ಪುಟ:ಸುವರ್ಣಸುಂದರಿ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕ್ಕೊಂದು ತಗಲುವುದರಿಂದ ಹುಟ್ಟುವ ಶಬ್ದ ಹೊರತು ಮತ್ತಾ ವುದೂ ಬೇಕಾಗಿರಲಿಲ್ಲ ಆಶಾಪಾಶಕ್ಕೆ ಸಿಕ್ಕಿದ ಸುವರ್ಣಶೇಖರನಿಗೆ ಮನಸ್ಸಿನ ಸ್ಥಿತಿಯೇ ಬದಲಾಯಿಸಿ ಹೋಯಿತು ಚಿನ್ನ ವನ್ನು ವಿನಾ ಮತ್ತಾವುದನ್ನಾದರೂ ಮುಟ್ಟಬೇಕಂದರ ಅವನಿಗೆ ಮನಸ್ಸು ಬರು ತಿರಲಿಲ್ಲ ಅಂತಹ ಪದಾರ್ಧಗಳನ್ನು ತಲೆಯೆತ್ತಿ ನೋಡಬೇಕೆಂ ದರೂ ಅವನಿಗೆ ಜುಗುಪ್ಪೆಯಾಗುತ್ತಿದ್ದಿತು ಈ ಒಗೆಯ ಹುಚ್ಚು ಹಿಡಿದಮೊದಲು ಸುವರ್ಣ ಶೇಖರನು ತನ್ನ ಅರಮನೆಯ ನೆಲಮಾಳಿಗೆ ಯಲ್ಲಿದ್ದ ಗಾಢಾಂಧಕಾರವಾದ ಕೊರಡಿಯಲ್ಲಿಯೇ ಹೆಚ್ಚು ಕಾ ವನ್ನು ಕಳೆಯುತ್ತಿದ್ದನು ಆತನ ಐಶ್ವರ್ಯವೆಲ್ಲವೂ ಆ ಕೊರಡಿ ಯಲ್ಲಿದ್ದಿತು ಸಂತೋಷಪಡಬೇಕೆಂದು ತನಗೆ ತೋರಿದಾಗಲೆಲ್ಲಾ ಆ ಕೊರಡಿಗೆ ಹೋಗಿ, ಪಟ್ಟಿಗೆಗಳ ಬಾಗಿಲುಗಳನ್ನು ತೆಗೆದು, ಸುವ ರ್ಇದ ನಾಣ್ಯಗಳನ್ನೆಲ್ಲಾ ರಾಶಿಹಾಕಿಕೊಂಡು ಅದರಲ್ಲಿಯೇ ತನ್ನ ಕಯ್ಯ ಳನ್ನು ಆಡಿಸುತ್ತಿದ್ದನು ಇದೂ ಅಲ್ಲದೆ, ತನ್ನ ಕಯ್ಕೆ ಸಿಕ್ಕಿದ ಚಿನ್ನದ ಪ್ರತಿಯೊಂದು ಪದಾರ್ಥವನ್ನೂ ಕೂರಡಿಯೊಳಕ್ಕೆ ಒಂದು ರಂಧ್ರಮೂಲಕ ಬೀಳುತ್ತಿದ್ದ ಸೂರ್ಯನ ರಶ್ಮಿಯ ಬೆಳ ಕಿಗೆ ಪದೇ ಪದೇ ತಂದು ಹಿಡಿದು ಅದರ ಪ್ರಕಾಶವನ್ನು ನೋಡಿ ಆನಂದಿಸುತ್ತಿದ್ದ ನು ಇಂತಹ ಆನಂದಕ್ಕೆ ಕಾರಣವಾಗಿದ್ದ ಸೂರ್ಯ ರಶ್ಮಿಯನ್ನು ಮಾತ್ರ ಅವನು ಶ್ಲಾಘನೆ ಮಾಡುತ್ತಿದ್ದನು , ಏಕೆಂದರೆ, ಇದಿಲ್ಲದಿದ್ದರೆ ಅವನ ಸುವರ್ಣ ಕ್ಕೆ ಹೆಚ್ಚಿನ ಕಾಂತಿ ಇರು ತಿರಲಿಲ್ಲ ಇದಾದಮೇಲೆ ಚೀಲದಲ್ಲಿರುವ ನಾಣ್ಯಗಳನ್ನು ಕೆಳಕ್ಕೆ ಸುರಿದು ಸುಮ್ಮನೆ ಎಣಿಸುತ್ತಿದ್ದನು ಇದೂ ಬೇಜಾರಾದರೆ ಒಂದು ಚಿನ್ನದ ಶಲಾಕೆಯನ್ನು ತೆಗೆದುಕೊಂಡು ಮೇಲಕ್ಕೆ ಎಸೆ ಯುವುದು,ಹಿಡಿದುಕೊಳ್ಳುವುದು, ಪುನಃ ಎಸೆಯುವುದು, ಹಿಡಿದು ಕೊಳ್ಳುವುದು-ಹೀಗೆ ಮಾಡುತ್ತಿದ್ದನು, ಅದೂ ಸಾಕಾದಗ