ಪುಟ:ಸುವರ್ಣಸುಂದರಿ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾದುವು ನದಿಗೆ ಹೋಗಿ ಕೂಡಲೇ ಮೈಮೇಲಿನ ಬಟ್ಟೆಯನ್ನು ಕೂಡ ತೆಗೆಯದೆ ನೀರಿನಲ್ಲಿ ಮುಳುಗಿದನು ಕೂಡಲೆ ತಲೆಯನ್ನೆ ತ್ರಿ, • ಅಹಹ ಎಷ್ಟು ಆನಂದವಾಗಿದೆ ಈ ಸ್ಥಾನವು ಸುವಣಿ ಸ್ಪರ್ಶವನ್ನು ಸಂಪೂರ್ಣವಾಗಿ ನಾಶಪಡಿಸಿರಬಹುದು. ಇರಲಿ, ಈ ಪಾತ್ರೆಯಲ್ಲಿ ನೀರು ತುಂಬಿಕೊಳ್ಳುವ' ಎಂದು ಆ ಹೂಜಿ ಯಲ್ಲಿ ನೀರನ್ನು ತುಂಬಿಕೊಂಡನು ಹೀಗೆ ನೀರು ತುಂಬಿಕೊಳ್ಳು ವುದಕ್ಕೆ ಪಾತ್ರೆಯನ್ನು ಅದ್ದಿದ ಕೂಡಲೆ ಅದು ಪೂರ್ವದ ಮಣ್ಣನ ಪಾತ್ರಯಾಯಿತು, ಅದನ್ನು ನೋಡಿ ಸುವರ್ಣಶೇಖರನು ಆನಂದ ಪರವಶನಾದನು, ಮನಸ್ಸಿನಲ್ಲಿ ಯೂ ಸಹ ಒಂದು ಬಗೆಯ ಭಾರವು ಕಡಿಮೆಯಾದಂತಾಯಿತು ಅಲ್ಲಿಂದ ಆತನು ಅಲ್ಲಿಯೇ ಬೆಳದಿದ್ದ ಗಿಡಬಳ್ಳಿಗಳ ಒಳಿಗೆ ಹೋಗಿ ಹೂ ಕಾಯಿಗಳನ್ನು ಮುಟ್ಟಿದನು ಅವು ಸ್ವಲ್ಪವೂ ವ್ಯತ್ಯಾಸ ಹೊಂದದೆ ಮೊದಲಿನಂ ತಯೇ ಇದ್ದು ವೂ ಅದರಿಂದ ತನಗೆ ಪ್ರಾಪ್ತವಾಗಿದ್ದ ಸುವರ್ಣ ಸ್ಪರ್ಶದ ಪಾಪವು ಬಿಡುಗಡೆಯಾಯಿತೆಂದು ಧೈರ್ಯಮಾಡಿ ಕೊಂಡು ಅಲ್ಲಿಂದ ಅರಮನೆಗೆ ಅವಸರವಸರದಿಂದ ಹೊರಟನು. ಹೀಗೆ ಸುವರ್ಣಶೇಖರನು ಮಣ್ಣಿನ ಪಾತ್ರೆಯಲ್ಲಿ ನೀರು ತರುತ್ತಿ ದ್ದುದನ್ನು ನೋಡಿ ಅರಮನೆಯ ಚಾಕರರೆಲ್ಲರೂ ವಿಸ್ಮಿತರಾದರು. ಅರಸನು ಅರಮನೆಗೆ ಬಂದಕೂಡಲೆ ಆ ನೀರನ್ನು ತನ್ನ ಮುದ್ದು ಗುವರಿಯ ಮೇಲೆ ಪ್ರೋಕ್ಷಿಸಿದನು ತಕ್ಷಣವೇ ಚಿನ್ನದ ಪ್ರತಿಮೆ ಯಂತಿದ್ದ ಸುವರ್ಣಸುಂದರಿಯ ಕೆನ್ನೆ ಗಳು ಗುಲಾಬಿ ಹೂವಂತೆ ಬಣ್ಣ ಹೊಂದಿ ಕೈಕಾಲುಗಳು ಅಲುಗಲಾರಂಭಿಸಿದುವು ಇನ್ನೂ ನೀರನ್ನು ಎರಚಲು, “ಅಯ್ಯೋ, ತಂದೆಯೆ, ಇದೇನು, ಹೀಗೆ ನೀರು ಹಾಕುವೆ? ಈ ಹೊತ್ತು ತಾನೇ ಹಾಕಿಕೊಂಡ ಪಾವು ಡೆಯು ಕೆಟ್ಟು ಹೋಯಿತಲ್ಲಾ! ಎಂದಳು ಅವಳಿಗೆ ಬೇರೇ ತಾನು ಚಿನ್ನದ ಪ್ರತಿಮೆಯಾಗಿದ್ದು ದು ಗೊತ್ತಾಗಲಿಲ್ಲ; ತಾನು