ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾದ್ರೂಷಣ, ಮಡುವದನ್ನು ಕಂಡು ಮೋದ ಕಟ್ಟು ಪ್ರಸನ್ನನಾದನು, ಆಗ ಸಮರ್ಥರು ತಮ್ಮ ಅಪೇಕ್ಷೆಯನ್ನು ಅವನಿಗೆ ತಿಳಿಸಲಾಗಿ ಅವನು ಅವರಿಗೆ ಶ್ರೀ ರಾಮಚಂದ್ರ ದೇವರ ದರ್ಶನವನ್ನು ಮಾಡಿಸಿದನು. ಬಳಿಕ ಶ್ರೀ ರಾಮಚಂದ್ರ ದೇವರು ಸಮರ್ಥರಿಗೆ ಶಕೆ ೧೫೩೮ ರಲ್ಲಿ “ಭೂಮಿಯ ಮೇಲೆ ಮೇ೦೮ರ ಹಾವಳಿಯು ಹೆಚ್ಚಾಗಿರುವದ ರಿಂದ ನೀವು ವೈರಾಗ್ಯವೃತ್ತಿಯಿಂದ ಕೃಷ್ಣಾ ತಟಾಕದಲ್ಲಿದ್ದು ಕೊಂಡು ಉಪಾಸನೆ ಮತ್ತು ಜ್ಞಾನಗಳನ್ನು ಹೆಚ್ಚಿಸಿ ಜಗದುದ್ದಾರ ಮಾಡಬೇಕು, ಎಂತ ಆಜ್ಞಾಪಿ ಸಿ ಅಂತರ್ಧಾನವನ್ನು ಹೊಂದಿದರು. ಇgಲಾಸುರ್ಥರು ಒಮ್ಮಿಂದೊಮ್ಮೆ ಎಲ್ಲಿ ಹೋದರೆಂದು ಅವರ ತಾಯಿಯ ಅಣ್ಣನೂ ಶೋಧ ಮಾಡತೊಡಗಿದರು, ಎಲ್ಲಿ ರೂ ಅವರ ಶೋಧವಾಗಲಿಲ್ಲ. ಸಮರ್ಥರ ತಾಯಿಯು ತನ್ನ ಪ್ರಿಯ ಬಾಲಕನು ತನ್ನನ್ನು ಅಗಲಿ ಹೋದನೆಂದು ಬಹಳವಾಗಿ ರೋದನ ಮಾಡಹತ್ತಿದಳು, ಆಗ ಇವ ರ ಅಣ್ಣನು ಇವರ ಶೋಧಾರ್ಥವಾಗಿ ಹೊರಟು ಮಾರುತಿಯ ದರ್ಶನ ತೆಗೆದುಕೊ೦ ಡು ಮುಂದಕ್ಕೆ ಹೊರಡಬೇಕೆಂದು ಆಲೋಚಿಸಿ ಅಲ್ಲಿಗೆ ಬರುವಷ್ಟರಲ್ಲಿ ಸಮರ್ಥರ ನ್ನು ಕಂಡನು. ಆಗ ಸಮರ್ಥರ ಮೋರೆಯ ಮೇಲೆ ಮಿಂಚುತ್ತಿದ್ದ ದಿವ್ಯತೇಜಸ ನ್ನು ಕಂಡು ಇವರಿಗೆ ಭಗವಲ್ಪ ಸದವಾಗಿರಬಹುದೆಂದು ತರ್ಕಿಸಿದನು. ಇಷ್ಟರ ಲ್ಲಿ ಸಮರ್ಥರು ಅಲ್ಲಿ ಸಂಭವಿಸಿದ ಯಾವತ್ತು ವೃತ್ತಾಂತವನ್ನು ಅವನಿಗೆ ವಿಶದವಾಗಿ ತಿಳಿಸಿದರು. ಬಳಿಕ ಇಬ್ಬರೂ ತಮ್ಮ ಮಾತೋಶ್ರಿಯ ಸಂದರ್ಶನಕ್ಕೆ ಹೊರಟು ಬಂದು ಪುತ್ರವಿರಹದಿಂದ ಬಳಲುತ್ತಿದ್ದ ದೇವಿಗೆ ಎಲ್ಲ ಸಂಗತಿಗಳನ್ನು ಕೃತಗೊಳಿಸಿ ಆ ನಂದ ಪಡಿಸಿದರು. ಲಗ ಮಂಟಪದಿಂದ ಓಡಿ ಹೋದದು-ಸಮರ್ಥರ ಚಹಾದ ರ ಊಬಾಯಿಯು ತನ್ನ ಉಭಯ ಮಕ್ಕಳ ಲಗ್ನವನ್ನು ಬೇಗನೆ ಮಾಡಿಬಿಡಬೇಕೆಂದು ಆಲೋಚಿಸಿ ಸಮರ್ಥರ ಮುಂದೆ ಅಗ್ನದ ಸುದ್ದಿಯನ್ನು ಮಾತಾಡಹತ್ತಿದ ಕೂಡಲೆ ಸಮರ್ಥರು ಖಿನ್ನವದನರಾಗಿ ಕೂಡ್ರುತ್ತಿದ್ದರು, ಒಮ್ಮೊಮ್ಮೆ ಅವರು ಅಗ್ಗದ ಸುದ್ದಿಯನ್ನು ಕಿವಿಯಿಂದ ಕೇಳಿ ಸಿಟ್ಟಿಗೇಳುತ್ತಿದ್ದರು, ಒಂದು ಸಾರೆ ಸಿಟ್ಟಿಗೆದ್ದು ಅಡವಿಯಲ್ಲಿ ಓಡಿ ಹೋಗಿ ಗಿಡದ ಮೇಲೆ ಕೂತುಕೊಂಡಿದ್ದರು! ಆಗ ಯcಂದ ಈ ನಡುವೆ ಸಮಾಧಾನ ಹೇಳಲಿಕ್ಕೆ ಹೋದರೆ ಅವರು ಅವರ ಮೇಲೆ ಕಲ್ಲೆಸೆಯು ತಿದ್ದರು. ಶ್ರೇಷ್ಠನು ತಾನೇ ಹೋಗಿ ಸಮರ್ಥರನ್ನು ಒಡಂಬಡಿಸಿ ಮನೆಗೆ ಮರ ಳಿ ಕರೆದುಕೊಂಡು ಬಂದನು. ಒಂದು ಸಾರೆ ಇವರ ತಾಯಿಯು ತಾವು ಹೇಳಿದ ತ ಕೇಳಬೇಕೆಂದು ಇವರ ಕಡೆಯಿಂದ ವಚನ ತೆಗೆದುಕೊಂಡಳು, “ಲಗ್ನದ ಅಂ ತರ್ಪಟ ಹಿಡಿಯುವತನಕ ಗಟ್ಟಿ ಮನಸ್ಸು ಮಾಡಿ ಬಾಯಿಂದ ಒಲ್ಲೆನಬೇಡ ಎಂ ದು ಹೇಳಿದಳು, ಅದಕ್ಕೆ ಇವರು ಯಾಕಾಗಲೊಲ್ಲದು ಎಂದು ಒಡಂಬಟ್ಟರು