್ರೀಯರು ಶ್ರೀರಂಗನ ಕಡೆಗೆ ಬಂದರು ನಾನಾ ವಿಧವಾದ ಭಕ್ಷ ಭೋಜ್ಯಗಳಿಂದ ತುಂಬಿದ ಪತ್ರಗಳನ್ನು ಶ್ರೀರಾಮನ ಎದುರೆಗೆ ಇರಿಸಿ ಸ್ವೀಕರಿಸಿ ಬೇಕೆಂದು ಪ್ರಾರ್ಥನೆ ಮಾಡಿದರು ಅಗ ಶ್ರೀರಾಮನು ತರುಣಿಯರೇ, ನಿಮ್ಮ ದೇವಿಯು ನಿಮಗೇನು ಹೇಳಿದಳು. ಅದನ್ನು ನನಗೆ ಮೊದಲು ಹೇಳಿರಿ ಎಂದನು ಬಳಿಕ ಆ ಲಲನೆಯರು ಸಮಸ್ತ ವೃತ್ತಾಂತವನ್ನು ತಿಳುಹಿದರು. ಈ ಮೂರುಗಳನ್ನು ಕೇಳಿ ಶ್ರೀಮನು 'ನಿಮ್ಮ ದೇವಿಯಮಾತು ಸತ್ಯವಾಗಿದ್ದರೆ ಆಕೆಯು ಇಲ್ಲಿಗೆ ಬರಬೇಕು ಎಂದು ಈ ವಚನವನ್ನು ಸ್ತ್ರೀಯರು ದೇವಿಗೆ ಕಳುಹಿದರು, 3 ಕಂತುಗಳನ್ನು ಕೇಳಿ ಹೇವಿಯು ಸೀತಯ ರೂಪದಿಂದ ಹೊರಗೆಬಂದು, ಶನ