ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೋಕುಲನಾಥ ೩೬೫ ಅನ್ನು ತೋದಯ:-ಇದು ೫ ಅಂಕಗಳುಳ, ನಾಟಕ, ಕೃಷ್ಣ ಮಿಶನ ಪ್ರಬೋಧಚಂದ್ರೋದಯದ, ಶ್ರೀವೇಂಕಟನಾಥನ ಸಂಕಲ್ಪ ಸೂಯ್ಯೋದಯದ ವರ್ಗಕ್ಕೆ ಸೇರಿದುದು, ಅದ್ರೆ ತವು ನಾಟಕಕಥಾವಸ್ತು, ಸಂಸಾರವೆಂಬ ನಾಟಕಕ್ಕೆ ಸೃಷ್ಟಿ ವ್ಯಾಪಾರವೇ ಅಂಗ, ಪ್ರಳಯವೇ ಅದರ ಉಪರಮಾ, ಜೀವನೇ ನಟನು, ಈ ಪ್ರಪಂಚವೇ ರಂಗಸ್ಥಳ, ತಳಯಾನಂತರ ಜೀವವೆಂಬ ನಟನಿಗೆ ವೃತ್ತಿನಿರೋಧದ ಮೂಲಕ ನಿಷ್ಕಾಮವು ಉಂಟಾಗುವುದು, ಇವೇ ಮೊದಲಾದವನ್ನು ಹೇಳಿ ಸಮಾಧಿ ಯಲ್ಲಿ ಈಶ್ವರನ ಸಾಕ್ಷಾತ್ಕಾರವನ್ನು ಹೇಗೆ ಹೊಂದಬಹುದೆಂಬ ವಿಚಾರವನ್ನು ರೂಪಕದಲ್ಲಿ ಬರೆದು ತೋರಿಸಿರುವನು, ಗ್ರಂಥಾಂತ್ಯದಲ್ಲಿ ಭರತವಾಕ್ಯರೂಪವಾದ ಆಸ್ವರ್ಗನ ಹೇಳಿಕೆಯು ಹೀಗಿರುವುದು:- ಸಂಸಾರಾತ್ಸಾಪ್ಯ ನಿರ್ವದಂ ಸರ್ವೆ ನಿರ್ವಾಣಲಿಯಾ ಶ್ರವಣಾನ್ಮನನಾಧ್ಯನಾಸ್ಪಶ್ಯಂತುಪುರುಷೋತ್ತಮಂ || ಅತ್ಯಂತ ದುರವಗಾಹವಾದ ವಿಷಯವನ್ನು ಸಕಲರಿಗೂ ತಿಳಿಯುವಂತೆ ಬರೆಯುವ ದಕ್ಷತೆಯು ಸುಲಭಸಾಧ್ಯವಾದುದಲ್ಲ. ಈ ಗ್ರಂಥದ ವಿಚಾರವಾಗಿ ಕವಿಯು:- ಲಲಿತಪದನಿಬದ್ದ ಭಾವಗಂಭೀರ್ದುಗೂಢಂ ಚರಮಚರಪದಾರ್ಧಾರ್ಣಯಂತಂಮನೋಜ್ಞರ ಬಹುವಿಧ ಪರಂನಾಟ್ಯ ಕಾಪಪ್ಪಂ ಕರಿನನಪಿಸುಬೋಧಂ ಸದ್ಯ ನಾವೀಕ್ಷ ಯಂತು ಎಂದು ಹೇಳಿಕೊಂಡಿರುವುದು ಕಂಡುಬರುವುದು. ಮಾದರಿಗಾಗಿ ಕೆಲವು ಶ್ಲೋಕಗಳು:- ಕನ್ನಾರತ್ನಂ ಹಯಪರಿವೃಡಂ ನಾಗರಾಜಂ ಮನಾಂ ಶ್ರೇಷ್ಠಂ ದತ್ವಾ ವಿಬುಧಪರಿಷತ್ತೋಪಿತಸಗರೇಣ ಧಿಕ್ಕರಿದ್ರ ಪರಿಭವಪದಂ ಯಸ್ಯ ದೋಷಾತ್ಪುರಾರೇ ರ್ಮೂಧಿ್ರ … ಶ್ರೀ ವಿಬುಧವಿವಸಗ್ರಾಸಪಿಂಡಸ್ಯ ಖಂಡಃ ೩೩. (ಸಮುದ್ರಮಥನಕಾಲದಲ್ಲಿ ಸಮುದ್ರರಾಜನಿಂದ ದೇವತೆಗಳು ಲಕ್ಷ್ಮಿ ಉಚೈಶ್ರವಸ್ಸು, ನಾಗರಾಜ, ಚಿಂತಾಮಣಿ (ಅವರವರಿಗೆ ಬೇಕಾದವು) ಗಳನ್ನು ಹೊಂದಿ ಸಂತೋಷಪಡಿಸಲ್ಪಟ್ಟರಾದರೂ, ಈಶ್ವರನ ದೋಷದಿಂದ ಚಂದ್ರಖಂಡವು (ಚಂದ್ರನ ಒಂದುಚೂರು ಮಾತ್ರವೇ!) ಈಶ್ವರನ ತಲೆಯಲ್ಲಿಡಲ್ಪಟ್ಟಿತೋ ಅಂತಹ ದಾರಿದ್ರಕ್ಕೆ ಧಿಕ್ಕಾರವಿರಲಿ.