ಪುಟ:ಸುಶೀಲೆ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8 ಆ ೨4 ನಾನು ನಂಬಿರಲಿಲ್ಲ, ಬಾಲ್ಯದಿಂದಲೂ, ತಾಯ್ತಂದೆಗಳ ಶಿಕ್ಷಣೆಯಿಂದ ಬೆಳೆದು ಈವರೆಗೂ ತಮ್ಮ ಅನುಗ್ರಹದಿಂದ ಎಷ್ಟೋ ಸುಖವನ್ನನುಭವಿಸಿರುವೆನು, ನಾನು ಅಂತಹ ಅಭಿ ಸಂಧ: ನವನ್ನೇ ಮಾಡಬೇಕಾದುದಿಲ್ಲ ! ನೀವೇ ನನ್ನ ಜೀವನ ಸಲ್ಪಸ್ವ | ಇತರರು ಆರೋಪಿಸುತ್ತಿರುವ ದೋಷಗಳು ಒಂದು ವೇಳೆ ತಮ್ಮಲ್ಲಿದ್ದರೂ, ಅದನ್ನು ನಾನು ನಿಜವಾಗಿರತಕ್ಕುವಗ ಇಂದು ಭಾವಿಸಲಾರೆನು, ತಮ್ಮ ಕ್ಷೇಮಾಭವೊಂದಲ್ಲದೆ ಮತ್ತಾವುದೂ ನನಗೆ ಬೇಕಾಗಿಲ್ಲ, ಇನ್ನೇನನ್ನು ಹೇಳಲಿ? (ಸುಶೀಲೆಗೆ ಮುಂದೆ ಮಾತು ಹೊರಡದೆ ಕಣ್ಣುಗಳಲ್ಲಿ ನೀರು ತುಂಬಿತು, ಪತಿಯ ಮುಖವನ್ನು ನೋಡಿದಳು.) ಏನೂ -- (ತಲೆದೂಗಿ ಪರಿಹಾಸದಿಂದ ನಗುತ್ತೆ)-' ಮಾಯಾವಿನಿ ! “ ಅತಿವನಯಂ ಧೂರ್ತಲಕ್ಷಣಂ * ಎಂಬುದು ಸುಳ್ಳಲ್ಲ, ನಿನ್ನ ಆತ್ಮನು ಕಲುಷಿತನಾಗಿರುವನೆಂದು ನಿರ್ಧ ರವಾಗಿ ತಿಳಿದೆನು. ನೀನು ನನಗೆ ದ್ರೋಹವನಾ ಹರಿಸುತ್ತಿರುವೆಯೆಂಬುದನ್ನು ನನ್ನ ಪ್ರಿಯಜನರ ಬಾಯಿಂದ ಕೇಳಿ ತಿಳಿದೇ ಇಲ್ಲಿಗೆ ಬಂದಿರುವನು. ನನಗೆ ನಿನ್ನ ನಟನೆಯೊಂದ ರಚಿಸುವಂತಿಲ್ಲ, ” ಎಂದಾಡಿ ಭಯಂಕರವಾದ ಕೆಂಗಣ್ಣುಗಳೆo- ಒಮ್ಮೆ ಕೂರವಾಗಿ ಪತ್ನಿ ಯನ್ನು ನೋಡಿದನು, ಸುಶೀಲೆ-ಉಕ್ಕಿ ಸುರಿಯುತ್ತಿದ್ದ ಕಣ್ಣೀರನ್ನು ತಡೆದು, ಗದ್ಧ ದಸ್ವರ ದಿಂದ-* ಸ್ವಾಮಿನಾಥ ! ನನ್ನ ಮಾತನ್ನು ನಂಬಲಾರದವರು, ತಮ್ಮನ್ನು ತಾವೇ ನಂಬಲಾರದವರು, ತಮ್ಮ ಈ ಬಗೆಯ ಸಂಶಯಕ್ಕೆ ನಾನು ಎಷ್ಟು ಮಾತ್ರಕ್ಕೆ ಪಕ್ಕಾಗತಕ್ಕವಳಲ್ಲ ವೆ :ದು ದೃಢವಾಗಿ ತಿಳಿಯಿರಿ ! " ಎಂದು ಹೇಳುತ್ತಿದ್ದಂತೆಯ ಪತಿಯ ಪದತಲದಲ್ಲಿ ಬಿದ್ದಳು,